ಟಿಪ್ಪು ಪಠ್ಯ ಗೊಂದಲದಲ್ಲಿ ಸರ್ಕಾರ

Public TV
1 Min Read
TIPPU D 1

ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾಗಿರುವ ಟಿಪ್ಪು ಸುಲ್ತಾನ್ ಪಠ್ಯ ವಿಚಾರ ಸರ್ಕಾರಕ್ಕೆ ಗೊಂದಲ ತಂದಿದೆ. ಯಾವ ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋ ಗೊಂದಲದಲ್ಲಿ ಸರ್ಕಾರ ಇದ್ದು, ಅಂತಿಮ ನಿರ್ಧಾರಕ್ಕಾಗಿ ತಲೆ ಕೆಡಿಸಿಕೊಂಡಿದೆ.

ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಪಠ್ಯವನ್ನು ತೆಗೆಯಬೇಕು ಅಂತ ಬಿಜೆಪಿ ಸರ್ಕಾರ ಬಂದಾಗ ಸಿಎಂ ಯಡಿಯೂರಪ್ಪಗೆ ಮನವಿ ಮಾಡಿದ್ರು. ಟಿಪ್ಪು ದೇಶದ್ರೋಗಿ, ಮತಾಂಧ, ನರಹಂತಕ ಅನ್ನೋದು ಶಾಸಕ ಅಪ್ಪಚ್ಚು ರಂಜನ್ ವಾದವಾಗಿದೆ. ಶಾಸಕರ ಮನವಿ ಮೇರೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪಠ್ಯ ಇರಬೇಕೋ ಬೇಡವೋ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಕಮಿಟಿ ನೇಮಕ ಮಾಡಿ ವರದಿ ನೀಡುವಂತೆ ಸೂಚನೆ ನೀಡಿದರು. ಈಗಾಗಲೇ ಪಠ್ಯಪುಸ್ತಕ ಕಮಿಟಿ ತನ್ನ ವರದಿಯನ್ನ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಕಮಿಟಿ ಅಭಿಪ್ರಾಯದಲ್ಲಿ ಪಠ್ಯ ತೆಗೆಯೋದು ಬೇಡ ಅಂತ ಸಲಹೆ ನೀಡಲಾಗಿದೆ.

appacchu ranjan

ವರದಿ ಈಗ ಸರ್ಕಾರದ ಮುಂದೆ ಇದೆ. ಈಗಾಗಲೇ ಟಿಪ್ಪು ಜಯಂತಿ ರದ್ದು ಮಾಡಿರುವ ಸರ್ಕಾರಕ್ಕೆ ಪಠ್ಯವನ್ನು ತೆಗೆಯೋದು ದೊಡ್ಡ ಚಾಲೆಂಜ್ ಆಗಿದೆ. ಅನೇಕ ವರ್ಷಗಳಿಂದ ಟಿಪ್ಪು ಪಠ್ಯ ಇದೆ. ಈಗ ದಿಢೀರ್ ಅಂತ ತೆಗೆದರೆ ವಿರೋಧಗಳು ವ್ಯಕ್ತವಾಗೋದು ಸಹಜ. ಹೀಗಾಗಿ ತಾಳ್ಮೆಯಿಂದ ಪ್ರಕರಣ ಬಗೆಹರಿಸಲು ಸರ್ಕಾರ ತೀರ್ಮಾನ ಮಾಡಿದೆ. ಈಗಾಗಲೇ ವರದಿ ಸಂಬಂಧ ಸಿಎಂ ಜೊತೆ ಚರ್ಚೆ ಮಾಡೋದಾಗಿ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಸಿಎಂ ಜೊತೆ ಚರ್ಚೆ ಬಳಿಕ ಅಂತಿಮ ನಿರ್ಧಾರ ಸರ್ಕಾರ ತೆಗೆದುಕೊಳ್ಳುತ್ತೆ. ಆದ್ರೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅನ್ನೋದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ.

SURESH KUMAR 3

Share This Article
Leave a Comment

Leave a Reply

Your email address will not be published. Required fields are marked *