ಬೆಂಗಳೂರು: ರಾಹುಲ್ ಗಾಂಧಿ ಸಮ್ಮುಖದಲ್ಲಿ ತಮ್ಮನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುವುದು ಸಿದ್ದರಾಮಯ್ಯರ ಸಿದ್ದರಾಮೋತ್ಸವದ ಉದ್ದೇಶ. ಇದಕ್ಕಾಗಿಯೇ ರಾಹುಲ್ಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಲಕ್ಷಾಂತರ ಜನರ ಮೂಲಕ ಹೌದು ಹುಲಿಯಾ ಎಂದು ಬೊಬ್ಬೆ ಹಾಕಿಸಿ, ಪಪ್ಪುವನ್ನು ಬೆಚ್ಚಿ ಬೀಳಿಸುವುದು ಸಿದ್ದು ಬಣದ ಲೆಕ್ಕಾಚಾರ ಎಂದು ಸರಣಿ ಟ್ವೀಟ್ ಮಾಡಿ ಬಿಜೆಪಿ ಕಾಲೆಳೆದಿದೆ.
ಟ್ವೀಟ್ನಲ್ಲಿ ಏನಿದೆ:
ಕೆಪಿಸಿಸಿ ಕಚೇರಿಯಲ್ಲಿ ಪಿಸು ಮಾತು ಬಂದಾಗಲೇ ಡಿ.ಕೆ ಶಿವಕುಮಾರ್ ಎಚ್ಚೆತ್ತುಕೊಳ್ಳಬೇಕಿತ್ತು. ಸಿದ್ದರಾಮಯ್ಯ ಟೂಲ್ ಕಿಟ್ ಆಟ ಅದಾಗಲೇ ಶುರುವಾಗಿತ್ತು, ಅಮಾಯಕರ ತಲೆದಂಡವಾಯಿತಷ್ಟೇ. ಈಗ ಸಿದ್ದರಾಮಯ್ಯ ಮತ್ತೊಂದು ಸುತ್ತಿನ ಟೂಲ್ಕಿಟ್ ಪ್ರಹಸನ ಆರಂಭಿಸಿದ್ದಾರೆ, ಈ ಬಾರಿ ದೊಡ್ಡ ಬೇಟೆಯಾಡುವುದು ಖಚಿತ! ಇದನ್ನೂ ಓದಿ: ಬಿಎಸ್ವೈ ಕಂಡು ಕಣ್ಣೀರು ಹಾಕಿದ ರೇಣುಕಾಚಾರ್ಯ
ಸಿದ್ದರಾಮೋತ್ಸವ ಎನ್ನುವುದು ಮಾಜಿ ಮುಖ್ಯಮಂತ್ರಿ @siddaramaiah ಹಾಗೂ ಅವರ ಬಣದ ಪೊಲಿಟಿಕಲ್ ಟೂಲ್ ಕಿಟ್!
ಇದೊಂದು ವ್ಯವಸ್ಥಿತವಾದ ರಾಜಕೀಯ ಗುಪ್ತಮಾರ್ಗಸೂಚಿಯ ಭಾಗ, ಮೂಲ ಕಾಂಗ್ರೆಸಿಗರ ಸರ್ವನಾಶವೇ ಇದರ ಉದ್ದೇಶ.#SidduPoliticalToolKit
— BJP Karnataka (@BJP4Karnataka) July 23, 2022
ರಾಜಕೀಯ ಚದುರಂಗದಾಟದಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಸಿದ್ದರಾಮೋತ್ಸವ ಏಕಾಏಕಿ ಆಯೋಜನೆಗೊಂಡಿದ್ದಲ್ಲ. ಯಾವ ದಾಳವನ್ನು ಯಾವಾಗ ಯಾರ ಮುಂದೆ ಉರುಳಿಸಬೇಕೆಂಬ ಅನುಭವ ಸಿದ್ದರಾಮಯ್ಯಗಿದೆ. ಸಿದ್ದರಾಮೋತ್ಸವದ ಮೂಲಕ ಮುಂದೆ ಡಿಕೆಶಿ, ಪರಮೇಶ್ವರ್ ಹಾಗೂ ಖರ್ಗೆ ಅವರನ್ನು ಮಕಾಡೆ ಮಲಗಿಸುವ ಉದ್ದೇಶವಿದೆಯೇ? ಇದನ್ನೂ ಓದಿ: ದೇಶದಲ್ಲಿ 4 ಕೋಟಿಗೂ ಅಧಿಕ ಜನ ಮೊದಲ ಡೋಸ್ ಲಸಿಕೆ ಪಡೆದಿಲ್ಲ!
