ಬಿಗ್ ಬಾಸ್ (Bigg boss) ಮನೆಯಲ್ಲಿ ಭಿನ್ನ ಮನಸ್ಥಿತಿಯ ವ್ಯಕ್ತಿತ್ವ ಹೊಂದಿರುವವರಿದ್ದಾರೆ. ದೊಡ್ಮನೆಯಲ್ಲಿ ಫ್ರೆಂಡ್ ಶಿಪ್ ಕೂಡ ಎಷ್ಟು ಹೈಲೈಟ್ ಆಗಿದ್ಯೋ ಅಷ್ಟೇ ಜಗಳ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಇನ್ನು ಶುರುವಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ನಂದು ಮತ್ತು ಜಯಶ್ರೀ ನಡುವೆ ಕಿರಿಕ್ ನಡೆಯುತ್ತಲೇ ಇದೆ. ಈಗ ನಂದು ಮತ್ತು ಜಶ್ವಂತ್ ಬಗ್ಗೆ ಮತ್ತೆ ಜಯಶ್ರೀ ಮಾತನಾಡಿದ್ದಾರೆ. ನಂದು ಬಗ್ಗೆ ಜಯಶ್ರೀ ಕಿಡಿಕಾರಿದ್ದಾರೆ.
ದೊಡ್ಮನೆಯಲ್ಲಿ ಇರಲು ಟಾಸ್ಕ್, ಅಡುಗೆ, ಮನರಂಜನೆ, ಹೀಗೆ ಸಾಕಷ್ಟು ವಿಚಾರಗಳಲ್ಲಿ ಸ್ಪರ್ಧಿ ಆಕ್ಟೀವ್ ಆಗಿರಬೇಕಾಗುತ್ತದೆ. ಇದೀಗ ನಂದು ಮತ್ತು ಜಶ್ವಂತ್ (Nandu & Jashwanth) ಇವರೆಗೂ ಮನೆಯಲ್ಲಿ ಸೇವ್ ಆಗಿ ಉಳಿದುಕೊಂಡಿರುವುದರ ಬಗ್ಗೆ ಜಯಶ್ರೀ ಮಾತನಾಡಿದ್ದಾರೆ. ನಂದು ಮತ್ತು ಜಶ್ವಂತ್ ಕಪಲ್ ಆಗಿ ಬಂದಿರೋದಕ್ಕೆ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎಂದು ಈ ಜೋಡಿಯ ಬಗ್ಗೆ ಜಯಶ್ರೀ ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ:ಸೋಮಣ್ಣ – ಗುರೂಜಿ ಗೆಲುವು ನೋಡಿ, ಗಳಗಳನೆ ಅತ್ತ ಸಾನ್ಯ ಅಯ್ಯರ್
ನಂದು ಮತ್ತು ಜಶ್ವಂತ್ ಇಷ್ಟು ದಿನ ಉಳಿದುಕೊಂಡಿರೋದೇ ಕಪಲ್ ಆಗಿರುವ ಕಾರಣ, ಅವರಲ್ಲಿ ಅಂತಹ ಸ್ಪೆಷಲಿಟಿ ಏನೀದೆ. ಟಾಸ್ಕ್ನಲ್ಲಿ ಸ್ಟ್ರಾಂಗ್ ಆಗಿ ಇದ್ದಾರೆ. ಮನರಂಜನೆಯ ವಿಚಾರಕ್ಕೆ ಬಂದರೆ ಅವರಲ್ಲಿ ರಂಜಿಸುವ ಗುಣ ನೋಡಿಲ್ಲ ಎಂದು ಜಯಶ್ರೀ ಸೋಮಣ್ಣ, ಗುರೂಜಿ ಮುಂದೆ (Jayashree) ಮಾತನಾಡಿದ್ದಾರೆ.
ಈ ವೇಳೆ ಸೋನು ಬಗ್ಗೆ ಕೂಡ ಮಾತನಾಡಿರುವ ಜಯಶ್ರೀ, ನೀನು ಬಿಡು ಎಂಟರ್ಟೈನ್ಮೆಂಟ್ ಪ್ಯಾಕ್, ಆದರೆ ನೀನು ಯಾರಿಗೂ ಗೌರವ ಕೊಡದೇ ಮಾತನಾಡುತ್ತೀಯಾ ಅದೇ ನೀನಾ ವಿಕ್ ನೆಸ್ ಎಂದು ಸೋನುಗೆ ನೇರವಾಗಿ ಜಯಶ್ರೀ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.