ಚಿಕ್ಕಬಳ್ಳಾಪುರ: ನದಿಯಲ್ಲಿ (River) ಬೈಕ್ ಸಮೇತ ಸವಾರರು ಕೊಚ್ಚಿ ಹೋಗಿದ್ದು, ಅವರಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವನನ್ನು ರಕ್ಷಣೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗೌರಿಬಿದನೂರು ತಾಲೂಕಿನ ಇಡಗೂರು -ಜಾಲಹಳ್ಳಿ ಗ್ರಾಮಗಳ ಮಧ್ಯೆ ನಡೆದಿದೆ.
ತುಮಕೂರು (Tumakuru) ಜಿಲ್ಲೆಯ ಕಡಬಗೆರೆ ಗ್ರಾಮದ ಬಸವರಾಜು (30) ಮೃತ ವ್ಯಕ್ತಿ. ಮೃತ ಬಸವರಾಜು ಗೌರಿಬಿದನೂರು ತಾಲೂಕು ಆನುಡಿ ಗ್ರಾಮದ ಸಂಬಂಧಿಕರಾದ ಪ್ರಶಾಂತ್ ಮನೆಗೆ ಆಗಮಿಸಿದ್ದ. ಹೀಗಾಗಿ ಶುಕ್ರವಾರ ಸಂಜೆ ಪ್ರಶಾಂತ್ ಜೊತೆ ಬೈಕಿನಲ್ಲಿ ಬಸವರಾಜು ತೆರಳುತ್ತಿದ್ದ ವೇಳೆ ಇಬ್ಬರು ಬೈಕ್ ಸಮೇತ ನದಿಯಲ್ಲಿ ಕೊಚ್ಚಿ ಹೋಗಿದ್ದರು. ವಿಷಯ ತಿಳಿದು ಸ್ಥಳೀಯ ಗ್ರಾಮಸ್ಥರೆಲ್ಲರೂ ಸೇರಿ ಪ್ರಶಾಂತ್ನನ್ನು ರಕ್ಷಿಸಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ದಾಖಲೆ ಮಳೆ – 92 ವಾರ್ಡ್ಗಳಲ್ಲಿ ವರುಣಾರ್ಭಟ
ಇಂದು ಬೆಳಗ್ಗೆ ಬಸವರಾಜು ಅವರ ಮೃತ ದೇಹ ನದಿ ಪಾತ್ರದ ಪೊದೆಯೊಂದರಲ್ಲಿ ಪತ್ತೆಯಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಮೃತ ದೇಹವನ್ನು ಹೊರ ತೆಗೆದಿದ್ದು, ಸದ್ಯ ಗೌರಿಬಿದನೂರು ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನೆಯಲ್ಲಿ ಕೊಚ್ಚಿ ಹೋದ ಬೈಕ್ ಇನ್ನೂ ಪತ್ತೆಯಾಗಿಲ್ಲ. ಇದನ್ನೂ ಓದಿ: ಮುರುಘಾ ಮಠದಲ್ಲಿ ಮಗು ಪತ್ತೆ – ಮಗುವಿನ ಹಿನ್ನೆಲೆ ಬಗ್ಗೆ ರೋಚಕ ಟ್ವಿಸ್ಟ್