Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಕಣ್ಮನ ಸೆಳೆಯುತ್ತಿವೆ ಕಾಡಿನ ರೈತ ಪಕ್ಷಿಗಳ ಉತ್ಸವ

Public TV
Last updated: February 4, 2018 4:11 pm
Public TV
Share
3 Min Read
KWR BIRDS
SHARE

ಕಾರವಾರ: ಬೆಳೆಯುತ್ತಿರುವ ನಾಗರೀಕತೆಯಲ್ಲಿ ಪ್ರಾಣಿ ಪಕ್ಷಿಗಳ ಸಂತತಿ ನಾಶವಾಗುತ್ತಿವೆ. ಮುಂದಿನ ಪೀಳಿಗೆಗಳಿಗೆ ಚಿತ್ರಪಟದಲ್ಲಿ ಪಕ್ಷಿ ಪ್ರಾಣಿಗಳ ಫೋಟೋಗಳನ್ನು ತೋರಿಸಿ ಸಮಾಧಾನ ಪಟ್ಟುಕೊಳ್ಳುವ ಪರಿಸ್ಥಿತಿ ಬಂದಿದೆ. ಇಂತಹ ಕಾಲಘಟ್ಟದಲ್ಲಿ ಪ್ರಾಣಿ ಪಕ್ಷಿಗಳನ್ನ ರಕ್ಷಣೆ ಮಾಡುವ ಹೊಣೆ ನಮ್ಮದು.

ಇದೇ ಮೊದಲ ಬಾರಿಗೆ ಹಾರ್ನ್ ಬಿಲ್ ಉತ್ಸವವನ್ನು ಅರಣ್ಯ ಇಲಾಖೆ ಆಯೋಜನೆ ಮಾಡಿತ್ತು. ದೇಶದಲ್ಲಿಯೇ ಅವಸಾನದ ಅಂಚಿನಲ್ಲಿರುವ ಈ ಹಾರ್ನ್‍ಬಿಲ್ ಗಳು ಕಾಳಿ ನದಿಯ ಪ್ರದೇಶವಾದ ದಾಂಡೇಲಿಯ ದಟ್ಟ ಕಾಡಿನಲ್ಲಿ ತಮ್ಮ ಬದುಕು ರೂಪಿಸಿಕೊಂಡಿವೆ.

KWR BIRDS 1

ಕಾಡಿನ ರೈತ ಎಂದೇ ಪ್ರಸಿದ್ಧವಾಗಿರುವ ಈ ಹಕ್ಕಿಗಳ ನಾಲ್ಕು ಪ್ರಬೇಧಗಳು ಈ ಭಾಗದಲ್ಲಿ ನೋಡಲು ಸಿಗುತ್ತವೆ. ಹೀಗಾಗಿ ಪಕ್ಷಿ ಪ್ರಿಯರಿಗಾಗಿ ಅರಣ್ಯ ಇಲಾಖೆ ಮೂರು ದಿನಗಳ ಹಾರ್ನ್ ಬಿಲ್ ಉತ್ಸವ ಮಾಡುವ ಮೂಲಕ ಪಕ್ಷಿ ಪ್ರಿಯರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸೆಳೆಯುತ್ತಿದೆ. ಪಕ್ಷಿವೀಕ್ಷಣೆ, ಛಾಯಾಚಿತ್ರ ಪ್ರದರ್ಶನ ಮತ್ತು ಮಾಹಿತಿ ಕಾರ್ಯಗಾರವನ್ನು ಮೂರು ದಿನಗಳವರೆಗೆ ಆಯೋಜನೆ ಮಾಡಿದ್ದಾರೆ.

