ಬೆಂಗಳೂರು: ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಕಾಲೇಜ್ ಫಂಕ್ಷನ್ ಮುಗಿಸಿ ಮನೆಗೆ ಹೊರಟಿದ್ದ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಗರದ ರಾಜಾಜಿನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
23 ವರ್ಷದ ಸಚಿನ್ ಮೃತ ದುರ್ದೈವಿ. ಸೋಮಾವಾರ ರಾತ್ರಿ 9.30ಕ್ಕೆ ಕಾಲೇಜ್ ಫಂಕ್ಷನ್ ಮುಗಿಸಿಕೊಂಡು ಮನೆಯತ್ತ ಹೋಗುವ ವೇಳೆ ರಾಜ್ ಕುಮಾರ್ ಸಮಾಧಿ ಮುಂಭಾಗ ಬರುತ್ತಿದ್ದಂತೆ ಲಾರಿಯೊಂದು ಹಿಂಬದಿಯಿಂದ ಸಚಿನ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸಚಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಸಚಿನ್ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಯಶವಂತಪುರ ನಿವಾಸಿಯಾಗಿದ್ದ ಮೃತ ಸಚಿನ್ ಯೂತ್ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು. ಖಾಸಗಿ ಕಾಲೇಜೊಂದರಲ್ಲಿ ಬಿಸಿಎ ವ್ಯಾಸಂಗ ಮುಗಿಸಿ ಅಲ್ಲೇ ಕೆಲಸ ಮಾಡಿಕೊಂಡಿದ್ರು. ಘಟನೆಯ ಬಳಿಕ ಚಾಲಕನ ಸಹಿತ ಲಾರಿಯನ್ನು ವಶಕ್ಕೆ ಪಡೆದಿರುವ ರಾಜಾಜಿನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.