ಪರಂ ವಿಷ ಹೇಳಿಕೆಯನ್ನು ರಿಲೀಸ್ ಮಾಡಿ ಜೆಡಿಎಸ್‍ಗೆ ಬಿಜೆಪಿ ಪ್ರಶ್ನೆ

Public TV
1 Min Read
PARAM HDD

ಬೆಂಗಳೂರು: ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ಹಾಸನದಲ್ಲಿ ಜೆಡಿಎಸ್ ನವರು ಶಾಸಕರ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದರು. ಈ ಬೆನ್ನಲ್ಲೇ ಬಿಜೆಪಿಯವರು ಕೂಡ ಹಳೆಯ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ ದೋಸ್ತಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

2014ರಲ್ಲಿ ಜಿ. ಪಮೇಶ್ವರ್ ಅವರು ಕೊಟ್ಟಿರುವ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಇದನ್ನೇ ಬಿಜೆಪಿಯವರು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.

G PARAMESHWAR 1

ವಿಡಿಯೋದಲ್ಲೇನಿದೆ..?
ಕಾರ್ಯಕ್ರಮವೊಂದರಲ್ಲಿ ಜಿ. ಪರಮೇಶ್ವರ್ ಅವರು ಮಾತನಾಡುತ್ತಾ, 2013ರ ಚುನಾವಣೆಯ ಸಂದರ್ಭದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಅವರು ಒಂದು ಮಾತು ಹೇಳಿದ್ದರು. ಅದರ ಪೇಪರ್ ಕಟ್ಟಿಂಗ್ ಕೂಡ ಇಟ್ಟುಕೊಂಡಿದ್ದೀನಿ. ಕರ್ನಾಟಕದಲ್ಲಿ ಜನತಾ ದಳ ಅಧಿಕಾರಕ್ಕೆ ಬರುತ್ತದೆ. ನಾವೇ ಅಧಿಕಾರಕ್ಕೆ ಬರುತ್ತೇವೆ. ಒಂದು ವೇಳೆ ಬರದೇ ಇದ್ದರೆ, ವಿಷ ತೆಗೆದುಕೊಂಡು ಸಾಯುತ್ತೇವೆ ಎನ್ನುವ ಹೇಳಿಕೆಯನ್ನು ಕೊಟ್ಟಿದ್ದರು. ಇವತ್ತು, ನಾಳೆ ವಿಷ ತೆಗೆದುಕೊಳ್ಳುತ್ತಾರೆ ಎಂದು ನಾನು ಕಾಯುತ್ತಲೇ ಇದ್ದೇನೆ. ತೆಗೆದುಕೊಳ್ಳುತ್ತಾನೆ ಇಲ್ಲ ಅವರು. ಏನ್ ಮಾಡಬೇಕು ಹೇಳಿ ಎಂದು ಪರಂ ಹೇಳಿದಾಗ ಕಾರ್ಯಕ್ರಮದಲ್ಲಿದ್ದವರು ನಕ್ಕಿದ್ದರು.

BJP TWEET

ಬಿಜೆಪಿ ಟ್ವೀಟ್‍ನಲ್ಲಿ ಏನಿದೆ?
ಪರಂ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬಿಜೆಪಿ ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿಕೊಂಡು ಆಗಿಲ್ಲದ ಸಾವಿನ ರಾಜಕೀಯ ಈಗ್ಯಾಕೆ? ಪರಮೇಶ್ವರ್ ಮನೆ ಮೇಲೆ ಕಲ್ಲು ತೂರ್ತಾರಾ ಎಂದು ಪ್ರಶ್ನಿಸಿದೆ.

ಪ್ರೀತಂಗೌಡ ಹೇಳಿದ್ದೇನು?
ಬಿಎಸ್‍ವೈ ಆಪರೇಷನ್ ಕಮಲ ಮಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ `ಸೂರ್ಯ ಚಂದ್ರ ಇರೋವರೆಗೂ ಈ ರಾಷ್ಟ್ರೀಯ ಪಕ್ಷ ಇರುತ್ತದೆ. ದೇವೇಗೌಡರ ವಿಕೆಟ್ ಹೋಗಿ. ಕುಮಾರಣ್ಣನ ಹೆಲ್ತ್ ಇಲ್ಲ. ಹೋದತಕ್ಷಣ ಪಾರ್ಟಿ ಬರ್ಖಾಸ್ತು ಆಗುತ್ತದೆ ಎಂದು ಹೇಳಿದ್ದರು.

ರಾಜ್ಯ ರಾಜಕರಾಣದಲ್ಲಿ ನಡೆಯುತ್ತಿರೋ ಬೆಳವಣಿಗೆಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ..

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *