ಸಂಪುಟ ಪುನಾರಚನೆ ಅಲ್ಲ ವಿಸ್ತರಣೆಯೇ ಎಲ್ಲ – ಹಾಲಿ ಮೂವರು ಸಚಿವರೂ ಸೇಫ್

Public TV
1 Min Read
Kota Shashikala CC Patil

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಾ? ಪುನಾರಚನೆಯಾ ಅನ್ನೋ ಗೊಂದಲ ಬಗೆಹರಿದಿದೆ. ಗುರುವಾರ ನಡೆಯೋದು ವಿಸ್ತರಣೆ ಮಾತ್ರ, ಪುನಾರಚನೆಯಲ್ಲ. ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಪೂರ್ಣ ಒಪ್ಪಿಗೆ ಕೊಟ್ಟಿದೆ. ಸಂಪುಟದಿಂದ ಯಾರನ್ನೂ ಕೈಬಿಡದೇ ವಿಸ್ತರಣೆ ನಡೆಸಲು ಹೈಕಮಾಂಡ್ ಸೂಚನೆ ಕೊಟ್ಟಿದೆ. ಸಚಿವ ವಿಸ್ತರಣೆ ಹಿನ್ನೆಲೆಯಲ್ಲಿ ಹಾಲಿ ಮೂವರು ಸಚಿವರೂ ಸೇಫ್ ಆಗಿದ್ದಾರೆ.

CM BSY a

ಸಚಿವ ಸಂಪುಟ ಸಂಕಷ್ಟಗಳ ಮಧ್ಯೆಯೂ ಹಾಲಿ ಮೂವರು ಸಚಿವರಿಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಸಿ.ಸಿ.ಪಾಟೀಲ್ ಮತ್ತು ಶಶಿಕಲಾ ಜೊಲ್ಲೆ ಈ ಮೂವರು ಸಚಿವರನ್ನೂ ಸಂಪುಟದಿಂದ ಕೈಬಿಡಲಾಗುತ್ತದೆ ಎನ್ನಲಾಗಿತ್ತು. ಆದರೆ ಇದೀಗ ಸಂಪುಟ ಪುನಾರಚನೆ ಬದಲು ವಿಸ್ತರಣೆ ನಡೆಯುವುದರಿಂದ ಮೂವರೂ ಸಚಿವರು ಸೇಫಾಗಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ.

CM BSY 1

ಡಿಸಿಎಂ ಲಕ್ಷ್ಮಣ ಸವದಿಯವರು ಪರಿಷತ್ ಗೆ ಆಯ್ಕೆಯಾಗಲಿರುವ ಕಾರಣದಿಂದ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಯವ್ರಿಗೆ ಸಂಪುಟದಿಂದ ಕೊಕ್ ಕೊಡುವ ಸಾಧ್ಯತೆ ಇತ್ತು. ಒಂದೊಮ್ಮೆ ಲಕ್ಷ್ಮಣ ಸವದಿಯವರನ್ನು ವಿಧಾನ ಪರಿಷತ್ ಸಭಾನಾಯಕರಾಗಿ ಮಾಡಿದರೂ ಹಾಲಿ ಸಭಾನಾಯಕರಾಗಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಮುಂದುವರಿಯಲಿದ್ದಾರೆ. ಸಚಿವ ಸಿ.ಸಿ.ಪಾಟೀಲ್ ರಿಗೂ ಕೈಬಿಡದಿರಲು ಹೈಕಮಾಂಡ್ ನಿರ್ಧಾರ ಕೈಗೊಂಡಿದೆ. ಇನ್ನು ಬೆಳಗಾವಿಯಲ್ಲಿ ಸಚಿವರ ಸಂಖ್ಯೆ ಕಡಿಮೆ ಮಾಡಲು ಸಚಿವೆ ಶಶಿಕಲಾ ಜೊಲ್ಲೆಯವ್ರಿಗೂ ಕೊಕ್ ಕೊಡುವ ಸಾಧ್ಯತೆ ಇತ್ತು. ಆದರೆ ಮಹೇಶ್ ಕುಮಟಳ್ಳಿಯವರು ಸಂಪುಟ ಸೇರ್ಪಡೆ ಇಲ್ಲದ ಹಿನ್ನೆಲೆಯಲ್ಲಿ ಹಾಗೂ ಮಹಿಳಾ ಕೋಟಾದಿಂದ ಒಬ್ಬರೇ ಸಚಿವೆಯಾಗಿರುವ ಕಾರಣದಿಂದ ಶಶಿಕಲಾ ಜೊಲ್ಲೆಯವರು ಸೇಫ್ ಆಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

Share This Article