Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಸಿಎಂನಿಂದ 300 ಕೋಟಿ ರೂ. ಬೆಲೆ ಬಾಳುವ ಜಾಗ ಡಿನೋಟಿಫಿಕೇಶನ್

Public TV
Last updated: October 16, 2017 12:06 pm
Public TV
Share
3 Min Read
BJ Puttaswamy and siddaramaiah
SHARE

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತೊಂದು ಅಕ್ರಮ ಡಿನೋಟಿಫಿಕೇಶನ್ ಚಾರ್ಜ್ ಶೀಟ್  ಬಿಡುಗಡೆ ಮಾಡಿದೆ. ಸಿಎಂ ಆಪ್ತನ ಕಾರಣಕ್ಕಾಗಿ ನ್ಯಾಯಾಲಯದ ಆದೇಶವನ್ನೂ ಉಲ್ಲಂಘಿಸಿ 300 ಕೋಟಿ ಬೆಲೆಬಾಳುವ 6.26 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿದ್ದು, ಅದಕ್ಕೆ ಸಂಬಂಧಪಟ್ಟ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದೆ.

ಬಿಜೆಪಿ ಕಚೇರಿಯಲ್ಲಿ ಮೂವರು ಶಾಸಕರ ಜತೆ ಸುದ್ದಿಗೋಷ್ಠಿ ನಡೆಸಿದ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಗೈದ್ರು. ಬೆಂಗಳೂರಿನ ಉತ್ತರ ವಲಯದ ಭೂಪಸಂದ್ರದ ಸರ್ವೆ ನಂ. 20 ಹಾಗೂ 21ರಲ್ಲಿ ಒಟ್ಟು 6.26 ಎಕರೆ ಭೂಮಿಯನ್ನ ಅಕ್ರಮವಾಗಿ ಡಿನೋಟಿಫಿಫೈ ಮಾಡಿದ್ದಾರೆ, ಡಿನೋಟಿಫೈ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸಹಿ ಮಾಡಿದ್ದಾರೆ, ಮುಖ್ಯಮಂತ್ರಿಗಳೇ ಇದಕ್ಕೆ ನೇರ ಹೊಣೆ ಅಂತಾ ಆರೋಪಿಸಿದ್ದಾರೆ.

ಬೆಳ್ತಂಗಡಿ ಶಾಸಕ ವಸಂತ ಬಂಗೇರಾ ಅವರ ಡಿನೋಟಿಫೈ ಮಾಡುವಂತೆ ಮನವಿ ಮಾಡಿರುವ ಪತ್ರದ ಮೇಲೆ ಪರಿಶೀಲಿಸಿ ಕೂಡಲೇ ಚರ್ಚಿಸಿ ಅಂತಾ ಬರೆದು ಸಿಎಂ ಸಿದ್ದರಾಮಯ್ಯ ಸಹಿ ಹಾಕಿರುವ ಪತ್ರವನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಆದ್ರೆ ಡಿನೋಟಿಫೈ ಮಾಡಿರುವ ಅಗತ್ಯ ದಾಖಲೆಯ ಮಾತ್ರ ರಿಲೀಸ್ ಆಗಿಲ್ಲದಿರೋದು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

bjp pressmeet

ಬಿಜೆಪಿ ಆರೋಪಗಳೇನು?
1988ರಲ್ಲಿ ರಾಜಮಹಲ್ ವಿಲಾಸ್ 2ನೇ ಹಂತದ ಬಡಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಬೆಂಗಳೂರು ಉತ್ತರ ತಾಲೂಕು ಭೂಪಸಂದ್ರದ ಸ.ನಂ20ರಲ್ಲಿ 3.34 ಎಕರೆ, ಸ.ನಂ.21ರಲ್ಲಿ 2.32 ಎಕರೆ ನೋಟಿಫಿಕೇಶನ್ ಆಗಿತ್ತು. ಬಡಾವಣೆ ನಿರ್ಮಿಸಿ 22 ಮಂದಿಗೆ ಬಿಡಿಎ ಸೈಟ್ ಹಂಚಿಕೆ ಮಾಡಿತ್ತು. ಆದರೆ 1992ರಲ್ಲಿ ಅಂದಿನ ಸರ್ಕಾರ 6.26ಎಕರೆ ಭೂಮಿ ಡಿನೋಟಿಫಿಕೇಶನ್ ಮಾಡಿತ್ತು. ಈ ವೇಳೆ ಬಿಡಿಎಯಿಂದ ಜಾಗ ಪಡೆದವರು ಡಿನೋಟಿಫಿಕೇಶನ್ ರದ್ದು ಮಾಡುವಂತೆ ಹೈಕೋರ್ಟ್ ಮೊರೆ ಹೋಗಿದ್ದರು. 1996ರಲ್ಲಿ ಹೈಕೋರ್ಟ್ ಡಿನೋಟಿಫಿಕೇಶನ್ ರದ್ದು ಮಾಡಿತ್ತು. ಆದರೆ ಮೂಲ ಮಾಲೀಕರಲ್ಲಿ ಒಬ್ಬರಾದ ಸೈಯದ್ ಬಾಷಿದ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಕೆ ಮಾಡುತ್ತಾರೆ. ಅಲ್ಲೂ ಸೈಯದ್ ಬಾಷಿದ್ ಅರ್ಜಿ ತಿರಸ್ಕೃತವಾಗುತ್ತದೆ. ನಂತರ ಸುಪ್ರೀಂ ಕೋರ್ಟ್ ಮೊರೆ ಹೋದ್ರೂ ಅಲ್ಲೂ ಅರ್ಜಿ ವಜಾಗೊಳ್ಳುತ್ತದೆ.

