ಮಾಂಜ್ರಾ ನದಿಗೆ ಬಿಟ್ಟಿದ್ದ ನೀರು ಬಂದ್ – ನೆಮ್ಮದಿಯ ನಿಟ್ಟುಸಿರು ಬಿಟ್ಟ ರೈತರು

Public TV
1 Min Read
farmer bidar 1

ಬೀದರ್: ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ಮಾಂಜ್ರಾನದಿಗೆ ಬಿಡಲಾಗುತ್ತಿದ್ದ ಅಪಾರ ಪ್ರಮಾಣದ ನೀರು ಬಂದ್ ಮಾಡಲಾಗಿದ್ದು, ಮಾಂಜ್ರಾನದಿಯ ದಡದಲ್ಲಿರುವ ಹೆಚ್ಚಿನ ರೀತಿಯ ಬೆಳೆಗಳನ್ನು ಕಳೆದುಕೊಳುತ್ತಿದ್ದ ರೈತರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.

farmer bidar 3

ಕಳೆದ ಮೂರು ದಿನಗಳ ಹಿಂದೆ ಧನ್ನೆಗಾಂವ್ ಜಲಾಶಯದಿಂದ ಮಾಂಜ್ರಾನದಿಗೆ ಬಿಡಲಾಗುತ್ತಿದ್ದ 50 ರಿಂದ 60 ಸಾವಿರ ಕ್ಯೂಸೆಕ್ ನೀರು ಬಂದ್ ಆಗಿದ್ದು, ಬೀದರ್ ನ ಮಾಂಜ್ರಾನದಿ ದಡದಲ್ಲಿ ನೀರಿನ ಮಟ್ಟ ತಗ್ಗಿದೆ. ಧನ್ನೆಗಾಂವ್ ಜಲಾಶಯದಿಂದ ಹೆಚ್ಚಿನ ನೀರು ಮಾಂಜ್ರಾನದಿಗೆ ಬಿಡುಗಡೆಯಾಗಿದ್ದರೆ, ಹೆಚ್ಚಿನ ಬೆಳೆ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದ ಮಾಂಜ್ರಾನದಿ ದಡದಲ್ಲಿರುವ ರೈತರು ಮಹಾ ಪ್ರವಾಹದಿಂದ ಬಚಾವಾಗಿದ್ದಾರೆ. ಇದನ್ನೂ ಓದಿ: ಹಾನಗಲ್ ಉಪಚುನಾವಣೆ: ಕಾಂಗ್ರೆಸ್‍ನಲ್ಲೂ ಫೈನಲ್ ಆಗಿಲ್ಲ ಅಭ್ಯರ್ಥಿ ಹೆಸರು 

farmer bidar 4

ಮಹಾ ಮಳೆ, ಧನ್ನೆಗಾಂವ್ ಹಾಗೂ ಕಾರಂಜಾ ಜಲಾಶಯದ ಎಫೆಕ್ಟ್‍ನಿಂದಾಗಿ ಲಕ್ಷಾಂತರ ಬೆಳೆ ಕಳೆದುಕೊಂಡ ಬೀದರ್ ರೈತರು ಕಂಗಾಲಾಗಿದ್ದರು. ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿರುವ ಹಿನ್ನೆಲೆ ಧನ್ನೆಗಾಂವ್ ಜಲಾಶಯದ ಎಲ್ಲ ಗೇಟುಗಳು ಬಂದ್ ಮಾಡಲಾಗಿದ್ದು, ಮಾಂಜ್ರಾನದಿ ದಡದಲ್ಲಿ ನೆರೆ ಇಳಿಕೆಯಾಗಿದೆ. ಇದನ್ನೂ ಓದಿ:  ತುಕುಡೆ ಗ್ಯಾಂಗಿನ ನಾಯಕರ ಸಮಾಧಿ ಮೇಲೆ ಬಿಜೆಪಿ, ಸಂಘ ಬಲವಾಗಿ ಬೆಳೆದಿದೆ: ಸಿ.ಟಿ.ರವಿ

ಡ್ಯಾಮ್‍ನಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಔರಾದ್, ಭಾಲ್ಕಿ ತಾಲೂಕಿನಲ್ಲಿ ರೈತರು ಬೆಳೆದ ಬೆಳೆಗೆ ನೀರು ನುಗ್ಗಿತ್ತು. ಪರಿಣಾಮ ಉದ್ದು, ತೊಗರಿ, ಕಬ್ಬು ಬೆಳೆ ನೀರುಪಾಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *