ಬಿಎಸ್‍ವೈ ಆರೋಗ್ಯ ವೃದ್ಧಿಯಾಗಲೆಂದು ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪೂಜೆ

Public TV
1 Min Read
BSY MND 1

ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಆರೋಗ್ಯ ವೃದ್ಧಿಯಾಗಲಿ, ಅವರಿಗೆ ಯಾವುದೇ ಕಂಟಕ ಬಾರದಿರಲಿ ಎಂದು ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬೆಳ್ಳಂಬೆಳಗ್ಗೆ ಮಂಡ್ಯದ ವಿದ್ಯಾನಗರದಲ್ಲಿರುವ ವಿದ್ಯಾಗಣಪತಿ ದೇವಾಲಯಕ್ಕೆ ಆಗಮಿಸಿದ ಯಡಿಯೂರಪ್ಪ ಅಭಿಮಾನಿಗಳು, ಮೊದಲು ಗಣಪತಿಗೆ ಹಾಲಿನ ಅಭಿಷೇಕ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಮುಂದೆ ಯಡಿಯೂರಪ್ಪ ಅವರಿಗೆ ಜೈಕಾರ ಹಾಕುತ್ತಾ ತೆಂಗಿನ ಕಾಯಿ ಒಡೆದರು.

ಆರೋಗ್ಯ ವೃದ್ಧಿಯ ಜೊತೆಗೆ ರಾಜಕೀಯ ವಲಯದಲ್ಲಿ ಯಡಿಯೂರಪ್ಪ ಅವರನ್ನು ಹಿತಶತೃಗಳಿಂದ ಕಾಪಾಡಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದರು.

ಇದನ್ನೂ ಓದಿ: ಬಿ.ಎಸ್.ವೈ ಆಸ್ಪತ್ರೆಗೆ ದಾಖಲು – ಎಲ್ಲ ವಿಚಾರವೂ ಗುಪ್ತ್ ಗುಪ್ತ್!

ಬಿಎಸ್‍ವೈ ಅವರ ಆರೋಗ್ಯದಲ್ಲಿ ಏರುಪೇರಾಗಿ ಇದ್ದಕಿದ್ದಂತೆ ಅಧಿಕ ರಕ್ತದೊತ್ತಡ ಹಾಗೂ ಜ್ವರದಿಂದ ಬಳಲುತ್ತಿದ್ದರು. ಬುಧವಾರ ರಾತ್ರಿ ಬನ್ನೇರಘಟ್ಟ ರಸ್ತೆಯಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

MND BSY 4

MND BSY 5

MND BSY 6

MND BSY 3

MND BSY 2

MND BSY 1

MND BSY 7

Share This Article
Leave a Comment

Leave a Reply

Your email address will not be published. Required fields are marked *