Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಚಿತ್ತಾಪುರದಲ್ಲಿ ಛಲವಾದಿ ನಾರಾಯಣಸ್ವಾಮಿಗೆ ಘೇರಾವ್
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಚಿತ್ತಾಪುರದಲ್ಲಿ ಛಲವಾದಿ ನಾರಾಯಣಸ್ವಾಮಿಗೆ ಘೇರಾವ್

Public TV
Last updated: May 22, 2025 9:57 pm
Public TV
Share
5 Min Read
Chalavadi Complaint To Governor
SHARE

– ಸಚಿವ ಸ್ಥಾನದಿಂದ ಪ್ರಿಯಾಂಕ್ ಖರ್ಗೆ ವಜಾಕ್ಕೆ ಬಿಜೆಪಿ ಆಗ್ರಹ; ರಾಜ್ಯಪಾಲರಿಗೆ ದೂರು

ಬೆಂಗಳೂರು: ಕಲಬುರಗಿಯಲ್ಲಿ ಪೊಲೀಸ್ ಅಧಿಕಾರಿಗಳೇ ನನ್ನನ್ನು ಬಂಧನದಲ್ಲಿ ಇಟ್ಟ ಹಾಗಿತ್ತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ(Chalavadi Narayanswamy) ಆಕ್ಷೇಪಿಸಿದರು.

ನಿನ್ನೆ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನನ್ನ ಮೇಲೆ ಹಲ್ಲೆ ಯತ್ನ, ದಿಗ್ಬಂಧನ ಮತ್ತು ಕಾಂಗ್ರೆಸ್‌ ಗೂಂಡಾಗಿರಿತನದ ವಿರುದ್ಧ ಇಂದು ಬಿಜೆಪಿ ನಿಯೋಗದೊಂದಿಗೆ ಗೌರವಾನ್ವಿತ ರಾಜ್ಯಪಾಲರಾದ ಶ್ರೀ @TCGEHLOT ‌ಅವರನ್ನು ಭೇಟಿ ಮಾಡಿ ಈ ಕೃತ್ಯ ಎಸಗಿದವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲು ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿ ಮನವಿ… pic.twitter.com/LElQt3WJof

— Chalavadi Narayanaswamy (@NswamyChalavadi) May 22, 2025

ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್(R Ashok), ಬಿಜೆಪಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ನಿಯೋಗವು ಗುರುವಾರ ರಾಜ್ಯಪಾಲರನ್ನು ಭೇಟಿ ಮಾಡಿತ್ತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ನಿಜವಾಗಲೂ ಪ್ರಾಣ ಬೆದರಿಕೆ ಇದೆ. ನನಗೆ ಏನೇ ಆದರೂ ಈ ಸರ್ಕಾರ ಮತ್ತು ಖರ್ಗೆಯವರ ಕುಮ್ಮಕ್ಕೇ ಅದಕ್ಕೆ ಕಾರಣ ಎಂದು ಆರೋಪಿಸಿದರು. ಇದನ್ನೂ ಓದಿ: ಮಡೆನೂರ್ ಮನುನನ್ನ ಬೆಂಗ್ಳೂರಿಗೆ ಕರೆತಂದ ಪೊಲೀಸ್‌ – ಅದು ರೇಪ್‌ ಅಲ್ಲ, ಒಪ್ಪಂದದ ಸಂಪರ್ಕ ಅಂದ ನಟ

ಸಿಎಂ ಸಿದ್ದರಾಮಯ್ಯ ಅವರು ಪ್ರಿಯಾಂಕ್ ಖರ್ಗೆಯವರನ್ನು(Priyank Kharge) ಸಚಿವ ಸ್ಥಾನದಿಂದ ಹೊರದೂಡಬೇಕು. ಇಲ್ಲವಾದರೆ ಮುಂದಿನ ಘಟನೆಗಳಿಗೆ ಮುಖ್ಯಮಂತ್ರಿಗಳೇ ಹೊಣೆಗಾರರು. ನನ್ನ ಭದ್ರತಾ ವ್ಯವಸ್ಥೆ ಹೆಚ್ಚಿಸಬೇಕು. ಪೊಲೀಸರು ಅಷ್ಟು ಕಡಿಮೆ ಜನರನ್ನೇ ಹೊರಕ್ಕೆ ಹಾಕಿಲ್ಲ. ಒಬ್ಬ ಗನ್‌ಮ್ಯಾನ್ ಕೊಟ್ಟರೆ, 50 ಜನ ಬಂದರೆ ಅವರೇನು ಮಾಡಲು ಸಾಧ್ಯ ಎಂದು ಕೇಳಿದರು.

