Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾವ್ಯಗೋಸ್ಕರ ನಾಮಿನೇಟ್‌ ಆಗಿ ತ್ಯಾಗಮಯಿ ಎನಿಸಿಕೊಂಡ ಗಿಲ್ಲಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಕಾವ್ಯಗೋಸ್ಕರ ನಾಮಿನೇಟ್‌ ಆಗಿ ತ್ಯಾಗಮಯಿ ಎನಿಸಿಕೊಂಡ ಗಿಲ್ಲಿ

Cinema

ಕಾವ್ಯಗೋಸ್ಕರ ನಾಮಿನೇಟ್‌ ಆಗಿ ತ್ಯಾಗಮಯಿ ಎನಿಸಿಕೊಂಡ ಗಿಲ್ಲಿ

Public TV
Last updated: November 7, 2025 11:54 am
Public TV
Share
3 Min Read
gilli and kavya bigg boss kannada
SHARE

– ಗಿಲ್ಲಿಯಿಂದ ಕಾವ್ಯ ಕೈಸೇರಿತು ಮನೆಯ ಪತ್ರ
– ಕಾವ್ಯ ಕ್ಯಾಪ್ಟನ್‌ ಆದ್ರೆ ಆ ಕ್ರೆಡಿಟ್‌ ಗಿಲ್ಲಿಗೆ ಅಂದ್ರು ಫ್ಯಾನ್ಸ್‌

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರಲ್ಲಿ (Bigg Boss Kannada 12) ಕಾವ್ಯಗೋಸ್ಕರ ಗಿಲ್ಲಿ ದೊಡ್ಡ ತ್ಯಾಗ ಮಾಡಿದ್ದಾರೆ. ತಾನು ಮಾಡಿದ ತ್ಯಾಗದಿಂದ ಗಿಲ್ಲಿ ಮನೆಯಿಂದ ಬಂದ ಪತ್ರವನ್ನು ಕಳೆದುಕೊಂಡರು. ಅಷ್ಟೇ ಅಲ್ಲ, ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್‌ನಲ್ಲಿ ಮುಂದುವರಿದರು. ಗಿಲ್ಲಿ ಮಾಡಿದ ತ್ಯಾಗ ಕಂಡು ಕಾವ್ಯ ಕರಗಿಹೋದರು.

ಅಷ್ಟಕ್ಕೂ ಏನಾಯ್ತು ಬಿಗ್‌ ಬಾಸ್‌ ಮನೆಯಲ್ಲಿ?
ಈ ವಾರ ಸ್ಪರ್ಧಿಗಳಿಗೆ ಅವರವರ ಮನೆಗಳಿಂದ ಪತ್ರಗಳು ಬಂದಿದ್ದವು. ಸ್ಪರ್ಧಿಗಳು ತಮ್ಮ ಮನೆಯ ಪತ್ರಗಳನ್ನು ಓದಬೇಕಾದರೆ ಬಿಗ್‌ ಬಾಸ್‌ ನೀಡುವ ಟಾಸ್ಕ್‌ ಪೂರ್ಣಗೊಳಿಸಬೇಕು. ಇಬ್ಬಿಬ್ಬರು ಸ್ಪರ್ಧಿಗಳನ್ನು ಆಯ್ಕೆ ಮಾಡಿ ಟಾಸ್ಕ್‌ ನೀಡಲಾಯಿತು. ಗೆದ್ದವರು ತಮ್ಮ ಮನೆಯಿಂದ ಬಂದ ಪತ್ರವನ್ನು ಓದಬಹುದು. ಆದರೆ, ಸೋತವರು ಪತ್ರವನ್ನು ಕಳೆದುಕೊಳ್ಳುವರು ಅಂತ ಸೂಚಿಸಲಾಯಿತು. ಇದನ್ನೂ ಓದಿ: ಕಿಚ್ಚ ಸುದೀಪ್‌ಗೆ ವಿಶೇಷ ಗಿಫ್ಟ್‌ ನೀಡಲಿದ್ದಾರೆ ಮಲ್ಲಮ್ಮ

