ಬೆಂಗಳೂರು: ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಗೆಲ್ಲಿಸಲು ಪ್ಲಾನ್ ಮಾಡುತ್ತಿರೋ ಗಣಿಧಣಿ ಗಾಲಿ ಜನಾರ್ದನ ರೆಡ್ಡಿಗೆ ಬಿಜೆಪಿ ಹೈಕಮಾಂಡ್ ಕಡಿವಾಣ ಹಾಕಿದೆ.
ರಾಜಕೀಯ ಎಂಟ್ರಿ ಕುರಿತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿರೋ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿಯವರ ಪ್ರಚಾರದ ವಿಚಾರದಲ್ಲಿ ಮುಜುಗರ ತಪ್ಪಿಸಿಕೊಳ್ಳಲು ಬಿಜೆಪಿ ಪ್ಲಾನ್ ಮಾಡುತ್ತಿದೆ. ರೆಡ್ಡಿಯನ್ನು ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕಿದ ಬಿಜೆಪಿ, ಶ್ರೀರಾಮುಲು ಗೆಲುವಿಗಾಗಿ ಬಹಿರಂಗ ಪ್ರಚಾರಕ್ಕೆ ಮುಂದಾಗಿರೋದಕ್ಕೆ ಬ್ರೇಕ್ ಹಾಕಿದೆ.
- Advertisement 2
ಪಕ್ಷದ ಸೂಚನೆಯನ್ನು ಪಾಲಿಸುತ್ತೇನೆ. ಅನಗತ್ಯ ಗೊಂದಲಕ್ಕೆ ಅವಕಾಶ ಇಲ್ಲದಂತೆ ನೋಡಿಕೊಳ್ಳುವುದಾಗಿ ರೆಡ್ಡಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
- Advertisement 3
- Advertisement 4
`ಲೋ ಪ್ರೊಫೈಲ್ ಮೆಂಟೇನ್ ಮಾಡಿ’, ಮಾಧ್ಯಮಗಳಿಂದ ಅಂತರ ಕಾಪಾಡಿಕೊಳ್ಳಿ ಅಂತ ಹೈಕಮಾಂಡ್ ಖಡಕ್ ಸೂಚನೆ ರವಾನಿಸಿದೆ. ಬಾಹ್ಯ ಪ್ರಚಾರಕ್ಕೆ ಬದಲಾಗಿ ಆಂತರಿಕ ಪ್ರಚಾರಕ್ಕೆ ಮುಂದಾಗಬೇಕು. ಪ್ರಚಾರದ ವೇಳೆ ವಿವಾದಿತ ಅಭಿಪ್ರಾಯಗಳನ್ನು ನೀಡಬೇಡಿ. ವ್ಯಕ್ತಿ, ಜಾತಿಯಾಧಾರಿತ ಹೇಳಿಕೆಗಳನ್ನು ನೀಡೋದಕ್ಕೆ ಬ್ರೇಕ್ ಹಾಕಿ. ಪಾಸಿಟಿವ್ ಪ್ರಚಾರದ ಮೂಲಕ ಕ್ಷೇತ್ರದಲ್ಲಿ ಕೆಲಸ ಮಾಡಲು ಸೂಚನೆ ನೀಡಿದ್ದು ರೆಡ್ಡಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಕಾಂಗ್ರೆಸ್ ಟೀಕೆಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ಪ್ಲಾನ್ ಮಾಡುತ್ತಿದೆಯಾ ಎಂಬ ಪ್ರಶ್ನೆ ಎದ್ದಿದ್ದು, ಬದಾಮಿ, ಮೊಳಕಾಲ್ಮೂರು ಕ್ಷೇತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ರೆಡ್ಡಿಗೆ ಬ್ರೇಕ್ ಹಾಕೋ ಪಕ್ಷದ ತೀರ್ಮಾನದಿಂದ ಬಿಜೆಪಿ ವಲಯದಲ್ಲಿ ಕುತೂಹಲ ಹೆಚ್ಚಿದೆ.