ಎಐಸಿಸಿ ಅಧ್ಯಕ್ಷರ ಮಗನೆಂದರೆ ಅವರಿಗೆ ಬೇರೆ ನಿಯಮ, ಸಂವಿಧಾನ ಇದೆಯೇ? ಅವರನ್ನು ಸಚಿವರನ್ನಾಗಿ ಇಟ್ಟುಕೊಳ್ಳಲೇ ಬೇಕಾ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕನ್ನಡದ ನಟಿಯರನ್ನ ಹಾಕೊಂಡ್ರೆ ಲಾಭ ಬರಲ್ವಾ: ನಾರಾಯಣ ಗೌಡ ಆಕ್ರೋಶ

ನಾನು ನೇರವಾಗಿ ಮಾತನಾಡುವುದು ಅವರಿಗೆ ಹಿತವಾಗಿಲ್ಲ. ಅವರು ಯಾವಾಗ ಜಮೀನು ವಾಪಸ್ ಕೊಟ್ಟರೋ ಆವತ್ತಿನಿಂದ ನನ್ನ ಹಿಂದೆ ಪಿತೂರಿ ಮಾಡುತ್ತಿರುವುದು ನನಗೆ ಗೊತ್ತಿದೆ. ನನ್ನನ್ನು ಮುಗಿಸುವ ತಂತ್ರ ಅವರದ್ದು ಎಂದು ಆರೋಪಿಸಿದರು. ಇದನ್ನೂ ಓದಿ: ಮೋದಿಜೀ ಪೊಳ್ಳು ಭಾಷಣ ನಿಲ್ಲಿಸಿ… ಕ್ಯಾಮೆರಾಗಳ ಮುಂದೆ ಮಾತ್ರ ನಿಮ್ಮ ರಕ್ತ ಏಕೆ ಕುದಿಯುತ್ತೆ? – ರಾಗಾ

ಹೇಗಾದರೂ ನನಗೆ ಅಪಮಾನ ಮಾಡಬೇಕೆಂದು ಪ್ರಯತ್ನ ನಡೆದಿದೆ. ನಮ್ಮನ್ನು ಮುಗಿಸಲು ಪ್ರಿಯಾಂಕ್ ಖರ್ಗೆ ತೀರ್ಮಾನ ಮಾಡಿದ್ದಾರೆ. ಅವರ ಸತ್ಯ ಹೊರಹಾಕುವ ವಿಚಾರದಲ್ಲಿ ನಾನು ಅವರಿಗೆ ಕಂಟಕವಾಗಿದ್ದೇನೆ ಎಂದು ಅವರಿಗೆ ಅನಿಸಿರಬಹುದು ಎಂದು ದೂರಿದರು.

ಅವಾಚ್ಯ ಶಬ್ದಗಳಿಂದ ನನ್ನನ್ನು ಬೈದಿದ್ದಾರೆ. ದಯವಿಟ್ಟು ಸಹಕರಿಸಿ ಎಂದು ಪೊಲೀಸರು ಹೇಳಿದರು. ಬೈಯುವುದನ್ನು ಕೇಳಿಕೊಂಡು, ಇಂಕ್ ಹಾಕಿದರೆ ಹಾಕಿಸಿಕೊಂಡು, ಮೊಟ್ಟೆ ಒಡೆದರೆ ಒಡೆಸಿಕೊಂಡು ಸಹಕರಿಸಬೇಕಿತ್ತೇ? ಅಲ್ಲಿ ಬಂದಿದ್ದ 25ರಿಂದ 30 ಜನರನ್ನು ಅಲ್ಲಿಂದ ಪೊಲೀಸರಿಗೆ ದೂಡಲಾಗಿಲ್ಲ. 100ಕ್ಕೂ ಹೆಚ್ಚು ಪೊಲೀಸರಿದ್ದರು. ಗೃಹ ಸಚಿವರು, ಎಡಿಜಿಪಿ, ಎಸ್ಪಿ ಬಳಿ ಮಾತನಾಡಿದ್ದೇನೆ. ಹೆಚ್ಚುವರಿ ಎಸ್ಪಿ ಅಲ್ಲೇ ನಿಂತಿದ್ದರು. ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್‌, ನಾಲ್ಕೈದು ಜನ ಇನ್ಸ್‌ಪೆಕ್ಟರ್‌ಗಳಿದ್ದರೂ ನಮ್ಮನ್ನು ಹೊರಕ್ಕೆ ಕಳುಹಿಸಲಿಲ್ಲ. ಬಹುಶಃ ಅವರಿಗಿಂತ ಇವರೇ ನಮ್ಮನ್ನು ಬಂಧನದಲ್ಲಿ ಇಟ್ಟಂತಿತ್ತು ಎಂದು ಟೀಕಿಸಿದರು. ಇದನ್ನೂ ಓದಿ: ಕೆನಿಶಾಗೆ ಕೊಲೆ ಬೆದರಿಕೆ – ಆರತಿ ಸಮಸ್ಯೆಗೆ ನಾನು ಕಾರಣ ಆಗಿದ್ರೆ ಕೋರ್ಟ್‌ ಮುಂದೆ ನಿಲ್ಲಿಸಿ ಎಂದ ಗಾಯಕಿ