gill and kavya

ಹೀಗೆ ಸ್ಪರ್ಧೆಯಲ್ಲಿ ಕಾವ್ಯ (Kavya) ಮತ್ತು ಗಿಲ್ಲಿಯನ್ನು (Gilli) ಪ್ರತ್ಯೇಕವಾಗಿ ಕರೆಯಲಾಗಿತ್ತು. ಈ ಟಾಸ್ಕ್‌ನಲ್ಲಿ ಟ್ವಿಸ್ಟ್‌ವೊಂದನ್ನು ನೀಡಲಾಗಿತ್ತು. ಕಾವ್ಯ ಎದುರು ಗಿಲ್ಲಿ ಮನೆಯ ಲೆಟರ್‌ ಹಾಗೂ ಗಿಲ್ಲಿ ಎದುರು ಕಾವ್ಯ ಮನೆಯ ಲೆಟರ್‌ ಇಡಲಾಗಿತ್ತು. ಯಾರಾದರು ಒಬ್ಬರು ಮಾತ್ರ ಲೆಟರ್‌ ಅನ್ನು ಹೊರಗೆ ತರಬಹುದಿತ್ತು. ಅಪ್ಪಿತಪ್ಪಿ ಇಬ್ಬರೂ ಲೆಟರ್‌ ತಂದರೆ, ಇಬ್ಬರೂ ಕೂಡ ಲೆಟರ್‌ ಕಳೆದುಕೊಂಡು ನಾಮಿನೇಷನ್‌ನಲ್ಲಿ ಮುಂದುವರಿಯಬೇಕಿತ್ತು. ಈ ಸಂಬಂಧ ಆಲೋಚನೆಗೆ ಎರಡು ನಿಮಿಷ ಕಾಲಾವಕಾಶ ನೀಡಲಾಗಿತ್ತು.

2 ನಿಮಿಷದ ಬಳಿಕ, ‘ಗಿಲ್ಲಿ ನಿಮ್ಮ ನಿರ್ಧಾರ ತಿಳಿಸಿ’ ಅಂತ ಬಿಗ್‌ ಬಾಸ್‌ ಕೇಳಿದರು. ಆಗ ಗಿಲ್ಲಿ ಲೆಟರ್‌ ತೆಗೆದುಕೊಂಡು ಹೊರಗೆ ಬರುವುದಾಗಿ ಸ್ಪಷ್ಟಪಡಿಸಿದರು. ಇತ್ತ ಕಾವ್ಯಗೂ ಇದೇ ಪ್ರಶ್ನೆ ಮುಂದಿಡಲಾಯಿತು. ಆದರೆ, ಕಾವ್ಯ ಲೆಟರ್‌ ಹೊರ ತರುವುದಿಲ್ಲ ಎಂದು ತಿಳಿಸಿದರು. ಅಲ್ಲದೇ, ಗಿಲ್ಲಿ ಲೆಟರ್‌ ತಂದೇ ತರುತ್ತಾನೆಂಬ ಭರವಸೆಯನ್ನು ಕಾವ್ಯ ವ್ಯಕ್ತಪಡಿಸಿದರು. ಒಂದು ವೇಳೆ, ಕಾವ್ಯ ಲೆಟರ್‌ ತಂದರೆ ಹೇಗಪ್ಪ ಎಂಬ ಅಳುಕು ಗಿಲ್ಲಿಯಲ್ಲಿ ಇತ್ತು. ಕೊನೆಗೆ ಗಿಲ್ಲಿ ಮಾತ್ರ ಲೆಟರ್‌ ತಂದರು. ಗಿಲ್ಲಿಯನ್ನು ಕಾವ್ಯ ಎಷ್ಟು ಅರ್ಥ ಮಾಡಿಕೊಂಡಿದ್ದಾರೆಂಬುದು ಅನೇಕರಲ್ಲಿ ಅಚ್ಚರಿ ಮೂಡಿಸಿತು. ಇದನ್ನೂ ಓದಿ: ರಕ್ಷಿತಾ ಶೆಟ್ಟಿಯದ್ದು `ಗಿಮಿಕ್ ಸೆಲ್ಲಿಂಗ್ ಪಾಯಿಂಟ್’ ಎಂದ ಧೃವಂತ್

