ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ತಮ್ಮ ಪುತ್ರಿಯರ ಪಾದ ಪೂಜೆ ಮಾಡಿ, ಆಶೀರ್ವಾದ ಪಡೆದುಕೊಂಡಿದ್ದಾರೆ.
ನವರಾತ್ರಿ ಹಬ್ಬದಂದು ಕೆಲವು ಭಾಗಗಳಲ್ಲಿ ಕನ್ಯಾ ಪೂಜೆ ಮಾಡುವ ಪ್ರತೀತಿ ಇದೆ. ಈ ಮೂಲಕ 6ರಿಂದ 8 ವರ್ಷದ ಬಾಲಕಿಯರನ್ನು ಕನ್ಯಾ ಪೂಜೆಗೆ ಆಹ್ವಾನಿಸಲಾಗುತ್ತದೆ. ಆದರೆ ಗೌತಮ್ ಗಂಭೀರ್ ತಮ್ಮ ಇಬ್ಬರು ಪುತ್ರಿಯರ ಪಾದ ಪೂಜೆಯನ್ನು ಮಾಡಿ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.
ಈ ಕುರಿತು ಫೋಟೋ ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ನಾನೊಬ್ಬ ಇಬ್ಬರು ಪುತ್ರಿಯರ ತಂದೆಯಾಗಿದ್ದೇನೆ. ಪಾದೋಪಚಾರ ಕೌಶಲ್ಯವನ್ನು ಉತ್ತಮಗೊಳಿಸಿಕೊಂಡಿರುವೆ. ಅಷ್ಟೇ ಅಲ್ಲದೆ ಅಷ್ಟಮಿ ಪ್ರಯುಕ್ತ ಆಶೀರ್ವಾದವನ್ನು ಕೂಡ ಪಡೆದುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
As a dad of two young girls, I am gradually mastering my pedicure skills…besides seeking blessings on Ashtami Kanjak!!! @natashagambhir2 where should I send the bill for my services?????????????????????????♂️ pic.twitter.com/tjtP7yWBl6
— Gautam Gambhir (@GautamGambhir) October 8, 2019
ಈ ಟ್ವೀಟ್ ಅನ್ನು ಪತ್ನಿ ನತಾಶಾ ಅವರಿಗೆ ಟ್ಯಾಗ್ ಮಾಡಿ, ನಾನು ಮಾಡಿದ ಕೆಲಸಕ್ಕೆ ಬಿಲ್ ಯಾರಿಗೆ ಕಳುಹಿಸ ಬೇಕು ಎಂದು ತಮಾಷೆ ಮಾಡಿದ್ದಾರೆ. ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಗಂಭೀರ್ ಅವರ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೌತಮ್ ಗಂಭೀರ್ 2019ರ ಮಾರ್ಚ್ ತಿಂಗಳಿನಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದರು. ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ಗೆ ಆಯ್ಕೆಯಾಗಿದ್ದಾರೆ.