ಪ್ರಧಾನಿಯನ್ನು ವಿಷ ಸರ್ಪಕ್ಕೆ ಹೋಲಿಸಿದವರು ಯಾರು?
ಈ ದೇಶದ ಪ್ರಧಾನಿಯನ್ನು ವಿಷ ಸರ್ಪಕ್ಕೆ ಹೋಲಿಸಿದವರು ಯಾರು? ಮಲ್ಲಿಕಾರ್ಜುನ ಖರ್ಗೆಯವರು. ಇದಕ್ಕೆ ಇವತ್ತಿಗೂ ದಾಖಲೆ ಇದೆ. ಪ್ರಿಯಾಂಕ್ ಖರ್ಗೆಯವರು ಮಾತು ಮಾತಿಗೆ ಆರೆಸ್ಸೆಸ್ ಚಡ್ಡಿಯವರು ಎನ್ನುತ್ತಾರೆ. ಇದು ನಮಗೆ ಅವಮಾನ ಅಲ್ಲವೇ. ಇದೆಲ್ಲ ನೀವು ಮಾಡಬಹುದು. ನಾವೊಂದು ಗಾದೆ ಹೇಳಿದರೆ ನಿಮಗೆ ಚುಚ್ಚುತ್ತದೆಯೇ? ನಮ್ಮನ್ನು ನಾಯಿಗೆ ಹೋಲಿಸಿದ್ದಾರೆ. ಇವರಿಗೆ ಪದ್ಮಭೂಷಣಕ್ಕೆ ಶಿಫಾರಸು ಮಾಡಬೇಕೇ? ನಮ್ಮ ಕ್ಷೇತ್ರದಿಂದ ಹಾಗೇ ಕಳಿಸಬೇಕೇ ಅಂದರೆ ಪ್ರಾಣ ತೆಗೆದು ಕಳಿಸುತ್ತಿದ್ದರೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾನ್ ಫೆಸ್ಟಿವಲ್| ರೆಡ್ ಕಾರ್ಪೆಟ್‌ನಲ್ಲಿ ಜಾನ್ವಿ ವಾಕ್ – ‘ನನ್ನ ದೇವತೆ’ ಎಂದ ಬಾಯ್‌ಫ್ರೆಂಡ್

ನಾನು ಸತ್ಯವನ್ನೇ ಹೇಳುವವ. ತಪ್ಪಿದ್ದರೆ, ಅದು ನನ್ನ ಗಮನಕ್ಕೆ ಬಂದರೆ ನಾನು ಹೋರಾಟ ಮಾಡುವವ. ನಮ್ಮ ಪಕ್ಷದ ಮುಖಂಡರನ್ನು ಗೌರವಿಸಿ ಅವರಿಗೆ ವಿಷಯ ತಿಳಿಸಿ ಇವೆಲ್ಲ ಮಾಡುತ್ತಿದ್ದೇನೆ. ನಮ್ಮ ಪಕ್ಷದ್ದು ಸಂಘಟಿತ ಹೋರಾಟ. ಡಿ.ಜಿ, ಗೃಹ ಸಚಿವ, ಮುಖ್ಯಮಂತ್ರಿಗಳಿಗೆ ದೂರು ಕೊಡಲಿದ್ದೇವೆ. ಕೇಂದ್ರದ ಗೃಹ ಸಚಿವರಿಗೂ ಮನವಿ ಕಳುಹಿಸಲಿದ್ದೇವೆ ಎಂದು ತಿಳಿಸಿದರು.