ಗಿಲ್ಲಿ ತಂದ ಲೆಟರ್‌ ನೋಡಿ ಕಾವ್ಯ ಖುಷಿಪಟ್ಟರು. ತನ್ನ ತ್ಯಾಗದ ಬಗ್ಗೆ ಗಿಲ್ಲಿ ಮನೆಯಲ್ಲಿ ಹೆಮ್ಮೆಯಿಂದ ಮಾತನಾಡಿದರು. ಗಿಲ್ಲಿ ತ್ಯಾಗ ಮೆಚ್ಚಿ ಕಾವ್ಯ ಪ್ರೀತಿಯ ಅಪ್ಪುಗೆ ಕೊಟ್ಟರು. ಕೊನೆಗೆ ಗಿಲ್ಲಿ ನಾಮಿನೇಷನ್‌ನಲ್ಲಿ ಮುಂದವರಿದರು. ಗಿಲ್ಲಿಯ ತ್ಯಾಗದಿಂದ ಗೆದ್ದ ಕಾವ್ಯ ನಾಮಿನೇಷನ್‌ನಿಂದ ಬಚಾವ್‌ ಆಗಿ ಈ ವಾರದ ಕ್ಯಾಪ್ಟನ್‌ ರೇಸ್‌ನಲ್ಲಿದ್ದಾರೆ. ಈ ವಾರ ಒಂದಷ್ಟು ಪ್ರೇಕ್ಷಕರನ್ನು ಕರೆಸಿ ವೋಟ್‌ ಮಾಡಿಸಲಾಗಿದೆ. ಬಹುಮತ ಸಿಕ್ಕವರು ಕ್ಯಾಪ್ಟನ್‌ ಆಗಲಿದ್ದಾರೆ. ಯಾರು ಕ್ಯಾಪ್ಟನ್‌ ಆಗ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ-ಕಾವ್ಯ ಜೋಡಿ ಮೋಡಿ ಮಾಡಿದೆ. ಎಲ್ಲೆಡೆ ಇವರಿಬ್ಬರ ಜೋಡಿಯದ್ದೇ ಮಾತು. ಬಿಗ್‌ ಬಾಸ್‌ ಮನೆ ಆಟದಲ್ಲೂ ಈ ಜೋಡಿ ಒಬ್ಬರಿಗೊಬ್ಬರು ಸಾಥ್‌ ಎನ್ನುವಂತೆಯೇ ಇದ್ದಾರೆ. ಎಷ್ಟೋ ಕಡೆ ಕಾವ್ಯಗಾಗಿ ಸ್ಪರ್ಧೆಯಲ್ಲಿ ಗಿಲ್ಲಿ ತ್ಯಾಗ ಮಾಡಿದ್ದಿದೆ. ಗಿಲ್ಲಿಯಿಂದಲೇ ಕಾವ್ಯ ಮನೆಯಲ್ಲಿರೋದು ಅನ್ನೋ ಮಾತುಗಳು ಕೂಡ ಕೇಳಿಬಂದಿವೆ. ಆದರೆ, ಅದ್ಯಾವುದಕ್ಕೂ ಈ ಜೋಡಿ ತಲೆ ಕೆಡಿಸಿಕೊಂಡಿಲ್ಲ. ಒಂದರ್ಥದಲ್ಲಿ ಗಿಲ್ಲಿಯನ್ನು ಕಾವ್ಯ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆಂಬುದು ‘ಲೆಟರ್‌ ಸ್ಪರ್ಧೆ’ಯಲ್ಲಿ ಗೊತ್ತಾಗಿದೆ. ಆದರೂ, ಗಿಲ್ಲಿ ತಮ್ಮ ಆಟದ ಬಗ್ಗೆಯೂ ಗಮನ ಹರಿಸಬೇಕು ಎಂಬ ಸಲಹೆ ಇತರೆ ಸ್ಪರ್ಧಿಗಳು ಮತ್ತು ಪ್ರೇಕ್ಷಕರಿಂದ ಕೇಳಿಬರುತ್ತಿದೆ.