ಹಾರ್ನ್ ಬಿಲ್ ಪಕ್ಷಿಯ ಮಹತ್ವವೇನು?
ಗ್ರೇಟ್ ಹಾರ್ನ್ ಬಿಲ್ (ಬ್ಯುಸೆರೊಸ್ ಬೈಕಾರ್ ನಿಸ್), ಇದನ್ನು ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಅಥವಾ ಗ್ರೇಟ್ ಪೈಡ್ ಹಾರ್ನ್ ಬಿಲ್ (ಬಣ್ಣಬಣ್ಣದ ಮಹಾ ಹಾರ್ನ್ ಬಿಲ್) ಎಂದು ಕೂಡ ಕರೆಯಲಾಗುತ್ತದೆ. ಕನ್ನಡದಲ್ಲಿ `ಮಂಗಟ್ಟೆ’ ಎಂದು ಕರೆಯುತ್ತಾರೆ. ಹಾರ್ನ್ ಬಿಲ್ ಕುಟುಂಬದ ದೊಡ್ಡ ಪ್ರಭೇದಗಳ ಪೈಕಿ ಇದು ಒಂದಾಗಿದೆ. ಗ್ರೇಟ್ ಹಾರ್ನ್ ಬಿಲ್ ಭಾರತ, ಮಲಯ್ ಪರ್ಯಾಯ ದ್ವೀಪ ಮತ್ತು ಸುಮಾತ್ರಾ, ಇಂಡೋನೇಷ್ಯಾದ ಅರಣ್ಯಗಳಲ್ಲಿ ಕಂಡುಬರುತ್ತದೆ. ಅವುಗಳ ಆಕರ್ಷಕ ಗಾತ್ರ ಮತ್ತು ಬಣ್ಣ ಅನೇಕ ಬುಡಕಟ್ಟು ಜನಾಂಗದ ಸಂಸ್ಕೃತಿಗಳಲ್ಲಿ ಮತ್ತು ಆಚರಣೆಗಳಲ್ಲಿ ಅವುಗಳನ್ನು ಪ್ರಮುಖವಾಗಿಸಿವೆ.

KWR BIRDS 2

ಗ್ರೇಟ್ ಹಾರ್ನ್ ಬಿಲ್ ದೀರ್ಘಕಾಲದವರೆಗೆ ಜೀವಿಸುವ ಪಕ್ಷಿಯಾಗಿದ್ದು, 50 ವರ್ಷಗಳವರೆಗೆ ಬದುಕುಳಿಯುತ್ತವೆ. ಇವುಗಳು ಹೆಚ್ಚಾಗಿ ಫಲಾಹಾರಿಗಳಾದರೂ ಕೂಡ ಇವು ಅನುಕೂಲವರ್ತಿಗಳಾಗಿದ್ದು, ಸಣ್ಣ ಸಸ್ತನಿ, ಸರೀಸೃಪ ಮತ್ತು ಪಕ್ಷಿಗಳನ್ನು ಬೇಟೆಯಾಡುತ್ತವೆ. ಇವುಗಳು ಸೇವಿಸಿದ ಹಣ್ಣುಗಳು ಅದರ ಹಿಕ್ಕಿಯಿಂದ ಬೀಜವಾಗಿ ಸಸಿಗಳಾಗಿ ಅರಣ್ಯ ಹೆಚ್ಚಲು ಕಾರಣವಾಗಿದೆ. ಈ ಕಾರಣದಿಂದ ಅರಣ್ಯದ ರೈತ ಎಂಬ ಹೆಸರು ಕೂಡ ಈ ಪಕ್ಷಿಗಳ ಹೆಗ್ಗಳಿಕೆಗೆ ಸೇರಿಕೊಂಡಿವೆ. ಸ್ಥಳೀಯ ಜನರು ಇವುಗಳ ಬೇಟೆಯಾಡಿ ಮಾಂಸ ಹಾಗೂ ಔಷಧಕ್ಕೆ ಬಳಕೆ ಮಾಡುತ್ತಿದ್ದರು.

ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ನಾಲ್ಕು ಪ್ರಬೇಧಗಳಿವೆ. ಇವುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಭಾಗದಲ್ಲಿ ಹೆಚ್ಚು ಕಂಡುಬರುತ್ತವೆ. ಈ ಕಾರಣದಿಂದ 2008 ರಲ್ಲಿ ಹಾರ್ನ್ ಬಿಲ್ ರಕ್ಷಿತ ಪ್ರದೇಶವಾಗಿ ಈ ಭಾಗವನ್ನು ಘೋಷಿಸಲಾಗಿದೆ. ಇದಲ್ಲದೇ ಪರಿಸರ ಪ್ರಿಯರು ಈ ಭಾಗದಲ್ಲಿ ಇವುಗಳ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಪ್ರತಿ ವರ್ಷವೂ ಅರಣ್ಯ ಇಲಾಖೆ ಪಕ್ಷಿಗಳ ವೀಕ್ಷಣೆಗಾಗಿ ಅವಕಾಶ ಮಾಡಿಕೊಡುತ್ತಿದ್ದು, ಬರ್ಡ್ ವಾಚ್ ಕಾರ್ಯಗಾರಗಳನ್ನು ಮಾಡುವ ಮೂಲಕ ಅನೇಕ ಹೊಸ ಪಕ್ಷಿಗಳನ್ನ ಈ ಭಾಗದಲ್ಲಿ ಗುರುತಿಸಿವೆ. ಅವಸಾನದ ಅಂಚಿಗೆ ತಲುಪಿರುವ ಈ ಹಾರ್ನ್ ಬಿಲ್‍ಗಳನ್ನು ರಕ್ಷಿಸುವ ಸಲವಾಗಿ ಇವುಗಳಿಗೆ ಬೇಕಾದ ಪೂರಕ ವಾತಾವರಣಕ್ಕೆ ತೊಂದರೆಯಾಗದಂತೆ ಅರಣ್ಯ ಇಲಾಖೆ ಹಲವು ಕ್ರಮಗಳನ್ನು ತೆಗೆದುಕೊಂಡು ಸಂತತಿ ರಕ್ಷಿಸುವಲ್ಲಿ ಪ್ರಯತ್ನಿಸುತ್ತಿದೆ.

KWR BIRDS 4

ಈ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ರಕ್ಷಣೆಗಾಗಿ ಹಾರ್ನ್ ಬಿಲ್ ಉತ್ಸವ ಆಯೋಜನೆ ಮಾಡಿದ್ದು, ದೇಶ ವಿದೇಶದಿಂದ 150 ಕ್ಕೂ ಹೆಚ್ಚು ಪಕ್ಷಿ ವೀಕ್ಷಕರು ಹಾಗೂ ವನ್ಯ ಜೀವಿ ಛಾಯಾಗ್ರಾಹಕರು ಕಳೆದ ಮೂರು ದಿನಗಳಲ್ಲಿ ಉತ್ಸವದಲ್ಲಿ ಭಾಗವಹಿಸಿ ಮಂಗಟ್ಟೆ ಹಕ್ಕಿಯ ಮಧುರ ಕ್ಷಣಗಳನ್ನು ಯಾಂತ್ರಿಕ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ. ಆಸಕ್ತಿ ಇದ್ದರೂ ಬಿಡುವಿಲ್ಲದೆ ಪಕ್ಷಿ ವೀಕ್ಷಣೆಯನ್ನು ಮಿಸ್ ಮಾಡಿಕೊಂಡವರಿಗಾಗಿ ವನ್ಯಜೀವಿ ಛಾಯಾಗ್ರಾಹಕ ಕೈಗಾದ ಪುಟ್ಟರಾಜುರವರು ತೆಗೆದ ಕೆಲವು ಅಪರೂಪದ ಚಿತ್ರಗಳನ್ನು ನಾವಿಲ್ಲಿ ನೀಡಿದ್ದೇವೆ. ಮುಂದಿನ ಬಾರಿ ನೀವೂ ಈ ಸ್ಥಳಕ್ಕೆ ಬಂದು ವೀಕ್ಷಿಸಬಹುದು. ಪಕ್ಷಿ ಪ್ರಿಯರಿಗೆ ಅರಣ್ಯ ಇಲಾಖೆ ಜಂಗಲ್ ರೆಸಾರ್ಟ್ ನಿಂದ ಹಿಡಿದು ಖಾಸಗಿ ಹೋಂ ಸ್ಟೇ ವ್ಯವಸ್ಥೆಗಳಿವೆ. ಆನ್‍ಲೈನ್ ನಲ್ಲಿ ಕೂಡ ಬುಕ್ ಮಾಡಿ ಬಿಡುವು ಮಾಡಿಕೊಂಡು ಹೋಗಬಹುದು. ಇದಲ್ಲದೇ ಕಾಳಿ ನದಿಯಲ್ಲಿ ಜಲಕ್ರೀಡೆ, ವನ್ಯಜೀವಿ ವೀಕ್ಷಣೆಗೂ ಅವಕಾಶವಿದೆ.

