BJP ಸರ್ಕಾರ ಇನ್ನೆರಡು ತಿಂಗಳು ಮಾತ್ರ, ಅದಕ್ಕೆ ಪ್ರತಿಮೆ ಸ್ಥಾಪನೆ ಮಾಡ್ತಿದ್ದಾರೆ- ಡಿಕೆಶಿ

Public TV
1 Min Read
DK Shivakumar 1 1

ಬೆಂಗಳೂರು: ಚುನಾವಣೆ (Election) ಬರುತ್ತಿದೆ ಅಂತಾ ಬಿಜೆಪಿ (BJP) ಅವರು ತರಾತುರಿಯಲ್ಲಿ ಬಸವಣ್ಣ ಹಾಗೂ ಕೆಂಪೇಗೌಡರ ಪ್ರತಿಮೆಯನ್ನ ವಿಧಾನಸೌಧದಲ್ಲಿ (Vidhan Soudha) ನಿರ್ಮಾಣ ಮಾಡ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕಿಡಿಕಾರಿದರು.

ಪ್ರತಿಮೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai), ಮತ್ತು ಸಚಿವರಿಂದ ಶಂಕುಸ್ಥಾಪನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಸ್ವಂತ ಆಸ್ತಿಯಿಂದ ಪ್ರತಿಮೆ ಮಾಡಲಿ, ಒಳ್ಳೆ ಕೆಲಸ ಮಾಡಲಿ. ಚುನಾವಣೆ ಬಂತು ಅಂತ ತರಾತುರಿಯಲ್ಲಿ ಪ್ರತಿಮೆ ನಿರ್ಮಾಣ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಒಂದೇ ಕಡೆ ನಿಂತ್ರೆ ಬಲವಿಲ್ಲ; ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು – ಸಿದ್ದುಗೆ ರಾಜಕೀಯ ಭವಿಷ್ಯ ನುಡಿದ ಮನೆ ದೇವರು

BJP Election 4

ಕೆಂಪೇಗೌಡರು ಬೆಂಗಳೂರು ಕಟ್ಟಿದ್ದಾರೆ. ಬಸವಣ್ಣನವರು ನಾಡಿಗೆ ಒಳ್ಳೆ ಸಂಸ್ಕೃತಿ ಕಲಿಸಿಕೊಟ್ಟಿದ್ದಾರೆ. ಸರ್ಕಾರದ ಇಚ್ಚೆಯಂತೆ ಪ್ರತಿಮೆ ಮಾಡಲಿ. ಬಿಜೆಪಿ ಅವರು ಪ್ರತಿಮೆ ಮಾಡಲು ಬಹಳ ಅರ್ಜೆಂಟಾಗಿ ಇದ್ದಾರೆ ಅಂತ ಲೇವಡಿ ಮಾಡಿದರು. ಇದನ್ನೂ ಓದಿ: ಸಾಯಿಬಾಬಾ ದರ್ಶನಕ್ಕೆ ತರಳ್ತಿದ್ದ ಬಸ್ ಭೀಕರ ಅಪಘಾತ – 10 ಮಂದಿ ಸಾವು, 34 ಮಂದಿಗೆ ಗಾಯ

narendra modi kempegowda statue

ಬಿಜೆಪಿ ಅವರು ಆತುರವಾಗಿ ಎರಡು ತಿಂಗಳಲ್ಲಿ ಸ್ಥಾಪನೆ ಮಾಡ್ತೀವಿ ಅಂತಿದ್ದಾರೆ. ಬಿಜೆಪಿ ಅವರಿಗೆ ಗೊತ್ತಾಗಿದೆ ಎರಡು ತಿಂಗಳು ಮಾತ್ರ ಅವರ ಸರ್ಕಾರ ಇರೋದು ಅಂತ. ಹೀಗಾಗಿ ಪ್ರತಿಮೆ ಮಾಡಲು ಮುಂದಾಗ್ತಿದ್ದಾರೆ. ಬಿಜೆಪಿ ಅವರಿಗೆ ಶುಭವಾಗಲಿ ಅಂತ ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *