ಭೋಪಾಲ್: ಹೈದರಾಬಾದ್ ಪಶುವೈದ್ಯೆ ಹಾಗೂ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬಗ್ಗೆ ಇಡೀ ದೇಶವೇ ಮಮ್ಮಲ ಮರುಗಿ, ಕಾಮುಕರ ವಿರುದ್ಧ ಸಿಡಿದೆದ್ದಿದೆ. ಈ ಕಿಚ್ಚಿನ ಬಿಸಿ ಆರುವ ಮುನ್ನವೇ ಮಧ್ಯಪ್ರದೇಶದಲ್ಲಿ ಕಾಮುಕರು ಅಟ್ಟಹಾಸ ಮೆರೆದಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಶಾಲಾ ಶಿಕ್ಷಕಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಇತ್ತ ಧಾಮೋಹ್ ಜಿಲ್ಲೆಯಲ್ಲಿ ಯುವತಿಯೊಬ್ಬಳು ಕಾಮಪಿಶಾಚಿಗಳ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ 4 ವರ್ಷದ ಬಾಲಕಿಯನ್ನು ಅತ್ಯಚಾರಗೈದು ವಿಕೃತಿ ಮೆರೆದಿದ್ದ ಕಾಮುಕರಿಗೆ ಪೊಲೀಸರ ಎದುರೇ ವಕೀಲರ ತಂಡ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಇಂದೋರ್ ನ ಮ್ಹಾವ್ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: 7ರ ಬಾಲೆಯನ್ನ ಅತ್ಯಾಚಾರಗೈದ ಕಾಮುಕನಿಗೆ 10 ವರ್ಷ ಜೈಲು ಶಿಕ್ಷೆ
ಗುರುವಾರ ಶಾಲೆ ಮುಗಿಸಿಕೊಂಡು ಶಿಕ್ಷಕಿ ಸಂಜೆ ಸುಮಾರು 5 ಗಂಟೆಗೆ ಮನೆಗೆ ತೆರಳುತ್ತಿದ್ದಾಗ ಕಾಮುಕರು ಆಕೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರವೆಸಗಿರುವುದು ಬೆಳಕಿಗೆ ಬಂದಿದೆ. ಅತ್ಯಾಚಾರ ಮಾಡಿದ ನಂತರ ಶಿಕ್ಷಕಿಯ ಜ್ಞಾನತಪ್ಪಿದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಕೆಲ ಸಮಯದ ನಂತರ ಶಿಕ್ಷಕಿಗೆ ಎಚ್ಚರವಾಗಿ ಮನೆಗೆ ಹೋಗಿ ಕುಟುಂಬಸ್ಥರ ಬಳಿ ನಡೆದ ಘಟನೆಯನ್ನು ತಿಳಿಸಿದ್ದರು. ಆಗ ಕುಟುಂಬಸ್ಥರು ರಾಂಪುರ್ ನೈಕಿನ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ದುರುಳರ ಕ್ರೌರ್ಯಕ್ಕೆ ಮತ್ತೊಂದು ಬಲಿ – ಬದುಕಲಿಲ್ಲ ಬೆಂಕಿಯಲ್ಲಿ ಬೆಂದ ಉನ್ನಾವ್ ಸಂತ್ರಸ್ತೆ
Madhya Pradesh: Four people have been arrested in connection with the alleged gang rape of a teacher in Sidhi on December 5.
— ANI (@ANI) December 7, 2019
ಶಿಕ್ಷಕಿ ದೂರು ಕೊಟ್ಟ ತಕ್ಷಣ ಕಾರ್ಯನಿರತರಾದ ಪೊಲೀಸರು ಕೃತ್ಯವೆಸೆಗಿದ್ದ ಬಚ್ಚು ಲೋನಿಯಾ, ಬೀರು ಲೋನಿಯಾ, ನರೇಂದ್ರ ಲೋನಿಯಾ ಮತ್ತು ಶಿವ್ ಶಂಕರ್ ಲೋನಿಯಾನನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಈ ಎಲ್ಲಾ ಆರೋಪಿಗಳು ಈ ಹಿಂದೆ ಕೂಡ ಪ್ರಕರಣಗಳಲ್ಲಿ ಭಾಗಿಯಾದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Indore: Lawyers present at court premises attempted to thrash an accused in a minor girl rape case. The accused was brought to the court for a hearing in the case. #MadhyaPradesh pic.twitter.com/VyVyZerlkb
— ANI (@ANI) December 7, 2019
ಧಾಮೋಹ್ನಲ್ಲಿ 17 ವರ್ಷದ ಯುವತಿಗೆ ಪ್ರತಿನಿತ್ಯ ಸ್ಥಳೀಯ ಯುವಕರು ಲೈಂಗಿಕ ಕಿರುಕುಳವನ್ನು ಕೊಡುತ್ತಿದ್ದರು. ಕಾಮುಕರ ಅಟ್ಟಹಾಸಕ್ಕೆ ರೋಸಿಹೋಗಿದ್ದ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಪ್ರಕರಣ ಸಂಬಂಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಯುವತಿ ಕುಟುಂಬಸ್ಥರು, ಸ್ಥಳೀಯರ ಹೇಳಿಕೆಗಳನ್ನು ಪೊಲೀಸರು ಪಡೆದು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಟಿಕೆ ಕೊಡಿಸುವುದಾಗಿ ಹೇಳಿ 9 ತಿಂಗಳ ಕಂದಮ್ಮನ ಮೇಲೆ ರೇಪ್
ರಾಜ್ಯದಲ್ಲಿ ನಡೆದ ಈ ಘಟನೆಗಳ ಬಗ್ಗೆ ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಅವರು ಪ್ರತಿಕ್ರಿಯಿಸಿ, ಮಧ್ಯಪ್ರದೇಶವನ್ನು ಮತ್ತೊಂದು ಉತ್ತರ ಪ್ರದೇಶವಾಗಲು ಬಿಡುವುದಿಲ್ಲ. ಈ ರೀತಿಯ ಪ್ರಕರಣ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ. ಮಹಿಳೆಯರ ರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.