KWR BIRDS 19

KWR BIRDS 20

KWR BIRDS 18

KWR BIRDS 17

KWR BIRDS 15

KWR BIRDS 13

KWR BIRDS 12

KWR BIRDS 10

KWR BIRDS 9

KWR BIRDS 8

KWR BIRDS 6

KWR BIRDS 5

KWR BIRDS 3

TAGGED:festivalforest departmentHornbillkarwarPublic TVಅರಣ್ಯ ಇಲಾಖೆಉತ್ಸವಕಾರವಾರಪಬ್ಲಿಕ್ ಟಿವಿಹಾರ್ನ್ ಬಿಲ್
Share This Article
Facebook Whatsapp Whatsapp Telegram

Cinema Updates

Benglauru Stampede Ramya Tweet
ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ – ಇದು ಹೃದಯ ವಿದ್ರಾವಕ ಘಟನೆ; ರಮ್ಯಾ ಬೇಸರ
23 hours ago
Kamal Haasan
ಅಹಂಕಾರಿ ಕಮಲ್‌ಗೆ ಬಿಗ್‌ ಶಾಕ್‌ – ಕರ್ನಾಟಕದಲ್ಲಿ ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆ
2 days ago
Kamal Haasan
ಮೊದಲು ಕ್ಷಮೆ ಕೇಳಿ, ಜನರ ಭಾವನೆಗೆ ಧಕ್ಕೆ ತರಬೇಡಿ: ಕಮಲ್‌ಗೆ ಹೈಕೋರ್ಟ್‌ ಚಾಟಿ
2 days ago
Thug Life 2
ಕಮಲ್ ಹಾಸನ್‌ಗೆ ಇಂದು ನಿರ್ಣಾಯಕ ದಿನ – ಹೈಕೋರ್ಟ್‌ನಲ್ಲಿ ‘ಥಗ್‌ಲೈಫ್’ ಬಿಡುಗಡೆ ನಿರ್ಧಾರ
2 days ago

You Might Also Like

Shivam Death ElectricShock
Bengaluru City

ಕಲ್ಯಾಣಮಂಟಪದ ಏರ್ ಕೂಲರ್‌ನಿಂದ ಎಲೆಕ್ಟ್ರಿಕ್ ಶಾಕ್ – 4 ವರ್ಷದ ಮಗು ದುರ್ಮರಣ

Public TV
By Public TV
2 minutes ago
bengaluru stambede 1
Court

ಬೆಳಗ್ಗಿನ ಜಾವ 4 ಗಂಟೆ ವರೆಗೆ ಕೆಲಸ ಮಾಡಿದ್ದ ಪೊಲೀಸರಿಗೆ ಮತ್ತೆ ಬಂದೋಬಸ್ತ್‌ ನೀಡಲು ಆಗ್ತಿತ್ತಾ? – ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

Public TV
By Public TV
13 minutes ago
Chinnaswamy Stampede
Bengaluru City

Chinnaswamy Stampede Case – ಆರ್‌ಸಿಬಿ ಫ್ರಾಂಚೈಸಿ, ಕೆಎಸ್‌ಸಿಎ ವಿರುದ್ಧ FIR

Public TV
By Public TV
30 minutes ago
RCB
Bengaluru City

Stampede Case | ಮೃತಪಟ್ಟ 11 ಸಂತ್ರಸ್ತರ ಕುಟುಂಬಗಳಿಗೆ RCB ಆಡಳಿತ ಮಂಡಳಿಯಿಂದ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ

Public TV
By Public TV
1 hour ago
BY Vijayendra
Bengaluru City

ಸಿಎಂ, ಡಿಸಿಎಂ, ಸಚಿವರಿಗೆ ಪ್ರಚಾರದ ಹುಚ್ಚೇ ಜಾಸ್ತಿ: ಹಾಲಿ‌ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು: ವಿಜಯೇಂದ್ರ ಆಗ್ರಹ

Public TV
By Public TV
2 hours ago
Mandya Death 3
Districts

ಮಂಡ್ಯ | ಮದ್ವೆಗೆ ಹುಡುಗಿ ನೋಡಿಕೊಂಡು ಬೆಂಗಳೂರಿಗೆ ಹೋದವನು ಮನೆಗೆ ಹಿಂತಿರುಗಿದ್ದು ಶವವಾಗಿ…

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?