2015ರಲ್ಲಿ ಮತ್ತೊಬ್ಬ ಮೂಲ ಮಾಲೀಕರಾದ ಕೆ.ವಿ.ಜಯಲಕ್ಷ್ಮಮ್ಮ ಹೈಕೋರ್ಟ್ ಮೆಟ್ಟಿಲೇರುತ್ತಾರೆ. ಆದ್ರೆ ಹೈಕೋರ್ಟ್ ನಲ್ಲಿ ಜಯಲಕ್ಷ್ಮಮ್ಮ ಮನವಿ ಪುರಸ್ಕಾರವಾಗಿ ಡಿನೋಟಿಫಿಕೇಶನ್ ಯಥಾಸ್ಥಿತಿಗೆ ಆದೇಶ ನೀಡುತ್ತದೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಬಿಡಿಎ ಮೇಲ್ಮನವಿ ಸಲ್ಲಿಸುತ್ತದೆ. ಆದ್ರೆ ಮೇಲ್ಮನವಿಗೆ ಬಿಡಿಎ ಅರ್ಜಿ ಯೋಗ್ಯವಲ್ಲ ಎಂದು ಸರ್ಕಾರದ ಕಾನೂನು ಕೋಶ ಅಭಿಪ್ರಾಯ ವ್ಯಕ್ತಪಡಿಸುತ್ತದೆ. 2016ರ ಜೂನ್ 7 ರಂದು ಬಿಡಿಎ ಮನವಿ ಮೇರೆಗೆ ಮೇಲ್ಮನವಿಯನ್ನು ದ್ವಿಸದಸ್ಯ ಪೀಠ ರದ್ದುಗೊಳಿಸುತ್ತದೆ. ಆ ಬಳಿಕ 15-06-2016ರಂದು ಬಿಡಿಎ ಆಯುಕ್ತರು ಭೂ ಸ್ವಾಧೀನ ಪ್ರಕ್ರಿಯೆ ರದ್ದಾಗಿರುತ್ತದೆ ಎಂದು ಕೆ.ವಿ ಜಯಲಕ್ಷ್ಮಮ್ಮ ಮತ್ತು ಇತರರಿಗೆ ಹಿಂಬರಹ ನೀಡುತ್ತಾರೆ.

ಈ ಆಸ್ತಿಯ ಇಂದಿನ ಮಾರುಕಟ್ಟೆ ಬೆಲೆ 300 ಕೋಟಿ ರೂ. ಆಗಿದ್ದು, ಸುಪ್ರೀಂ ಕೋರ್ಟ್ ತೀರ್ಪಿನಿಂದ ಉಳಿಸಿಕೊಂಡ ಆಸ್ತಿಯನ್ನು ಬಿಟ್ಟುಕೊಟ್ಟಿರುವುದರಲ್ಲಿ ಸರ್ಕಾರದ ನೇರ ಕೈವಾಡವಿದೆ. 37 ವರ್ಷದಿಂದ ಈ ವ್ಯವಹಾರದಲ್ಲಿ ಕಾಣಸಿದೇ ಇದ್ದ ಕೆ.ವಿ ಜಯಲಕ್ಷ್ಮಮ್ಮ ಮತ್ತು ಇತರರು ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ನಂತರ ಹೈಕೋರ್ಟ್ ನಲ್ಲಿ ಅರ್ಜಿ ಹಾಕಿದ್ದು ಅನುಮಾನಕ್ಕೆ ಬರುತ್ತದೆ. ಜನತಾದಳದಲ್ಲಿ ಸಿದ್ದರಾಮಯ್ಯ ಜೊತೆಯಲ್ಲಿ ಆಪ್ತರಾಗಿದ್ದ ಪ್ರಬಲ ರಾಜಕಾರಣಿ ಜಯಲಕ್ಷ್ಮಮ್ಮ ರಿಂದ ಪವರ್ ಆಫ್ ಅಟಾರ್ನಿ ಪಡೆದು ಈ ಅವ್ಯವಹಾರದಲ್ಲಿ ಸಕ್ರಿಯರಾಗಿದ್ದರಿಂದಲೇ ಸರ್ಕಾರ ಬಿಡಿಎ ಸಲ್ಲಿಸಿದ್ದ ಮೇಲ್ಮನವಿಯನ್ನು ವಾಪಸ್ ಪಡೆಯಲು ಆದೇಶ ನೀಡಿದೆ. ಈ ಆರೋಪ ತಿರಸ್ಕರಿಸುವುದಾದರೆ ಸಿಎಂ ಸಿದ್ದರಾಮಯ್ಯ ಒಂದು ವಾರದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿ ಆಸ್ತಿಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಈ ಆರೋಪ ಸತ್ಯವಾಗುತ್ತದೆ ಎಂದು ಬಿಜೆಪಿ ಹೇಳಿದೆ.

