ನವದೆಹಲಿ: ಬಿಹಾರ ಮೂಲದ (Bihar Man) ವ್ಯಕ್ತಿಯೊಬ್ಬರು ಹೀಟ್ಸ್ಟ್ರೋಕ್ನಿಂದ ದೆಹಲಿ ಆಸ್ಪತ್ರೆಯಲ್ಲಿ (Delhi Hospital) ಸಾವನ್ನಪ್ಪಿದ್ದಾರೆ. ಶಾಖಾಘಾತದಿಂದ ವ್ಯಕ್ತಿಯನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವ್ಯಕ್ತಿ ಕೂಲರ್ ಅಥವಾ ಫ್ಯಾನ್ ಇಲ್ಲದ ಕೋಣೆಯಲ್ಲಿ ವಾಸಿಸುತ್ತಿದ್ದರು. ಅವರಿಗೆ ತೀವ್ರ ಜ್ವರವಿತ್ತು ಎಂದು ವೈದ್ಯರು ಹೇಳಿದ್ದರು. ದೇಹದ ಉಷ್ಣತೆಯು 107 ಡಿಗ್ರಿ ಸೆಲ್ಸಿಯಸ್ ಮಾರ್ಕ್ ಅನ್ನು ದಾಟಿತ್ತು. ಅದು ಸಾಮಾನ್ಯಕ್ಕಿಂತ ಸುಮಾರು 10 ಡಿಗ್ರಿ ಹೆಚ್ಚಾಗಿತ್ತು. ಬಿರು ಬೇಸಿಗೆಯಲ್ಲಿ ದೆಹಲಿಯಲ್ಲಿ ವರದಿಯಾದ ಹೀಟ್ಸ್ಟ್ರೋಕ್ ಸಾವು ಪ್ರಕರಣ ಇದು ಎನ್ನಲಾಗಿದೆ. ಇದನ್ನೂ ಓದಿ: ಎನ್ಡಿಎ ಅಧಿಕಾರಕ್ಕೆ ಬಂದ್ರೆ ಜೂನ್ 9 ರಂದು ಮೋದಿ ಪ್ರಮಾಣ ವಚನ!
ಶಾಖದ ಅಲೆ ರಾಷ್ಟ್ರ ರಾಜಧಾನಿಯನ್ನು ಕಂಗೆಡಿಸಿದೆ. ಹೆಚ್ಚಿದ ತಾಪಮಾನ, ನೀರಿನ ಬಿಕ್ಕಟ್ಟಿನಿಂದ ಇಲ್ಲಿನ ಜನ ಸಂಕಷ್ಟಕ್ಕೀಡಾಗಿದ್ದಾರೆ. ನಗರದ ಹೊರವಲಯದಲ್ಲಿರುವ ಮುಂಗೇಶ್ಪುರ ಹವಾಮಾನ ಕೇಂದ್ರವು 52.9 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದೆ.
ದೆಹಲಿ ನಗರದಾದ್ಯಂತ ಸರಾಸರಿ 45-50% ಸೆಲ್ಸಿಯಸ್ ವ್ಯಾಪ್ತಿಯಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಎಂ. ಮಹಪಾತ್ರ ಹೇಳಿದ್ದಾರೆ. ರಾಜಧಾನಿಯ ಜನತೆ ಕಳೆದ ವಾರದಿಂದ ತೀವ್ರ ಶಾಖದ ಅಲೆಗೆ ತತ್ತರಿಸುತ್ತಿದ್ದಾರೆ. ತಾಪ ಹೆಚ್ಚಳದ ಜೊತೆಗೆ ದೆಹಲಿಯ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇದನ್ನೂ ಓದಿ: ಚಿನ್ನ ಕಳ್ಳಸಾಗಣೆ – ಕಾಂಗ್ರೆಸ್ ಸಂಸದ ಶಶಿ ತರೂರ್ ಆಪ್ತ ಸಹಾಯಕ ಬಂಧನ
ದಿನನಿತ್ಯ ಟ್ಯಾಂಕರ್ ಬರುತ್ತಿದೆ. ಆದರೆ 3,000 ರಿಂದ 4000 ಜನರಿರುವ ನಮಗೆ ಅರ್ಧ ಟ್ಯಾಂಕರ್ ನೀರಷ್ಟೇ ಸಿಗುತ್ತಿದೆ. ಬಿಸಿಯೂಟ, ನೀರು ಬೇಕು. ಆದರೆ ನಮಗೆ ಸಾಕಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ವಿನಯ್ ಅಳಲು ತೋಡಿಕೊಂಡಿದ್ದಾರೆ.