ಬೆಂಗಳೂರು: ರಾಜ್ಯದಲ್ಲಿ 50 ಪರ್ಸೆಂಟ್ ಡಿಸ್ಕೌಂಟ್ ದಂಡಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶನಿವಾರ ಕೊನೆಯ ದಿನವಾಗಿದ್ದು, ದಂಡದ ಮೊತ್ತ 100 ಕೋಟಿ ಗಡಿ ದಾಟಿದೆ. ದಂಡ ಪಾವತಿಗೆ ಅವಧಿ ವಿಸ್ತರಣೆಗೆ ಸರ್ಕಾರ ಮುಂದಾಗುವ ಸಾಧ್ಯತೆ ಹೆಚ್ಚಾಗಿದ್ದು, ಈ ಬಗ್ಗೆ ಸಾರಿಗೆ ಇಲಾಖೆಯೊಂದಿಗೆ (Transport Department) ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ. ಇದನ್ನೂ ಓದಿ: ಲಾರಿಗೆ ಡಿಕ್ಕಿ ಹೊಡೆದ ಕಾರು – 2 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನವ ದಂಪತಿ ಸಾವು
ಕೊನೆಯ ದಿನವಾದ ಶನಿವಾರ ದಂಡ ಪಾವತಿಗೆ ನೂಕು ನುಗ್ಗಲು ಹೆಚ್ಚಾಗಿತ್ತು. ಕೆಲ ಪೊಲೀಸ್ ಠಾಣೆ (Bengaluru Traffic Police) ಮುಂಭಾಗ ಜನರು ಸಾಲುಗಟ್ಟಿ ನಿಂತಿದ್ದರಿಂದ ಪೊಲೀಸರೂ ಹೈರಾಣಾಗಿದ್ದರು. ಇದನ್ನೂ ಓದಿ: `ರಿಷಬ್’ ಜೊತೆ ಕಾಣಿಸಿಕೊಂಡ ಊರ್ವಶಿ ರೌಟೇಲಾ: `ಕಾಂತಾರ 2′ ಬಗ್ಗೆ ಅಪ್ಡೇಟ್
26.26 ಲಕ್ಷ ಸಂಚಾರ ನಿಮಯ ಉಲ್ಲಂಘನೆ (Traffic Violations) ಮಾಡಿರೋ ಕೇಸ್ಗಳು ವಿಲೇವಾರಿಯಾಗಿದೆ. ಒಟ್ಟಿನಲ್ಲಿ ಆಫ್ ರೇಟ್, ಚೀಪ್ ರೇಟ್ಗೆ ಬೆಂಗಳೂರಿಗರು (Bengaluru) ಕೆಲಸ ಕಾರ್ಯ ಬಿಟ್ಟು ಕೇಸ್ ಕ್ಲಿಯರ್ ಮಾಡಿಕೊಂಡಿದ್ದರೆ, ಮತ್ತಷ್ಟು ಮಂದಿ ಕೊನೆ ದಿನಾಂಕದವರೆಗೆ ಕಾದು ದಂಡ ಕಟ್ಟೋದಕ್ಕೆ ಆಗದೇ ಸುಮ್ಮನಾಗಿದ್ದಾರೆ.
ಈ ಬಗ್ಗೆ `ಪಬ್ಲಿಕ್ ಟಿವಿ’ಯೊಂದಿಗೆ (Public TV) ಮಾತನಾಡಿದ ಸಾರಿಗೆ ಇಲಾಖೆ ಆಯುಕ್ತ ಸಿದ್ದರಾಮಪ್ಪ, 50 ಪರ್ಸೆಂಟ್ ದಂಡ ಪಾವತಿಸುವ ಅವಧಿ ವಿಸ್ತರಣೆ ಮಾಡುವ ಬಗ್ಗೆ ಚರ್ಚಿಸಲು ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗಿದೆ. ಸರ್ಕಾರ ಸಹ ಈ ಬಗ್ಗೆ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕು ಎಂದಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k