ಬ್ರಹ್ಮಾಂಡ ಭ್ರಷ್ಟಾಚಾರ: ಭೂಪಸಂದ್ರ ಡಿನೋಟಿಫಿಕೇಷನ್ ಹಗರಣದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ, ಸಿಎಂ ಬೇನಾಮಿ ಆಸ್ತಿ ಮಾಡಲು ಹೊರಟಿದ್ದಾರೆ, ಸಿಎಂ ವಿರುದ್ಧ ಬುಧವಾರ ಅಥವಾ ಗುರುವಾರ ಎಸಿಬಿ ಗೆ ದೂರು ಕೊಡುತ್ತೇವೆ. ಬಿಡಿಎ ಇದ್ದಿದ್ದು ಹಣ ಮಾಡೋಕಾ, ಮುಚ್ಚಿಬಿಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು, ಮಾನ ಮರ್ಯಾದೆ ಇದೆಯೇನ್ರಿ ನಿಮಗೆ ಎಂದು ಸಿಎಂ ವಿರುದ್ಧ ಕೆಂಡಕಾರಿದ್ದಾರೆ. ಅಷ್ಟೇ ಅಲ್ಲ, ಮಾನನಷ್ಟ ಮೊಕದ್ದಮೆ ಹೂಡುವ ಸಿಎಂ ಹೇಳಿಕೆಗೆ ಸವಾಲು ಹಾಕಿರುವ ಪುಟ್ಟಸ್ವಾಮಿ, ನಾಳೆನೇ ನನ್ನ ಮೇಲೆ ಮೊಕದ್ದಮೆ ಹೂಡಲಿ, ಇನ್ನಷ್ಟು ವಿಚಾರ ಹೊರತೆಗೆಯುತ್ತೇನೆ, ಮಾನನಷ್ಟ ಮೊಕದ್ದಮೆ ಹೂಡಿದರೆ ಎದುರಿಸಲು ಸಿದ್ಧ ಅಂತಾ ಹೇಳಿದರು.

 

Desperate @BJP4Karnataka continue their lie campaign. Baseless,utterly false allegations against @CMofKarnataka. @BSYBJP is becoming a joke. https://t.co/Sx4ob7OqiD

— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 10, 2017

TAGGED:BangalorebjpcongressdenotificationPuttaswamysiddaramaiahSupreme Courtಕಾಂಗ್ರೆಸ್ಡಿನೋಟಿಫಿಕೇಶನ್ಪುಟ್ಟಸ್ವಾಮಿಬಿಜೆಪಿಬೆಂಗಳೂರುಸಿದ್ದರಾಮಯ್ಯಸುಪ್ರೀಂ ಕೋರ್ಟ್
Share This Article
Facebook Whatsapp Whatsapp Telegram

You Might Also Like

Ravindra Jadeja Shubman Gill 2
Cricket

ಜೈಸ್ವಾಲ್‌ ಅರ್ಧಶತಕ – ಶತಕ ಸಿಡಿಸಿ ಕೊಹ್ಲಿ ಸಾಧನೆ ಸರಿಗಟ್ಟಿದ ಗಿಲ್‌

Public TV
By Public TV
6 hours ago
weather
Districts

ಉತ್ತರ ಕನ್ನಡದ 2 ತಾಲೂಕು, ಕೊಡಗಿನ ಶಾಲೆಗಳಿಗೆ ಗುರುವಾರ ರಜೆ

Public TV
By Public TV
6 hours ago
warden head kitchen assistant not coming to hostel bilagi bagalkote 1
Bagalkot

ಡ್ಯೂಟಿಗೆ ಚಕ್ಕರ್ ಪಗಾರ್‌ಗೆ ಹಾಜರ್ – ಹಾಸ್ಟೆಲಿಗೆ ಬರುತ್ತಿಲ್ಲ ವಾರ್ಡನ್‌, ಮುಖ್ಯ ಅಡುಗೆ ಸಹಾಯಕ!

Public TV
By Public TV
7 hours ago
Microsoft
Latest

9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌

Public TV
By Public TV
10 hours ago
Mandya Suicide
Crime

ಪತಿಯಿಂದ ದೂರವಿದ್ದ ತಾಯಿ, ಮಗಳು ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣು

Public TV
By Public TV
8 hours ago
Sir M Vishweshwaraiah Layout
Bengaluru City

ಬಿಡಿಎ ಕಾರ್ಯಾಚರಣೆ – ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆಯಲ್ಲಿ 7 ಕೋಟಿ ರೂ. ಆಸ್ತಿ ವಶ

Public TV
By Public TV
8 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?