ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿಯವರು ಸಲಹೆ ಕೊಟ್ಟಿದ್ದರು.
ಹೌದು. ಖುದ್ದು ಅಮಿತ್ ಶಾ ಅವರು ಬಿಜೆಪಿ ಪ್ರಣಾಳಿಕೆಯಲ್ಲಿ ಏನೆಲ್ಲ ಸೇರಿಸಬೇಕು ಅನ್ನುವ ಸಲಹೆ ಕೇಳಲು ಚಿಮೂ ಮನೆಗೆ ಬಂದಿದ್ದರು. ಈ ವೇಳೆ ಚಿಮೂ ಅಮಿತ್ ಶಾಗೆ ಪಂಚ ಸಲಹೆ ಕೂಡ ಕೊಟ್ಟಿದ್ದರು.
ಬಿಳಿ ನಿಲುವಂಗಿ, ಅದರ ಮೇಲೊಂದು ತ್ರಿವರ್ಣ ಧ್ವಜದ ಸಿಂಬಲ್. ಟಿಪ್ಪು, ಹಿಂದುತ್ವ, ಲಿಂಗಾಯತ ಧರ್ಮದ ವಿಚಾರ ಬಂದರೆ ಗಂಟೆಗಟ್ಲೆ ಮಾತಾನಾಡುವ ಛಾತಿ. ಮಗುವಿನ ಮುಖದ ಚಿಮೂ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅದೆಷ್ಟು ಬಾರಿ ಗಲಾಟೆ ಮಾಡಿದ್ದಾರೋ ಗೊತ್ತಿಲ್ಲ. ಟಿಪ್ಪುನ ಕಟ್ಟಾ ವಿರೋಧಿಯಾಗಿದ್ದ ಚಿದಾನಂದ ಮೂರ್ತಿ ಟಿಪ್ಪು ಜಯಂತಿ ಆಚರಣೆಗೆ ಭಾರೀ ವಿರೋಧ ಒಡ್ಡಿದ್ದರು. ಇಷ್ಟು ಮಾತ್ರವಲ್ಲದೇ ಹಂಪಿ ಸ್ಮಾರಕ ರಕ್ಷಣೆಗೂ ಓಡಾಡಿದ್ದ ಚಿಮೂ ಪೌರತ್ವ ಕಾಯ್ದೆಯ ಬಗ್ಗೆಯೂ ಬೆಂಬಲಿಸಿ ಮಾತಾನಾಡಿದ್ದರು. ಲಿಂಗಾಯತ ಧರ್ಮ ಒಡೆಯುವ ವಿಚಾರ ಬಂದಾಗ ಅದನ್ನು ಖಂಡಿಸಿ ಹೋರಾಟ ಮಾಡಿದ್ದರು.
ಒಟ್ಟಿನಲ್ಲಿ ಸಂಶೋಧಕರಾಗಿ ಅನೇಕ ಅಧ್ಯಯನವನ್ನು ಮಾಡಿ, ಕನ್ನಡ ಸಂಶೋಧನಾ ಜಗತ್ತಿಗೆ ಹೊಸ ಆಯಾಮವನ್ನು ಕೂಡ ಚಿದಾನಂದ ಮೂರ್ತಿ ಕೊಟ್ಟಿರುವುದನ್ನು ಸ್ಮರಿಸಬಹುದು.