ಚಿಕ್ಕಮಗಳೂರು: ಸಾವಿರ ಪದಗಳಲ್ಲಿ ಹೇಳಲಾಗದ್ದನ್ನ ಒಂದು ಫೋಟೋ ಹೇಳುತ್ತೆ ಅನ್ನೋದು ಅಕ್ಷರಶಃ ಸತ್ಯ. ಯಾಕೆಂದರೆ, ಅಂತಹ ಅಪರೂಪದ ಫೋಟೋಗಳಿಗೆ ಕಾಫಿನಾಡಿನ ಮಲೆನಾಡು ಹಾಗೂ ಬಯಲುಸೀಮೆ ಭಾಗ ಸಾಕ್ಷಿಯಾಗಿದೆ.
ಹೌದು. ಕಳೆದ ಎರಡು ದಶಕಗಳಿಂದ ಭೀಕರ ಬರಗಾಲಕ್ಕೆ ತುತ್ತಾಗಿರೋ ಕಡೂರು ತಾಲೂಕಿನಲ್ಲಿ ಹನಿ ನೀರಿಗೂ ಹಾಹಾಕಾರವಿದೆ. ಜಾನುವಾರುಗಳ ಸ್ಥಿತಿಯಂತೂ ಶೋಷಣೀಯ ಆಗಿಬಿಟ್ಟಿದೆ. ಇಂತಹ ಸಂದರ್ಭದಲ್ಲಿ ಮತಿಘಟ್ಟ ಗ್ರಾಮದಲ್ಲಿ ನೀರಿಗಾಗಿ ಇಟ್ಟಿದ್ದ ಖಾಲಿಕೊಡಗಳಲ್ಲಿ ಜಾನುವಾರು ನೀರು ಕುಡಿಯಲು ಪ್ರಯತ್ನಿಸ್ತಿರೋ ಫೋಟೋ ಭಾವನಾತ್ಮಕವಾಗಿದ್ದು, ಕಲ್ಲು ಮನಸ್ಸಿನವರನ್ನು ಕರಗಸುವಂತಿದೆ.
ಅಲ್ಲದೆ ಅಪ್ಪಟ ಮಲೆನಾಡು ಎನ್.ಆರ್.ಪುರ ತಾಲೂಕಿನ ಖಾಂಡ್ಯದಲ್ಲಿ ಎರಡು ದಿನ ಹಿಂದೆ ಸುರಿದ ಮಳೆ-ಗಾಳಿಗೆ ಬೃಹತ್ ಮರವೊಂದು ಮನೆ ಮೇಲೆ ಬಿದ್ದಿದ್ದು, ಆ ಮನೆಯ ಹೊರಭಾಗದಲ್ಲಿ ಇಬ್ಬರು ಪುಟ್ಟ ಮಕ್ಕಳು ನಿಂತು ಮನೆಯನ್ನ ನೋಡ್ತಿರೋ ದೃಶ್ಯ ಕೂಡ ಮನಮುಟ್ಟುವಂತಿದೆ. ಇಂತಹ ಫೋಟೋಗಳು ಸಾಮಾನ್ಯವಾಗಿದ್ದರು ಅದರ ಹಿಂದಿನ ಭಾವನೆ, ನೋವು, ಕಷ್ಟ-ಕಾರ್ಪಣ್ಯಗಳು ಮಾತ್ರ ಬಹುದೊಡ್ಡದಾಗಿದೆ.