ಬಿಜೆಪಿ ಮುಖಂಡನ ಹತ್ಯೆ- ಶರಣಾಗದ ಆರೋಪಿ ಕಾಲಿಗೆ ಗುಂಡಿಟ್ಟು ಬಂಧನ, ಆಸ್ಪತ್ರೆಗೆ ದಾಖಲು

Public TV
1 Min Read
ANE AROPI

ಬೆಂಗಳೂರು: ನಗರದ ಆನೇಕಲ್ ಬಿಜೆಪಿ ಮುಖಂಡ ಹರೀಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಾಜು ಅಲಿಯಾಸ್ ರಾಜೇಶ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ANE MURDER 4

ಆನೇಕಲ್ ತಾಲೂಕು ಬಿಜೆಪಿಯ ಎಸ್‍ಸಿ-ಎಸ್‍ಟಿ ಘಟಕದ ಉಪಾಧ್ಯಕ್ಷ ಹರೀಶ್‍ರನ್ನು ಗುರುವಾರ ತಡರಾತ್ರಿ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾತ್ರಿ 9.15ರ ಸುಮಾರಿನಲ್ಲಿ ರಾಜೇಶ್ ನನ್ನು ಪೊಲೀಸರು ಮುತ್ಯಾಲಮಡುವಿನ ಚೆಕ್ ಪೋಸ್ಟ್ ಬಳಿ ಸುತ್ತುವರಿದು ಶರಣಾಗತಿಯಾಗುವಂತೆ ಡಿವೈಎಸ್‍ಪಿ ಎಸ್‍ಕೆ ಉಮೇಶ್ ತಂಡ ಸೂಚಿಸಿತು. ಆದರೆ ರಾಜೇಶ್ ಶರಣಾಗತಿಗೆ ನಿರಾಕರಿಸಿ ಬಂಧಿಸಲು ಬಂದಿದ್ದ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದ.

vlcsnap 2017 06 02 10h42m15s108

ಪಿಎಸ್‍ಐ ಹೇಮಂತ್ ಕುತ್ತಿಗೆಗೆ ಚೈನ್ ಹಾಕಿ ಬಿಗಿಯತೊಡಗಿದ. ಇದರಿಂದ ಒಂದು ಕ್ಷಣ ಗಾಬರಿಯಾದ ಪೊಲೀಸರು ಮತ್ತೊಮ್ಮೆ ಶರಣಾಗುವಂತೆ ಎಚ್ಚರಿಸಿದ್ರು. ಯಾವುದಕ್ಕೂ ಬಗ್ಗದಿದ್ದಾಗ ಡಿವೈಎಸ್‍ಪಿ ಉಮೇಶ್ ಗಾಳಿಯಲ್ಲಿ ಗುಂಡು ಹಾರಿಸಿದರು. ಆಗಲೂ ಬಗ್ಗದಿದ್ದಾಗ ರಾಜೇಶ್ ನ ಬಲಗಾಲಿಗೆ ಗುಂಡು ಹಾರಿಸಿ ಹೆಡೆಮುರಿ ಕಟ್ಟಿದ್ದಾರೆ.

ANE MURDER 7

vlcsnap 2017 06 02 10h42m15s108

ANE MURDER 2

ANE MURDER 6

ANE MURDER 7 1

ANE MURDER 1

vlcsnap 2017 06 02 10h46m22s12

Share This Article
Leave a Comment

Leave a Reply

Your email address will not be published. Required fields are marked *