ಹಿಂದಿ ಕಿರುತೆರೆಯ `ಬಿಗ್ ಬಾಸ್’ 15ರ (Bigg Boss Hindi) ವಿನ್ನರ್ ಆಗಿರುವ ತೇಜಸ್ವಿ ಪ್ರಕಾಶ್ (Tejasswi Prakash) ಅವರು ಪ್ರಸ್ತುತ `ನಾಗಿನ್ 6’ರಲ್ಲಿ (Naagin 6) ನಟಿಸುತ್ತಿದ್ದಾರೆ. ಇದೀಗ ಹಿಂದಿ ನಟಿ ಕನ್ನಡದಲ್ಲಿ ಹಾಡಿರೋದ್ದಕ್ಕೆ ಕನ್ನಡಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾಂತಾರ (Kantara) ಸಿನಿಮಾದ ಹಾಡನ್ನ ನಟಿ ತೇಜಸ್ವಿ ಹಾಡಿದ್ದಾರೆ.
View this post on Instagram
ಬಾಲಿವುಡ್ (Bollywood) ನಟಿ ತೇಜಸ್ವಿ ಪ್ರಕಾಶ್ ಅವರು ತಾವೇ ಹಾಡಿರುವ ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ, ನಟನೆಯ ‘ಕಾಂತಾರ’ ಸಿನಿಮಾದ ಹಾಡೊಂದನ್ನು ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಆಶ್ಚರ್ಯ ಮೂಡಿಸಿದ್ದಾರೆ. ತೇಜಸ್ವಿಯ ಹಾಡು ಕೇಳಿ ಕನ್ನಡಿಗರು ಮೆಚ್ಚಿದ್ದಾರೆ. `ಕರುಮದ ಕಲ್ಲನು’ ಎನ್ನುವ ಹಾಡನ್ನು ತೇಜಸ್ವಿ ಹಾಡಿ ಸೈ ಎನಿಸಿಕೊಂಡಿದ್ದಾರೆ.
View this post on Instagram
`ಕರುಮದ’ ಕಲ್ಲನು ಎನ್ನುವ ಕನ್ನಡದ ಹಾಡನ್ನು ತೇಜಸ್ವಿ ಅವರು ಹಾಡಿದ ಪರಿ ಅನೇಕರಿಗೆ ಇಷ್ಟ ಆಗಿದೆ. ಸೆಲೆಬ್ರಿಟಿಗಳಿಂದ ಸಾಮಾನ್ಯ ಜನರವರೆಗೆ ಅನೇಕರು ಈ ಹಾಡನ್ನು ಮೆಚ್ಚಿದ್ದಾರೆ. ಅಷ್ಟೇ ಅಲ್ಲದೆ ತೇಜ ಅವರ ವಿಥೌಟ್ ಮೇಕಪ್ ಲುಕ್ ಕೂಡ ಅನೇಕರ ಪ್ರಶಂಸೆಗೆ ಪಾತ್ರವಾಗಿದೆ. ಹಾಡು ಹಾಡಿರುವ ವಿಡಿಯೋವನ್ನು ಅಪ್ಲೋಡ್ ಮಾಡಿರುವ ತೇಜಸ್ವಿ ಅವರು ಇದರ ಸಾಹಿತ್ಯವನ್ನು ಇಂಗ್ಲಿಷ್ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಮತ್ತೆ ಕಿರುತೆರೆಗೆ ಮರಳಿದ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ
View this post on Instagram
ಬಿಗ್ ಬಾಸ್ನಲ್ಲಿ (Bigg Boss) ತೇಜಸ್ವಿ ಅವರು ತಮ್ಮ ಸಹಸ್ಪರ್ಧಿ ಕರಣ್ ಕುಂದ್ರಾ (Karan Kundra) ಜೊತೆ ಪ್ರೀತಿ ಚಿಗುರಿತ್ತು. ಸದ್ಯದಲ್ಲೇ ಈ ಜೋಡಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರು ಈಗ ಬೇರೇ ಬೇರೆ ಪ್ರಾಜೆಕ್ಟ್ನಲ್ಲಿ ಬ್ಯುಸಿಯಾಗಿದ್ದಾರೆ.