ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ನಮ್ಮ ಬಳಿ ದಾಖಲೆ ಕೇಳಿದರೆ ಹೆಂಗೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ಅವರು ಬಳಿ ಸರ್ಕಾರವಿದೆ. ದಾಖಲೆ ಅವರೇ ಕೊಡಬೇಕು. ನಮ್ಮ ಬಳಿ ದಾಖಲೆ ಕೇಳಿದ್ರೆ ಹೆಂಗೆ? ದಾಖಲೆ ಬಿಡುಗಡೆ ಮಾಡ್ತೀನಿ ಅಂತ ನಾನು ಎಲ್ಲಿ ಹೇಳಿದ್ದೆ? ಮಾತನಾಡುತ್ತೇನೆ ಎಂದಿದ್ದೆ ಮಾತಾಡೋದು ಬೇರೆ ದಾಖಲೆ ಬಿಡುಗಡೆ ಮಾಡೋದು ಬೇರೆ ಎಂದಿದ್ದಾರೆ. ಇದನ್ನೂ ಓದಿ: ಮಂಗಳಮುಖಿ ಪೂಜಾರಿ ನಿಗೂಢ ಸಾವಿಗೆ ಟ್ವಿಸ್ಟ್- ಸಾವಿಗೂ ಮುನ್ನ ಮಾಡಿದ್ದ ಸೆಲ್ಫಿ ವಿಡಿಯೋ ಬಯಲು!
ನಿನ್ನೆ ಅರ್ಧದಲ್ಲಿ ಭಾಷಣ ಮೊಟಕುಗೊಳಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಭಾಷಣಕ್ಕೆ ಅಡ್ಡಿಯೂ ಇಲ್ಲ ಪಡ್ಡಿಯೂ ಇಲ್ಲ ನಾನು ಮೊದಲೇ ಭಾಷಣ ಮಾಡಲ್ಲ ಶುಭಾಶಯ ಹೇಳಿ ಹೋಗುತ್ತೇನೆ ಎಂದಿದ್ದೆ. ಹಾಗಾಗಿ ಭಾಷಣ ಅರ್ಧಕ್ಕೆ ಮುಗಿಸಿದೆ. ಬೇರೆ ಕಾರ್ಯಕ್ರಮಕ್ಕೆ ಹೋಗಬೇಕು ಎಂದು ವಿಶ್ ಮಾಡ್ತೀನಿ ಎಂದು ಹೇಳಿದ್ದೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ಮೆಂಟಲ್ ಗಿರಾಕಿಗಳು, ಅವರಿಗೆ ನಾನ್ಯಾಕೆ ಉತ್ತರಿಸಲಿ: ಡಿಕೆಶಿ ವಾಗ್ದಾಳಿ
ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದಿಂದ ಭಾರೀ ಬಿಟ್ ಕಾಯಿನ್ ಹಗರಣ ನಡೆದಿದೆ ಎಂದು ಆರೋಪಿಸಿದ್ದರು. ಈ ವಿಚಾರಕ್ಕೆ ತಿರುಗೇಟು ನೀಡಿದ್ದ ಸಿಎಂ ಬೊಮ್ಮಾಯಿ ನಾವು ಹಗರಣ ಮಾಡಿದ್ದೇವೆ ಎಂಬ ಆರೋಪಕ್ಕೆ ಕಾಂಗ್ರೆಸ್ನವರು ದಾಖಲೆಯನ್ನು ಬಿಡುಗಡೆ ಮಾಡಲಿ ಎಂದು ಸವಾಲು ಎಸೆದಿದ್ದರು.