ಪಕ್ಷತ್ಯಾಗ ಸಿದ್ದರಾಮಯ್ಯಗೆ ಹೊಸದಲ್ಲ. ಐದು ಬಾರಿ ಪಕ್ಷ ಬಿಟ್ಟ ಖ್ಯಾತಿ ಅವರದು. ಸಿದ್ದರಾಮೋತ್ಸವದಲ್ಲಿ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡದೇ ಇದ್ದರೆ ಸಿದ್ದರಾಮಯ್ಯ ಮತ್ತೆ ವಲಸೆ ಹೋಗುವುದು ನಿಶ್ಚಿತ. ಕಟ್ಟಿರುವ ಪಕ್ಷದಲ್ಲಿ ಸಿದ್ದರಾಮಯ್ಯ ಗೂಡು ಕಟ್ಟುತ್ತಾರೆಯೇ ವಿನಃ, ಪಕ್ಷ ಕಟ್ಟಿ ಅಭ್ಯಾಸವೇ ಇಲ್ಲ.
ಸಿದ್ದರಾಮಯ್ಯ ಅವರಿಗೆ 75 ತುಂಬುವುದು ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗೆ ಎದುರಾಗುತ್ತಿರುವುದು ಕಾಕತಾಳೀಯವಲ್ಲ. ಇದೊಂದು ವ್ಯವಸ್ಥಿತ ಪೊಲಿಟಿಕಲ್ ಟೂಲ್ಕಿಟ್. ಖರ್ಗೆ, ಪರಮೇಶ್ವರ್, ಡಿಕೆಶಿ, ಎಂ.ಬಿ.ಪಾಟೀಲ್ ಸೇರಿದಂತೆ ಮೂಲ ಕಾಂಗ್ರೆಸ್ಸಿಗರನ್ನು ಹೇಗೆ ಮಟ್ಟ ಹಾಕಬೇಕೆಂಬುದೇ ಇದರ ರಹಸ್ಯ ಕಾರ್ಯಸೂಚಿ. ಇಷ್ಟು ವರ್ಷಗಳ ಕಾಲ ಅಧಿಕೃತವಾಗಿ ಜನ್ಮದಿನಾಚರಣೆಯನ್ನೇ ಆಚರಿಸಿಕೊಳ್ಳದ ಸಿದ್ದರಾಮಯ್ಯ ಹೇಗೆ ಅಮೃತಮಹೋತ್ಸವದ ಪ್ರಸ್ತಾವನೆ ಒಪ್ಪಿಕೊಂಡರು? ಪ್ರಯೋಜನ ಅಥವಾ ಲಾಭಾಕಾಂಕ್ಷಿ ಇಲ್ಲದೇ ದಡ್ಡನೂ ಹೆಜ್ಜೆ ಬದಲಾಯಿಸಲಾರ. ಅಂಥದರಲ್ಲಿ ಸಿದ್ದರಾಮಯ್ಯ ತಮ್ಮ ಉತ್ಸವದ ಮೂಲಕ ರಾಜಕೀಯ ಲಾಭ ಪಡೆಯದೇ ಬಿಡುತ್ತಾರೆಯೇ ಎಂದು ಪ್ರಶ್ನೆ ಮಾಡಿದೆ.