– ಕಾಲ್ತುಳಿತ ಕೇಸ್; ಇಡೀ ಸರ್ಕಾರ ವಜಾಕ್ಕೆ ವಿಪಕ್ಷ ನಾಯಕ ಆಗ್ರಹ
– ವಿಸ್ಕಿ ಬಾಟಲಿ RCB ಪ್ರಮೋಷನ್ಗೆ ವಿಧಾನಸೌಧ ಕಾರ್ಯಕ್ರಮ; ಕಿಡಿ
ಬೆಂಗಳೂರು: ಆರ್ಸಿಬಿ ಅಂದ್ರೆ Real Culprits of Bangalore ಅಂತ ವಿಪಕ್ಷ ನಾಯಕ ಆರ್. ಅಶೋಕ್ (R Ashok) ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿಂದು ಕಾಲ್ತುಳಿತ ಪ್ರಕರಣಕ್ಕೆ (Bengaluru Stampede Case) ಸಂಬಂಧಿಸಿದಂತೆ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ಅವರು, ಇಡೀ ಸರ್ಕಾರ ವಜಾಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – KSCA ಕಾರ್ಯದರ್ಶಿ ಸೇರಿ ಇಬ್ಬರು ಪದಾಧಿಕಾರಿಗಳು ರಾಜೀನಾಮೆ
ಇದು ದರಿದ್ರ ಸರ್ಕಾರ, ಇದನ್ನ ಬೇವರ್ಸಿ ಸರ್ಕಾರ ಅನ್ಬೇಕಾ.. ಇಲ್ವಾ ಗೊತ್ತಾಗ್ತಿಲ್ಲ. ನಾವಿಲ್ಲಿ ನಲವತ್ತು ಜನ ಪ್ರತಿಭಟನೆ ಮಾಡ್ತಿದೀವಿ, ಪೊಲೀಸರು 150 ಜನ ಬಂದಿದ್ದಾರೆ, ಗನ್ಗಳನ್ನೂ ತಂದಿದ್ದಾರೆ. ನಮ್ಮ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಮುಂದಾಗಿದೆ, ನಮ್ಮನ್ನೂ ಬಂಧಿಸಬಹುದು. ಸಿಎಂ, ಡಿಸಿಎಂ ವಿಸ್ಕಿ ಬಾಟಲಿ ಆರ್ಸಿಬಿ ಪ್ರಮೋಷನ್ಗೆ ವಿಧಾನಸೌಧ ಕಾರ್ಯಕ್ರಮ ಮಾಡಿದ್ದಾರೆ. ಆರ್ಸಿಬಿ ಅಂದ್ರೆ Real Culprits of Bangalore ಅಂತ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಈಗ ನಾನು ಇದ್ದಿದ್ರೆ ಕೆ.ಎಲ್.ರಾಹುಲ್ನ ಆರ್ಸಿಬಿಗೆ ಖರೀದಿ ಮಾಡ್ತಿದ್ದೆ: ವಿಜಯ್ ಮಲ್ಯ
ಇದೇ ವೇಳೆ ಪೊಲೀಸರ ಅಮಾನತು ವಿಚಾರಕ್ಕೆ ಪ್ರತಿಕ್ರಿಯಿಸಿ, ಪೊಲೀಸರ ರಕ್ಷಣೆ ಯಾರು ಮಾಡ್ತಾರೆ? ನಾವು ಪೊಲೀಸರ ಜೊತೆ ನಿಲ್ತೇವೆ. ಈ ಪ್ರಕರಣದಲ್ಲಿ ಪೊಲೀಸರ ಪರ ನಮ್ಮ ಹೋರಾಟ, ದುರಂತದಲ್ಲಿ ಪೊಲೀಸರ ಪಾತ್ರ ಇಲ್ಲ. ವಿಧಾನಸೌಧ ಡಿಸಿಪಿ ಕ್ಲೀನಾಗಿ ಪತ್ರದಲ್ಲಿ ಬರೆದಿದ್ದಾರೆ. ಸಿಬ್ಬಂದಿ ಇಲ್ಲ ಅಂದ್ರೂ ಹೇಗೆ ಕಾರ್ಯಕ್ರಮ ಮಾಡಿದ್ರಿ? ಅಂತ ಪ್ರಶ್ನೆ ಮಾಡಿದ್ದಾರೆ.
ಒಬ್ಬ ಪೊಲೀಸ್ ಅಧಿಕಾರಿ ಆಗಲ್ಲ ಅಂದ್ಮೇಲೂ ನೀನು ಹೇಗಯ್ಯ ಕಾರ್ಯಕ್ರಮ ಮಾಡಿದೆ? ಯಾವ ಕಾನೂನು ಅಡಿ ಕಾರ್ಯಕ್ರಮ ಮಾಡಿದೆ? ಏಕವಚನದಲ್ಲಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರಲ್ಲದೇ ಪೊಲೀಸರು ಸಾವಿನ ಬಗ್ಗೆ ಹೇಳಲಿಲ್ಲ ಅಂತಾರೆ. ನಿಮ್ಮ ಅಧಿಕಾರಿಗಳು ಮಣ್ಣು ತಿಂತಿದ್ರಾ? ಟಿವಿಗಳಲ್ಲಿ ಕ್ಷಣಕ್ಷಣಕ್ಕೂನ್ಯೂಸ್ ಬರ್ತಿತ್ತಲ್ಲ. ಈ ಸರ್ಕಾರ ವಜಾ ಆದ್ರೆ ಮಾತ್ರ ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತೆ ಅಂತ ಹೇಳಿದ್ದಾರೆ.
ಸಿ.ಟಿ ರವಿ ತಪ್ಪೇ ಮಾಡಿಲ್ಲ, ಏನೂ ಮಾತಾಡದಿದ್ರೂ ಅವ್ರನ್ನ ಕ್ವಾರಿ, ಇಟ್ಟಿಗೆ ಫ್ಯಾಕ್ಟರಿ, ಕಬ್ಬಿನ ಗದ್ದೆ ಎಲ್ಲ ಸುತ್ತಿಸಿದ್ರಿ. ಈಗ ನೀವು 11 ಜನರ ಮರ್ಡರ್ ಮಾಡಿದ್ದೀರಿ? ನಿಮ್ಮನ್ನ ಯಾವ ಕಬ್ಬಿನ ಗದ್ದೆಗೆ ಕರ್ಕೊಂಡ್ ಹೋಗಬೇಕು ಹೇಳಿ? ಮೊದಲ ಸಾವು 3.15ಕ್ಕೆ ಆಯ್ತು, ಇವ್ರು ಕಾರ್ಯಕ್ರಮ ಮಾಡಿದ್ದು 4.30ಕ್ಕೆ, 6ಕ್ಕೆ ಡಿಸಿಎಂ ಅಲ್ಲಿಗೆ ಹೋಗ್ತಾರೆ, ನಂತರ 1 ಕೋಟಿ ಮೌಲ್ಯದ ಪಟಾಕಿ ಹೊಡೀತಾರೆ. ಮಾನವೀಯತೆ ಇಲ್ವಾ? ನಿಮಗೆ ಜ್ಞಾನ ಇಲ್ವಾ? ಅಂತೆಲ್ಲ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ‘ಎಣ್ಣೆ’ ಪ್ರಚಾರಕ್ಕಾಗಿ ಆರ್ಸಿಬಿ ಖರೀದಿಸಿದೆ: RCB ಬಗ್ಗೆ ವಿಜಯ್ ಮಲ್ಯ ಹೇಳಿದ್ದೇನು?