ಮೂಕಪ್ರೇಕ್ಷಕರಾಗಿದ್ದ ಪೊಲೀಸ್ ಅಧಿಕಾರಿಗಳು
ನನ್ನ ಮೇಲೆ ಹಾಕಲು ಇಂಕ್ ತಂದಿದ್ದರು. ಬಳಿಕ ಕಾರಿನ ಮೇಲೆ ಹಾಕಿದ್ದಾರೆ. ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ಮೂಕಪ್ರೇಕ್ಷಕರಾಗಿದ್ದರು. ನಮ್ಮವರು 400ರಿಂದ 500 ಜನರಿದ್ದರು. ಅವರು ಹಲ್ಲೆ ಮಾಡಲು ಬಂದವರನ್ನು ಹತ್ತಿರ ಬರದಂತೆ ತಡೆದರು. ಕುಪಿತನಾಗಿ ನಾನು ಪೊಲೀಸರಿಗೆ, ರಕ್ಷಣೆ ಕೊಡುವುದಾದರೆ ಕೊಡಿ, ನಾನು ಹೋಗುವುದಾಗಿ ಹೇಳಿ ಹೊರಬಂದೆ. ಆಗ, ನಮ್ಮನ್ನು ಕರೆತಂದು ಯಾದಗಿರಿಗೆ ಹೋಗಲು ಗಡಿಭಾಗದಿಂದ ಆಚೆಗೆ ಬಿಟ್ಟರು. ಪ್ರಿಯಾಂಕ್ ಖರ್ಗೆ ಬೆಂಬಲಿಗರು, ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೇ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ರನ್ಯಾರಾವ್‌ಗೆ ಪರಮೇಶ್ವರ್ ಶಿಕ್ಷಣ ಸಂಸ್ಥೆ ಸಾಲ ಕೊಟ್ಟಿರಬಹುದು: ರಾಮಲಿಂಗಾ ರೆಡ್ಡಿ

ನಮ್ಮ ಪದಾಧಿಕಾರಿಯನ್ನು ತಳ್ಳಾಡಿ, ಬಟ್ಟೆ ಹರಿದಿದ್ದರು
ನಮ್ಮ ಪಕ್ಷದ ಎಸ್ಸಿ ಮೋರ್ಚಾದ ಮಾಜಿ ಉಪಾಧ್ಯಕ್ಷ, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಟಗಿ ಅವರು ನನ್ನನ್ನು ನೋಡಲು ಬಂದಿದ್ದರು. ಅವರನ್ನು ತಳ್ಳಾಡಿ ಬಟ್ಟೆ ಹರಿದಿದ್ದಾರೆ. ಅವರನ್ನು ರಾತ್ರಿ 3 ಗಂಟೆವರೆಗೆ ಒಂದು ಕಡೆ ಕೂಡಿ ಹಾಕಿದ್ದರು. ಒದೆ ತಿಂದವರೂ ಅವರೇ, ಅವರ ಮೇಲೇ ದೂರು ನೀಡುವುದಾಗಿ ಹೆದರಿಸಿದ್ದಾರೆ ಎಂದರು. ಇದನ್ನೂ ಓದಿ: ಉಗ್ರರು ಪಾಕಿಸ್ತಾನದಲ್ಲೇ ಅಡಗಿದ್ರೂ ನುಗ್ಗಿ ಹೊಡೆಯುತ್ತೇವೆ: ಜೈಶಂಕರ್‌

ಬಳಿಕ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, 5 ತಾಸು ನನ್ನನ್ನು ತಡೆಹಿಡಿದಿದ್ದೀರಿ. ಇಲ್ಲಿ ಪ್ರಜಾಪ್ರಭುತ್ವ ಇದೆಯೇ? ನಮ್ಮ ಸರ್ಕಾರ ಇದ್ದಾಗ ಸಿದ್ದರಾಮಯ್ಯನವರು ವಿಪಕ್ಷ ನಾಯಕರಾಗಿದ್ದರು. ಅವರು ಕೊಡಗಿಗೆ ಹೋಗಿದ್ದರು. ಚಲಿಸುವ ಕಾರಿಗೆ ಯಾರೋ ಒಬ್ಬ ಹುಡುಗ ಮೊಟ್ಟೆ ಬಿಸಾಕಿದ್ದ. ಆಗ ಅವರು ಎಷ್ಟೊಂದು ಮಾತನಾಡಿದ್ದರು. ನಾನು ಮಾಜಿ ಸಿಎಂ, ನನಗೇನು ಗೌರವ ಇಲ್ಲವೇ? ಪೊಲೀಸರು ಏನು ಮಾಡುತ್ತೀರಿ ಎಂದು ಸಿದ್ದರಾಮಯ್ಯ ಕೇಳಿದ್ದರು. ಆದರೆ ಈಗ ನಿಮಗೇನೂ ಅನಿಸುವುದಿಲ್ಲವೇ ಮುಖ್ಯಮಂತ್ರಿಗಳೇ ಎಂದು ಪ್ರಶ್ನೆ ಮುಂದಿಟ್ಟರು.

