ಬೆಂಗಳೂರು: ಶೀಘ್ರವೇ ಬಿಬಿಎಂಪಿ ಚುನಾವಣೆ ಘೋಷಣೆ ಆಗಲಿದೆ. ವಿಧಾನಸಭೆ ಚುನಾವಣೆ ಕೂಡ ಸನಿಹದಲ್ಲೇ ಇದೆ. ಹೀಗಾಗಿ ಬಿಜೆಪಿ ಫುಲ್ ಎಲೆಕ್ಷನ್ ಮೂಡ್ನಲ್ಲಿದೆ. ಇಂದು ನಂದಿಬೆಟ್ಟದ ಬಳಿ ಆರ್ಎಸ್ಎಸ್- ಬಿಜೆಪಿಯ ಚಿಂತನಾ ಶಿಬಿರ ನಡೆದಿದೆ.
ಸರ್ಕಾರದ ವರ್ಚಸ್ಸು ಹೆಚ್ಚಿಸುವ ಬಗ್ಗೆ ರಹಸ್ಯ ಸಮಾಲೋಚನೆ ನಡೆಸಿದೆ. ಬಿಜೆಪಿ ಚಿಂತನಾ ಸಭೆಯಲ್ಲಿ ಜಾತಿ ಸಮೀಕರಣದ ಲೆಕ್ಕಾಚಾರಗಳು ನಡೆದಿವೆ. ಅದ್ರಲ್ಲೂ ಪ್ರಮುಖವಾಗಿ ಸಿದ್ದರಾಮಯ್ಯನವರ ಅಹಿಂದ ಜಪಕ್ಕೆ ಟಕ್ಕರ್ ಕೊಡಲು ಹಿಂದೂ ಜಪ ಮಾಡೋ ಬಗ್ಗೆ ಚರ್ಚೆಗಳು ನಡೆದಿವೆ. ಈ ಮೂಲಕ ನಿರ್ಲಕ್ಷಿತ ಜಾತಿ ಸಮುದಾಯಗಳನ್ನು ಒಟ್ಟುಗೂಡಿಸಲು ಚಿಂತನಾ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ. ಇದನ್ನೂ ಓದಿ: ನೂಪುರ್ ಶರ್ಮಾ ಫೋಟೋ ಅಪ್ಲೋಡ್ ಮಾಡಿದ್ದ ಉದ್ಯಮಿಗೆ ಕೊಲೆ ಬೆದರಿಕೆ – ಮೂವರ ಬಂಧನ
ಇಷ್ಟು ದಿನ ಜಾಲಿ ಮಾಡಿದ್ದು ಸಾಕು ಇನ್ನು 10 ತಿಂಗಳು ಕಷ್ಟಪಡಿ. ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಪಡಿಸಿ. ಜಾತಿ ಸಮಾವೇಶ ನಡೆಸಿ ಎಂದು ಸಚಿವರಿಗೆ ಹಲವು ಟಾಸ್ಕ್ ನೀಡಲಾಗಿದೆ ಎಂದು ತಿಳಿದು ಬಂದಿದ್ದು, ಆಪರೇಷನ್ ಕಮಲ ಮುಂದುವರಿಸುವ ವಿಚಾರದಲ್ಲಿ ಸಾಧಕ ಬಾಧಕಗಳ ಬಗ್ಗೆಯೂ ಗಂಭೀರ ಚರ್ಚೆಗಳು ನಡೆದಿದೆ.