ಬೆಂಗಳೂರು: ಕಾಂಗ್ರೆಸ್ (Congress) ನಾಯಕರ ಅಪಕ್ವ ಹೇಳಿಕೆಗಳಿಗೆ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಕೆಲವರ ಪ್ರಶ್ನೆಗಳು ಪಾಕಿಸ್ತಾನದ ಪರವಾಗಿವೆ. ನಿನ್ನೆ ತಾನೇ ಮೂವರು ಸತ್ತು ಬಿದ್ದಿದ್ದಾರೆ ಅಲ್ಲವೇ? ನಿಮಗೆ ಕಣ್ಣು ಕಾಣಲಿಲ್ಲವೇ? ನಿಮಗೇನಾದರೂ ಆಪರೇಷನ್ ಆಗಿದೆಯೇ? ನಿಮಗೆಲ್ಲ ವಿಶೇಷ ಆಸ್ಪತ್ರೆ ತೆರೆಯಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಇಂದಿನಿಂದ ಜಾರಿ – ಸಿದ್ದರಾಮಯ್ಯ
ಅವರ ಸ್ಥಾನದಲ್ಲಿ ನಾನು ಇದ್ದರೆ ಪಕ್ವತೆ ಇಲ್ಲದ ಪ್ರಶ್ನೆ ಕೇಳುತ್ತಿರಲಿಲ್ಲ. ದೇಶದ ವಿರುದ್ಧ ಮಾತನಾಡಿದರೆ ಜನರು ನಿಮ್ಮ ನಾಲಿಗೆ ಇಲ್ಲದಂತೆ ಮಾಡಬಹುದು ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮೋದಿಗೆ ಟಕ್ಕರ್ ಕೊಡಲು ಹೋಗಿ ನಗೆಪಾಟಲು – ಧ್ವಂಸಗೊಂಡ ಏರ್ಫೀಲ್ಡ್ ಮುಚ್ಚಿಕೊಳ್ಳಲು ಮೈದಾನದಲ್ಲಿ ಪಾಕ್ ಪ್ರಧಾನಿ ಸಂವಾದ