ಬೀದರ್: ಕುಡಿಯುವ ನೀರಿನ ಟ್ಯಾಂಕ್ಗೆ ಮಿಶ್ರಣಗೊಂಡ ಕಲುಷಿತ ನೀರನ್ನು ಕುಡಿದ 10 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪೂರ್ ಗ್ರಾಮದಲ್ಲಿ ಇಂದು ನಡೆದಿದೆ.
ಗ್ರಾಮದ ಚರಂಡಿ ನೀರು ಟ್ಯಾಂಕ್ಗೆ ಸಂಪರ್ಕವಿರುವ ಬೋರ್ವೆಲ್ ಒಳಗೆ ಮಿಶ್ರಣವಾಗಿದ್ದು, ಈ ನೀರು ಕುಡಿದ ಗ್ರಾಮದ 10ಕ್ಕೂ ಹೆಚ್ಚು ಜನ ವಾಂತಿ, ಭೇದಿಯಾಗಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡವರನ್ನು ಬ್ರಿಮ್ಸ್ ಹಾಗೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗ್ರಾಮದ ಜನರು ಕಲುಷಿತ ನೀರು ಕುಡಿಯಲು ಗ್ರಾಮ ಪಂಚಾಯತಿ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣವಾಗಿದ್ದು, ಚರಂಡಿ ನೀರು ಸೇರಿದಂತೆ ಯಾವುದನ್ನು ಸ್ವಚ್ಛ ಮಾಡದ ಹಿನ್ನಲೆಯಲ್ಲಿ ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರಣವಾಗಿದೆ. ಇದರಿಂದ ಜನರು ಅಸ್ವಸ್ಥಗೊಂಡದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.