TAGGED:BBK 12Bigg Boss Kannada Season 12gillikavyaKichcha Sudeepಕಾವ್ಯಕಿಚ್ಚ ಸುದೀಪ್ಗಿಲ್ಲಿಬಿಗ್‌ ಬಾಸ್‌ ಕನ್ನಡ ಸೀಸನ್‌ 12
Share This Article
Facebook Whatsapp Whatsapp Telegram

Cinema news

dhanush dhruvanth
ಬಿಗ್‌ಬಾಸ್ ಮನೇಲಿ ಅಶ್ವಿನಿ ಸೈಲೆಂಟ್.. ಧ್ರುವಂತ್ ವೈಲೆಂಟ್!
Cinema Latest Top Stories TV Shows
Chiranjeevi tvk vijay keerthi suresh
ಚಿರಂಜೀವಿಗಿಂತ ವಿಜಯ್ ಉತ್ತಮ ಡ್ಯಾನ್ಸರ್ – ವಿವಾದಕ್ಕೆ ತೆರೆ ಎಳೆದ ಕೀರ್ತಿ ಸುರೇಶ್
Cinema Latest South cinema Top Stories
Ugram Manju
ಬಿಗ್‌ಬಾಸ್ ಮನೆಯ ಅತಿಥಿಗಳ ಮನದಾಳದ ಮಾತು
Cinema Latest TV Shows
Heart Beat
ಜಿಯೋ ಹಾಟ್‌ಸ್ಟಾರ್‌ – ಕನ್ನಡದಲ್ಲಿ ಮೆಡಿಕಲ್ ಡ್ರಾಮಾ `ಹಾರ್ಟ್‌ಬೀಟ್‌ʼ
Cinema Latest South cinema TV Shows

You Might Also Like

Row Over Viral Video Of Tamil Nadu Minister With Dancers At Birthday Party
Latest

ಉದಯನಿಧಿ ಸ್ಟಾಲಿನ್ ಬರ್ತಡೇ ಪಾರ್ಟಿ ವೇಳೆ ಸಚಿವನಿದ್ದ ವೇದಿಕೆಯಲ್ಲೇ ಅಶ್ಲೀಲ ನೃತ್ಯ!

Public TV
By Public TV
24 minutes ago
Priyank Kharge 1
Bengaluru City

ಪವರ್‌ ಶೇರಿಂಗ್‌ ವಿಚಾರ ಹೈಕಮಾಂಡ್‌ ತೀರ್ಮಾನ ಮಾಡುತ್ತೆ: ಪ್ರಿಯಾಂಕ್‌ ಖರ್ಗೆ

Public TV
By Public TV
53 minutes ago
Aadhaar Card
Latest

ಇನ್ಮುಂದೆ ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ಆಧಾರ್ ಜನನ ಪ್ರಮಾಣಪತ್ರದ ಪುರಾವೆಯಲ್ಲ

Public TV
By Public TV
55 minutes ago
kashmir cold wave
Latest

ಕಾಶ್ಮೀರದಲ್ಲಿ ಚಳಿಯೋ ಚಳಿ – 2007ರ ಬಳಿಕ ಇದೇ ಮೊದಲ ಬಾರಿಗೆ ಮೈನಸ್ 4.5 ಡಿಗ್ರಿಗೆ ಇಳಿದ ತಾಪಮಾನ

Public TV
By Public TV
1 hour ago
Fans offer prayers for CM Siddaramaiah in Chikkamagaluru 1
Chikkamagaluru

ಜಸ್ಟೀಸ್ ಫಾರ್ ಸಿದ್ದರಾಮಯ್ಯ – ಫೋಟೋ ಇಟ್ಟು ಸಿಎಂ ಪರ ಪೂಜೆ ಸಲ್ಲಿಸಿದ ಅಭಿಮಾನಿಗಳು

Public TV
By Public TV
2 hours ago
siddaramaiah
Bengaluru City

ಸಿದ್ದರಾಮಯ್ಯನವರನ್ನು ಇಳಿಸಿದ್ರೆ ಕಾಂಗ್ರೆಸ್‌ ವಿರುದ್ಧ ಮತ – ಕುರುಬ ಸಂಘದಿಂದ ಎಚ್ಚರಿಕೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?