Share This Article
Facebook Whatsapp Whatsapp Telegram
Previous Article Madenur Manu 2 ಮಡೆನೂರ್ ಮನುನನ್ನ ಬೆಂಗ್ಳೂರಿಗೆ ಕರೆತಂದ ಪೊಲೀಸ್‌ – ಅದು ರೇಪ್‌ ಅಲ್ಲ, ಒಪ್ಪಂದದ ಸಂಪರ್ಕ ಅಂದ ನಟ
Next Article Manohar Lal Khattar 1 ವಸತಿ ಹಂಚಿಕೆಯಲ್ಲಿ ಅಂಗವಿಕಲರಿಗೆ 4% ಮೀಸಲಾತಿ ಕಡ್ಡಾಯ: ಕೇಂದ್ರ ಸರ್ಕಾರ

Latest Cinema News

Jyoti Rai
ಪಡ್ಡೆಗಳ ನಿದ್ದೆ ಕದ್ದ ಹಾಟ್ ಬ್ಯೂಟಿ ಜ್ಯೋತಿ ರೈ – ಕಾಮೆಂಟ್ಸ್‌ ಸೆಕ್ಷನ್‌ ಆಫ್‌ ಮಾಡಿದ್ದೇಕೆ?
Cinema Latest Sandalwood
Sudharani 2
BBK12 | ಬಿಗ್‌ಬಾಸ್‌ಗೆ ಹೋಗ್ತಾರಾ ಸುಧಾರಾಣಿ – ʻಯಾರ್‌ ಹೇಳಿದ್ದುʼ?
Cinema Latest Sandalwood Top Stories TV Shows
Krrish 4
ಹೃತಿಕ್ ನಟನೆಯ ಜೊತೆಗೆ ನಿರ್ದೇಶನ ಕ್ರಿಶ್-4 ಹೇಗಿರಲಿದೆ ಗೊತ್ತಾ..?
Bollywood Cinema Latest Top Stories
Disha Patani Emraan Hashmi 1
ಸೂಪರ್ ಹಿಟ್ ಅವರಾಪನ್ ಚಿತ್ರದ ಸಿಕ್ವೇಲ್ – ಇಮ್ರಾನ್ ಹಶ್ಮಿಗೆ ದಿಶಾ ಪಟಾನಿ ನಾಯಕಿ
Bollywood Cinema Latest Top Stories
Darshan Rajavardhan
ವಿಷ ಕೇಳಿದ ನಟ ದರ್ಶನ್ ಬಗ್ಗೆ ಆಪ್ತ ರಾಜವರ್ಧನ್ ಮರುಕ
Cinema Latest Sandalwood Top Stories

You Might Also Like

Nepal
Bengaluru City

ನೇಪಾಳ ಧಗ ಧಗ – ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವಂತೆ ಸಿಎಂ ಸೂಚನೆ

5 hours ago
Bengaluru 1
Bengaluru City

ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಗುಡ್‌ನ್ಯೂಸ್‌ – ಕಟ್ಟಡ ನಿರ್ಮಾಣಕ್ಕೆ ಓಸಿಯಿಂದ ವಿನಾಯ್ತಿ

6 hours ago
Karwar Satish Sail Home ED Raid
Districts

ಅಕ್ರಮ ಹಣ ವರ್ಗಾವಣೆ ಕೇಸ್‌ – ಇ.ಡಿಯಿಂದ ಶಾಸಕ ಸತೀಶ್ ಸೈಲ್‌ ಅರೆಸ್ಟ್‌

7 hours ago
CP Radhakrishnan Narendra Modi
Latest

ದೇಶದ ನೂತನ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್‌ ಯಾರು? ಹಿನ್ನೆಲೆ ಏನು?

7 hours ago
CP Radhakrishnan 1
Latest

ನೂತನ ಉಪ ರಾಷ್ಟ್ರಪತಿಯಾಗಿ ಸಿ.ಪಿ ರಾಧಕೃಷ್ಣನ್ ಆಯ್ಕೆ

7 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?