Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಪತ್ರಕರ್ತ ರವಿ ಬೆಳಗೆರೆ ಬಂಧನ: ಬಿಗ್ ಬುಲೆಟಿನ್ ನಲ್ಲಿ `ಬಿಗ್’ ಚರ್ಚೆಯ ಸಂಪೂರ್ಣ ವರದಿ

Public TV
Last updated: December 9, 2017 12:23 pm
Public TV
Share
3 Min Read
BIGG BULLETIN 1
SHARE

ಬೆಂಗಳೂರು: ಸುಮಾರು 14 ವರ್ಷ ಜೊತೆಗಿದ್ದ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಅವರ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಪತ್ರಕರ್ತ ರವಿಬೆಳಗೆರೆಯನ್ನು ಪೊಲೀಸರು ಬಂಧಿಸಿದ್ದು. ಈ ಕುರಿತು ಶನಿವಾರದ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಖ್ಯಾತ ವಕೀಲ ಎಂಟಿ ನಾಣಯ್ಯ ಹಾಗೂ ಠಾಗೂರ್ ಜೊತೆ ನಡೆದ ಚರ್ಚೆಯ ಸಂಪೂರ್ಣ ವಿವರ ಇಲ್ಲಿದೆ.

* ಅನುಮಾನ ಬಂದ ತಕ್ಷಣ ಬಂಧನ ಮಾಡ್ತಾರಾ? ಅಥವಾ ಅದಕ್ಕೆ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡು ಬಳಿಕ ಕ್ರಮ ಕೈಗೊಳ್ಳುತ್ತಾರಾ?
ಅನುಮಾನ ಬಂದ ತಕ್ಷಣ ಓರ್ವ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಾಗಲ್ಲ. ಯಾಕಂದ್ರೆ ಒಬ್ಬ ವ್ಯಕ್ತಿಯ ಮೇಲೆ ಅನುಮಾನ ಬಂದ್ರೆ ಅದು ಸ್ವಲ್ಪ ಮಟ್ಟಿಗಾದ್ರು ಸಾಕ್ಷಿಭೂತವಾಗಿರುತ್ತೆ. ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಭಾರೀ ದೊಡ್ಡ ಆಘಾತವಾಗುತ್ತೆ ಅಂತಂದ್ರೆ ಮಾತ್ರ ಆತನನ್ನು ಬಂಧಿಸಲಾಗುತ್ತೆ.

sunil heggarvali ravi

ನಿಮಗೆ ಈ ಸುದ್ದಿ ಕೇಳಿ ಅಚ್ಚರಿಯಾಯ್ತಾ ಅಂತ ಠಾಗೋರ್ ಅವರನ್ನು ಕೇಳಿದಾಗ, ಅವರು ನನಗೆ ನಿಜಕ್ಕೂ ಇದೊಂದು ಅಚ್ಚರಿ ಅಂತ ಅನಿಸಿಲ್ಲ. ಯಾಕಂದ್ರೆ ನಾನು ಅವರನ್ನು ಕಿರಿತೆರೆಯಿಂದ, ಅವರು ಬರೆದ ಪುಸ್ತಕಗಳ ಹಾಗೂ ಕಪ್ಪು ಹಣದ ಬಗ್ಗೆ ಬರೆದ ಲೇಖನಗಳನ್ನು ನಾನು ಓದುತ್ತಾ ಬಂದಿದ್ದೇನೆ. ಅವರು ಬೆಳೆದು ಬಂತ ರೀತಿಯನ್ನು ನೋಡಿದ್ರೆ ಅಚ್ಚರಿ ಅನಿಸಲ್ಲ. ಅಧಿಕಾರ ಮತ್ತು ಹಣದ ಮದ ಏರಿದ ಯಾರಿಗೂ ತಮ್ಮ ಪೂರ್ವ ಜನ್ಮ ಸ್ಮರಣೆಯಿರುವುದಿಲ್ಲ. ಇವರು ಈ ಪತ್ರಿಕೆಯನ್ನು ಆರಂಭಿಸುವ ಸಮಯದಲ್ಲಿ ನಾನು ವಿಜಯಪುರದಲ್ಲಿ ಎಸ್‍ಪಿಯಾಗಿದ್ದೆ. ಆ ವೇಳೆ ನನ್ನ ಇನ್ನೊಬ್ಬ ಆತ್ಮೀಯ ಸಹೋದ್ಯೋಗಿ ಇವರನ್ನು ನನ್ನ ಬಳಿ ಕಳುಹಿಸಿಕೊಟ್ಟು, ಇವರೊಬ್ಬ ಒಳ್ಳೆಯ ಪತ್ರಕರ್ತ, ಸಾಹಿತಿ. ತುಂಬಾ ಚೆನ್ನಾಗಿ ಲೇಖನಗಳನ್ನು ಬರೆಯುತ್ತಾರೆ. ಸ್ವಲ್ಪ ಅವರಿಗೆ ಸಹಾಯ ಮಾಡಿ ಅಂತ ಹೇಳಿದ್ರು.

