ಬೀದರ್: ಬಕ್ರೀದ್ ಹಬ್ಬ(Bakrid) ಹಿನ್ನೆಲೆಯಲ್ಲಿ ಬಲಿಗೆ ಸಿದ್ಧವಾಗಿದ್ದ 40ಕ್ಕೂ ಅಧಿಕ ಗೋವುಗಳನ್ನು ಬಿಜೆಪಿ ಶಾಸಕ ಶರಣು ಸಲಗರ್ (BJP MLA Sharanu Salagar) ರಕ್ಷಿಸಿದ್ದಾರೆ.
ಬಸವಕಲ್ಯಾಣ ಪಟ್ಟಣದ ಮಹಿಬೂಬ್ ಗಲ್ಲಿಯಲ್ಲಿ ಗೋವುಗಳನ್ನು ಅಕ್ರಮವಾಗಿ ಇರಿಸಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಶರಣು ಸಲಗರ್ ಇಂದು ಬೆಳಗ್ಗೆ ಶೆಡ್ ಮೇಲೆ ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಪರಾರಿಯಾಗುತ್ತಿದ್ದ ಆರ್ಸಿಬಿಯ ನಿಖಿಲ್ ಸೋಸಲೆ ವಿಮಾನ ನಿಲ್ದಾಣದಲ್ಲಿ ಅರೆಸ್ಟ್
ದಾಳಿಯ ವೇಳೆ ಗೋಮಾಂಸ ಪತ್ತೆಯಾಗಿದೆ. ನಿಮ್ಮ ಕುಮ್ಮಕ್ಕಿನಿಂದಲೇ ಗೋವುಗಳ ಹತ್ಯೆ ನಡೆಯುತ್ತಿದೆ. ಧಮ್ ಇದ್ದರೆ ಇಲ್ಲಿಗೆ ಬಾರೋ ಎಂದು ಕಾಂಗ್ರೆಸ್ ಮುಖಂಡ ವಿಜಯ್ ಸಿಂಗ್ಗೆ ಸಲಗಾರ್ ಸವಾಲು ಎಸೆದಿದ್ದಾರೆ. ಇದನ್ನೂ ಓದಿ: ತುಮಕೂರು ಬಳಿ ಭೀಕರ ಅಪಘಾತ – ಮೂವರು ಬೈಕ್ ಸವಾರರು ಸಾವು
ನಾನು ಇರುವವರೆಗೂ ಗೋವುಗಳ ಬಲಿ ಕೊಡಲು ಬಿಡಲ್ಲ. ಯಾರು ಯಾವುದಕ್ಕೆ ಭಯ ಪಡುವ ಅಗತ್ಯವಿಲ್ಲ. ಯಾರಿಗೂ ಹೆದರಿ ಕೆಲಸ ಮಾಡಬೇಡಿ ಎಂದು ಪೊಲೀಸರಿಗೆ ಹೇಳಿದ್ದಾರೆ.