ಬೀದರ್: ಹಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಕೊಲೆಯಾಗಿ ಪತ್ತೆಯಾಗಿದ್ದು, ಅಸ್ಥಿಪಂಜರ ಔರಾದ್ ತಾಲೂಕಿನ ಆಲೂರು ಬಳಿಯ ಶಿವಾರ ದಟ್ಟ ಅರಣ್ಯ ಪ್ರದೇಶದಲ್ಲಿ ವಾಗಿ ಪತ್ತೆಯಾಗಿದೆ.
ವಾರದ ಹಿಂದಷ್ಟೇ ನಾಪತ್ತೆಯಾಗಿದ್ದ ಕಲ್ಲಪ್ಪ ವಿಠಲ (23) ಇಂದು ಅಸ್ಥಿಪಂಜರವಾಗಿ ಪತ್ತೆಯಾಗಿದ್ದಾರೆ. ವಾರದ ಹಿಂದೆ ಮನೆಯಿಂದ ಹೋದ ಕಲ್ಲಪ್ಪ ಮನೆಗೆ ವಾಪಸ್ ಬಂದ್ದಿರಲಿಲ್ಲ. ಎಲ್ಲೋ ಹೋಗಿರಬಹುದು ಎಂದು ಕುಟುಂಬದವರು ಸುಮ್ಮನೇ ಇದ್ದರು. ಆದರೆ ವಾರದ ಬಳಿಕ ಬಾರದ ಗಂಡನನ್ನು ಹುಡುಕಿ ಕೊಡುವಂತೆ ಎರಡು ದಿನಗಳ ಹಿಂದೆ ಕಲ್ಲಪ್ಪನ ಪತ್ನಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಪತ್ನಿಯ ದೂರಿನ ಆಧಾರದ ಮೇಲೆ ತನಿಖೆ ಆರಂಭ ಮಾಡಿದ ಪೊಲೀಸರಿಗೆ ಸ್ಥಳೀಯರು ಅರಣ್ಯದಲ್ಲಿ ಅಸ್ಥಿಪಂಜರ ಸಿಕ್ಕಿದೆ ಎಂದು ಹೇಳಿದ್ದಾರೆ. ಅದ್ದರಿಂದ ಸ್ಥಳಕ್ಕೆ ಹೋದ ಪೊಲೀಸರು ಕಲ್ಲಪ್ಪ ಅವರ ಪತ್ನಿಯನ್ನು ಕರೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಸಿಕ್ಕ ಚಪ್ಪಲಿ ಮತ್ತು ಬಟ್ಟೆಯನ್ನು ನೋಡಿದ ಪತ್ನಿ ಇದು ನನ್ನ ಪತಿಯದ್ದೆ ಎಂದು ಗುರುತಿಸಿದ್ದಾರೆ
ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಸಂತಪೂರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.