ಈ ವೇಳೆ ನಾನು ಏನು ಸಹಾಯ ಮಾಡಲಿ ಅಂದಾಗ ಅವರು ಏನಿಲ್ಲಾ ಕೆಲವೊಂದು ಪ್ರಕರಣಗಳ ನೈಜತೆಯನ್ನು ಅವರಿಗೆ ಕೊಡಿ ಅಂತ ಹೇಳಿದ್ರು. ಅವಾಗ ನಾನು ತನಿಖೆಯಲ್ಲಿದ್ದರೆ ಅಂತಹ ವಿಷಯಗಳನ್ನು ಕೊಡಲು ಸಾಧ್ಯವಿಲ್ಲ. ತನಿಖೆ ಆದ ಬಳಿಕ ಚಾರ್ಜ್ ಶೀಟ್ ನಂತ್ರ ಪ್ರಕರಣಗಳ ವಿಷಯಗಳನ್ನು ಕೊಡಬಹುದು ಅಂತ ಹೇಳಿದ್ದೆ ಅಂತ ಅವರು ವಿವರಿಸಿದ್ರು.

RAVI NIGHT QUESN 1

* ಕಾನೂನಾತ್ಮಕವಾಗಿ ಈ ಪ್ರಕರಣ ಗಟ್ಟಿಯಾಗಿದೆಯಾ?
ಅವನೊಬ್ಬ ಹೇಳಿಕೆ ಕೊಟ್ಟ ಅಂತ ಪೊಲೀಸರು ರವಿಬೆಳಗೆರೆ ಅವರನ್ನು ಬಂಧಿಸಿದ್ದಾರೆ. ಅವರ ಕಚೇರಿಗೆ ಬಂದು ಅಲ್ಲಿ ಸಾಕಷ್ಟು ಆಯುಧಗಳು ಸಿಕ್ಕಿದ್ದವು. ಆದ್ರೆ ಒಬ್ಬ ಮಾಧ್ಯಮ ವ್ಯಕ್ತಿ ಅನಧಿಕೃತವಾಗಿ ಇಂತಹ ಆಯುಧಗಳನ್ನು ಇಟ್ಟುಕೊಳ್ಳುವ ಅವಶ್ಯಕತೆ ಇದೆಯಾ ಅಂತ ನಾಣಯ್ಯ ಪ್ರಶ್ನಿಸಿದ್ರು.

* ಒಂದು ಗನ್ ಇಟ್ಕೊಂಡವನು 40-50 ಲೈವ್ ಕಾಟ್ರೆಜನ್ನು ಇಟ್ಟುಕೊಳ್ಳಲು ಅವಕಾಶವಿದೆಯಾ?
ಇಲ್ಲ. ಯಾವುದೇ ಒಂದು ಆಯುಧ ಪರವಾನಿಗೆ ಕೊಡಬೇಕಾದ್ರೆ ಅವನಿಗಿರುವಂತಹ ಭಯ, ಹೆದರಿಕೆ ಅಥವಾ ಬೆದರಿಕೆಯ ಆಧಾರದ ಮೇಲೆ ಸಾಧರಣವಾಗಿ ಸುಮಾರು 20 ಗುಂಡುಗಳನ್ನು ಮಾತ್ರ ಇಟ್ಟುಕೊಳ್ಳಬಹುದು. ಅದರಕ್ಕಿಂದ ಜಾಸ್ತಿ ಅವಕಾಶವಿಲ್ಲ ಅಂತ ಠಾಕೋರ್ ಹೇಳಿದ್ರು.

ಅಲ್ಲದೆ ಒಂದು ಆಯುಧಕ್ಕೆ ಮಾತ್ರ ಅವಕಾಶವಿದೆ ಹೊರತು ಎರಡೆರಡು ಆಯುಧಕ್ಕೆ ಯಾವತ್ತು ಅವಕಾಶ ಕೊಡಲ್ಲ. ಎರಡನೇ ಆಯುಧ ಡಬಲ್ ಬ್ಯಾರೆಲ್ ಗನ್ ಆಗಿರುತ್ತದೆ. ತುಂಬಾ ದೂರ ಪ್ರಯಾಣ ಮಾಡುವಾಗ ಸ್ವಯಂ ರಕ್ಷಣೆಗಾಗಿ ಮಾತ್ರ ಇದನ್ನು ಇಟ್ಟುಕೊಳ್ಳಬಹುದು. ಆದ್ರೆ 50 ಗುಂಡುಗಳನ್ನು ಇಟ್ಟುಕೊಂಡಿರುವುದು ದುರುದ್ದೇಶವೇ ಸರಿ ಅಂತ ಅವರು ವಿವರಿಸಿದ್ರು.

RAVI NIGHT 13

ಕಾನೂನು ಬಾಹಿರವಾಗಿ ಆಯುಧಗಳು ಹಾಗೂ ಪ್ರಾಣಿಗಳ ಚರ್ಮಗಳನ್ನು ಇಟ್ಟುಕೊಂಡಿರುವುದು ಸರಿಯಲ್ಲ. ಅದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಸದ್ಯ ರವಿ ಬೆಳೆಗೆರೆ ವಿರುದ್ಧ ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಬಂಧನ ಮಾಡಿದ 90 ದಿನದೊಳಗಡೆ ಚಾರ್ಜ್‍ಶೀಟ್ ಹಾಕ್ಬೇಕು ಅಂತ ವಕೀಲ ನಾಣಯ್ಯ ಹೇಳಿದ್ರು.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ವೇಳೆ ವಿಶೇಷ ತನಿಖಾ ತಂಡ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ಶುಕ್ರವಾರ ಬಂಧಿಸಿತ್ತು. ಆತನ ವಿಚಾರಣೆ ವೇಳೆ ರವಿ ಬೆಳೆಗೆರೆಯವರು ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತ ರವಿ ಬೆಳಗೆರೆಯನ್ನು ಬಂಧಿಸಲಾಗಿತ್ತು.

ರವಿ ಬೆಳಗೆರೆ ಎರಡನೇ ಪತ್ನಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದರು ಎಂಬುದಾಗಿ ತಿಳಿದುಬಂದಿತ್ತು.

https://www.youtube.com/watch?v=3nx-qtIEjcg

sunil heggarvalli 1

sunil heggarvalli 6

RAVI BELAGERE YASHOMATHI

RAVI ACCUSED

RAVI ACCUSED 1

RAVI NIGHT 24

RAVI NIGHT 25

RAVI NIGHT 26

RAVI NIGHT 1

 

TAGGED:bengalurubig bulletinjournalistlawyernanayyapublictvravibelageresunil heggaravallitagorಠಾಗೊರ್ನಾಣಯ್ಯಪತ್ರಕರ್ತಪಬ್ಲಿಕ್ ಟಿವಿಬಿಗ್ ಬುಲೆಟಿನ್ಬೆಂಗಳೂರುರವಿಬೆಳೆಗೆರೆವಕೀಲಸುನೀಲ್ ಹೆಗ್ಗರವಳ್ಳಿ
Share This Article
Facebook Whatsapp Whatsapp Telegram

Cinema Updates

Sydney Sweeney
ಸ್ನಾನ ಮಾಡಿದ ನೀರನ್ನು ಸೋಪ್ ಮಾಡಿ 8 ಡಾಲರ್‍ಗೆ ಮಾರಾಟ ಮಾಡ್ತಿದ್ದಾಳೆ ಸಿಡ್ನಿ ಸ್ವೀನಿ!
3 minutes ago
Darshan
ಕೊನೆಗೂ `ದಾಸ’ನಿಗೆ ವಿದೇಶಕ್ಕೆ ತೆರಳಲು ಅನುಮತಿ ಕೊಟ್ಟ ಕೋರ್ಟ್
1 hour ago
sanjana anand
ರಶ್ಮಿಕಾ, ಶ್ರೀಲೀಲಾ ಬಳಿಕ ತೆಲುಗಿನತ್ತ ಸಂಜನಾ ಆನಂದ್
2 hours ago
dhruva sarja sudeep
ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ಸುದೀಪ್?
3 hours ago

You Might Also Like

kerala rain
Latest

ಕೇರಳದಲ್ಲಿ ಭಾರೀ ಮಳೆಗೆ 5 ಸಾವು – 8 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Public TV
By Public TV
32 minutes ago
mangaluru rain deaths
Dakshina Kannada

ಮಂಗಳೂರಲ್ಲಿ ವರುಣಾರ್ಭಟ; ಮಳೆಗೆ 6 ಮಂದಿ ಬಲಿ

Public TV
By Public TV
1 hour ago
D.K Shivakumar
Bengaluru City

ಕರಾವಳಿ ಘಟನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಪಕ್ಷದಿಂದ ಪ್ರತ್ಯೇಕ ತಂಡ: ಡಿ.ಕೆ ಶಿವಕುಮಾರ್

Public TV
By Public TV
1 hour ago
kea
Bengaluru City

ಮೇ 31ಕ್ಕೆ ಪಿಜಿಸಿಇಟಿ, ಡಿಸಿಇಟಿ ಪರೀಕ್ಷೆ – ಕೆಇಎ

Public TV
By Public TV
2 hours ago
Guest Lecturer 1
Bengaluru City

ಅತಿಥಿ ಉಪನ್ಯಾಸಕರಿಗೆ 5 ಲಕ್ಷ ಇಡುಗಂಟು ಸೌಲಭ್ಯ – ಸರ್ಕಾರದಿಂದ ಆದೇಶ

Public TV
By Public TV
3 hours ago
Shobha Karandlaje 2
Bengaluru City

ಎಲ್ಲ ಗ್ಯಾರಂಟಿ ಕೊಟ್ಟರು, ಪ್ರಾಣದ ಗ್ಯಾರಂಟಿ ಕೊಡ್ತಿಲ್ಲ: ಶೋಭಾ ಕರಂದ್ಲಾಜೆ ಕೆಂಡಾಮಂಡಲ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?