ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada 10) ವಿನ್ನರ್ ಆದ್ಮೇಲೆ ಕಾರ್ತಿಕ್ ಮಹೇಶ್ (Karthik Mahesh) ಬ್ಯುಸಿಯಾಗಿದ್ದಾರೆ. ಸಿನಿಮಾ ಕೆಲಸಗಳು, ಹೊಸ ಬ್ರ್ಯಾಂಡ್ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಕಾರ್ತಿಕ್ ಮಹೇಶ್ ಮನೆಯಲ್ಲಿ ಪೂಜೆ ಜರುಗಿದೆ. ಇದನ್ನೂ ಓದಿ:ಒಟಿಟಿಗೆ ಬರಲು ರೆಡಿ ಆಯಿತು ವಿಶ್ವಕ್ ಸೇನ್ ನಟನೆಯ ‘ಗಾಮಿ’ ಸಿನಿಮಾ
ಕಾರ್ತಿಕ್ ಮನೆಯಲ್ಲಿ ಹೋಮ ನೆರವೇರಿಸುತ್ತಿರುವ ವೇಳೆ, ಅಗ್ನಿಯಲ್ಲಿ ಆಂಜನೇಯ ರೂಪ ಕಂಡಿದೆ ಎಂದು ಅಭಿಮಾನಿಗಳು ನಟನ ಪೋಸ್ಟ್ಗೆ ಕಾಮೆಂಟ್ ಮಾಡಿದ್ದಾರೆ. ಬಿಗ್ ಬಾಸ್ ಪಟ್ಟ ಗೆದ್ದ ಮೇಲೆ ಕಾರ್ತಿಕ್ಗೆ ಬೇಡಿಕೆ ಹೆಚ್ಚಾಗಿದೆ. ಕೆಲಸದಿಂದ ಬ್ರೇಕ್ ಸಿಗುತ್ತಿದ್ದಂತೆ ಮನೆಯಲ್ಲಿ ಹೋಮ ಮಾಡಿಸಿದ್ದಾರೆ.
- Advertisement
View this post on Instagram
- Advertisement
ಬಿಗ್ ಬಾಸ್ ಬಳಿಕ ‘ಒಂದು ಸರಳ ಪ್ರೇಮ ಕಥೆ’ ಸಿನಿಮಾದಲ್ಲಿ ಕಾರ್ತಿಕ್ ಮಹೇಶ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಹೊಸ ಬಗೆಯ ಕಥೆಯನ್ನು ಕೇಳುತ್ತಿದ್ದಾರೆ. ಪರಭಾಷೆಗಳಿಂದಲೂ ಅವಕಾಶಗಳು ಅರಸಿ ಬರುತ್ತಿವೆ.
ಇನ್ನೂ ಚಿಕ್ಕವಯಸ್ಸಿನಿಂದಲೂ ನನ್ನ ತಾಯಿ ತುಂಬಾ ಕಷ್ಟ ಪಟ್ಟಿದ್ದಾರೆ. ಅವರಿಗೊಂದು ಪುಟ್ಟ ಮನೆ ಕಟ್ಟಿಸಿಕೊಡಬೇಕು ಅಂತ ‘ಬಿಗ್ ಬಾಸ್’ ಮನೆಯಲ್ಲಿದ್ದಾಗ ಕಾರ್ತಿಕ್ ತಮ್ಮ ಆಸೆಯನ್ನ ಹೊರಹಾಕಿದ್ದರು. ಅದಕ್ಕಾಗಿ ಈಗ ತಯಾರಿ ಕೂಡ ನಡೆಯುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಮಾಹಿತಿ ಸಿಗಲಿದೆ.