ಕಲಬುರಗಿ: ಆಳಂದ ಶಾಸಕ ಸುಭಾಷ್ ಗುತ್ತೇದಾರ್ ದರ್ಪ ತೋರಿದ ಘಟನೆಯೊಂದು ಬೆಳಕಿಗೆ ಬಂದಿದೆ. ಅವಾಚ್ಯ ಶಬ್ಧಗಳಿಂದ ಪುರಸಭೆ ಮುಖ್ಯಾಧಿಕಾರಿಗೆ ನಿಂದಿಸಿದ್ದಾರೆ.
ಆಳಂದ ಪುರಸಭೆ ಮುಖ್ಯಾಧಿಕಾರಿ ಚಂದ್ರಕಾಂತ್ ಪಾಟೀಲ್ ಅವರಿಗೆ ಶಾಸಕರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮಾಜಿ ಶಾಸಕ ಬಿ.ಆರ್ ಪಾಟೀಲ್ ಶಾಸಕರಾಗಿದ್ದಾಗ ಮಂಜೂರಾಗಿದ್ದ ಒಂದೂವರೆ ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಅನುಮತಿ ನೀಡಿದ್ದಕ್ಕೆ ಶಾಸಕರು ಕೆಂಡಾಮಂಡಲರಾಗಿದ್ದಾರೆ.
ಇದೇ ವಿಚಾರಕ್ಕೆ ಚಂದ್ರಕಾಂತ್ ಅವರಿಗೆ ಫೋನ್ ಮಾಡಿ ಹಿಗ್ಗಾಮುಗ್ಗಾ ಬೈದಿದ್ದಾರೆ. ನಾಟಕ ನಡಿಸಿರಿ, ಬೋ ಮಗನ… ಕೆಲಸ ಬಂದ್ ಮಾಡಿಸಿರಿ, ಇಲ್ಲ ಅಂದ್ರೆ ನಾನು ಬರ್ತೇನೆ ಎಂದು ಅವಾಜ್ ಹಾಕಿದ್ದಾರೆ.
ಇಬ್ಬರ ಸಂಭಾಷಣೆ ಇಂತಿದೆ:
ಎಂಎಲ್ಎ-ಏನಾಯಿತು
ಅಧಿಕಾರಿ-ಸರ್…ಸರ್…ಕೆಲಸ ಬಂದ್ ಮಾಡೋಕೆ ಹೇಳುತ್ತೇನೆ
ಎಂಎಲ್ಎ-ಅವನು ಮಾಡುಕೆ ಹೇಗೆ ಕೊಟ್ಟ
ಅಧಿಕಾರಿ-ಶಾಂತಪ್ಪ ಅವರೂ ಫಸ್ಟ್ ಮಾಡರಿ ಅಮೇಲೆ ಪೊಜೆ ಮಾಡುನಾ ಅಂದರು
ಎಂಎಲ್ಎ-ಬೋ..ಮಗನಾ….ಏ ರಂಡಿ ಮಗನಾ…ಅವರ ಮೇಲೆ ಯಾಕ ಹೇಳತ್ತಿ. ನೀ…ಹೇಳಿದಿ ಅಂತಾ ನಿನ್ನ ಹೆಸರು ಹೇಳುತ್ತಿದ್ದಾನೆ
ಅಧಿಕಾರಿ- ಸರ್….ಹಂಗಲ್ಲ….ಸರ್
ಎಂಎಲ್ಎ-ಬೋ. ಮಗನಾ ಬೋಟ್ನಿಂದ ಹೊಡೆತ್ತೀನಿ ನಿನಗ…
ಅಧಿಕಾರಿ-ಇಲ್ಲ…ಸರ್
ಎಂಎಲ್ಎ-ರಾಜಕೀಯಮಾಡಿ ನಾಟಕ ಮಾಡಕಹತ್ತರಿ
ಅಧಿಕಾರಿ-ಇಲ್ಲ ಸರ್ ಶಾಂತಪ್ಪನೆ ಹೇಳಿದ್ದು…
ಎಂಎಲ್ಎ-ಬೋ.. ಮಗನಾ ಮೊದಲು ಕೆಲಸ ಬಂದ ಮಾಡಿಸು
ಅಧಿಕಾರಿ- ಸರ್….ನಿಮ್ಮ ಎದುರಿಗೆ ನಾ ಹೇಳಿಸಿತ್ತೀನಿ ಸರ್
ಎಂಎಲ್ಎ-ಬೋ..ಮಗನಾ…ಮೊದಲು ಕೆಲಸ ಬಂದ್ ಮಾಡಿಸಿತ್ತರೆ ಸರಿ…ಇಲ್ಲ ನಾನೇ ಬರತ್ತೀನಿ…
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv