ಬೆಂಗಳೂರು: ಕಾಂಗ್ರೆಸ್ (Congress) ಪಕ್ಷ ಅಧಿಕಾರಕ್ಕೆ ಬರುತ್ತದೆ ಅಂತ ಬಿಜೆಪಿ (BJP) ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೆ ಬರುತ್ತದೆ ಎಂದು ಗೊತ್ತಾಗಿದೆ. ಅಮಿತ್ ಶಾ ಅವರು ಕೆಲ ತಿಂಗಳ ಹಿಂದೆ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ತಿಳಿಸಿದರು. ಈಗ ಪ್ರಧಾನಮಂತ್ರಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದ್ದಾರೆ. ಅಂದರೆ ರಾಜ್ಯದ ನಾಯಕತ್ವ ವಿಫಲವಾಗಿದ್ದು, ಜನರ ಬದುಕಿನಲ್ಲಿ ಸುಧಾರಣೆ ತರಲು ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೀಸಲಾತಿ ವಿಚಾರದಲ್ಲಿ ಸರ್ಕಾರ ಮೋಸ ಮಾಡುತ್ತಿದೆ: ಡಿ.ಕೆ ಶಿವಕುಮಾರ್
ಮುಂದಿನ ಬಜೆಟ್ನಲ್ಲಿ ಕಾರ್ಯಕ್ರಮ ನೀಡುತ್ತೇವೆ ಎನ್ನುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೊಡಬಹುದಾಗಿತ್ತು. ಸಬ್ಸಿಡಿ ಮೂಲಕ ಪೆಟ್ರೋಲ್, ಅಡುಗೆ ಅನಿಲ ಬೆಲೆ ಕಡಿಮೆ ಮಾಡಬಹುದಾಗಿತ್ತು. ಅಚ್ಛೆ ದಿನ್ ಬರುತ್ತದೆ ಎಂದಿದ್ದರು. ಯಾರಿಗೆ ಬಂತು ಅಚ್ಛೆ ದಿನ? ಮಂತ್ರಿಗಳು ಬಹಳಷ್ಟು ಮಾತನಾಡುತ್ತಾರೆ. ಕೋವಿಡ್ ಬೆಡ್ ಹಗರಣ, ಹೆಣದ ಮೇಲೆ ಹಣ ಮಾಡಿದ್ದು ಯಾರು? ಕೆಂಪಣ್ಣ ಅವರ ದೂರು, ತಿಪ್ಪಾರೆಡ್ಡಿ ಅವರ ಮೇಲೆ ಆರೋಪ, ಯತ್ನಾಳ್, ವಿಶ್ವನಾಥ್ ಅವರ ಆರೋಪ ನಾವು ಮಾಡಿದ್ದೇವಾ? ಆತ್ಮಹತ್ಯೆ, ದಯಾಮರಣಕ್ಕೆ ಅರ್ಜಿ ನಾವು ಹಾಕಿದ್ದೇವಾ? ಪೊಲೀಸ್ ನೇಮಕಾತಿ ಹಗರಣ, ಕೆಪಿಎಸ್ಸಿ ಹಗರಣದ ಬಗ್ಗೆ ಮಾಧ್ಯಮ ವರದಿ ನಾವು ಮಾಡಿದ್ದೇವಾ? ರಾಜ್ಯಪಾಲರು ನೇಮಕ ಮಾಡುವ ಉಪಕುಲಪತಿ ಹುದ್ದೆಗೂ 4-5 ಕೋಟಿ ರೂ. ನೀಡಬೇಕು ಎಂದು ಬಿಜೆಪಿ ಸಂಸದ ಹೇಳಿದ್ದಾರೆ ಹೊರತು ನಾವು ಹೇಳಿಲ್ಲ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್-ಜೆಡಿಎಸ್ ಸಭೆಗಳಲ್ಲಿ ಚಪ್ಪಲಿ ಹಿಡಿದು ಕಿತ್ತಾಟ – ಬಿಜೆಪಿ ಸಭೆಯಲ್ಲಿ ಮಾತ್ರ ಶಿಸ್ತು: ನಳಿನ್ ಕುಮಾರ್ ಕಟೀಲ್
ಇದೆಲ್ಲವೂ ಬಿಜೆಪಿ ಸಾಧನೆ. ಮಾಧ್ಯಮಗಳು ಈ ವಿಚಾರದಲ್ಲಿ ಬಹಳ ಉತ್ತಮ ಕೆಲಸ ಮಾಡಿದೆ. ಮುಂದೆ ರಾಜ್ಯದ ಭವಿಷ್ಯ ಕಾಂಗ್ರೆಸ್ ಜೊತೆ ಉತ್ತಮವಾಗಿದೆ ಎಂದು ಅರಿತು ಬೇರೆ ಪಕ್ಷದ ನಾಯಕರು ಯಾವುದೇ ಷರತ್ತು ಇಲ್ಲದೆ ನಮ್ಮ ಪಕ್ಷ ಸೇರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k