ಬೆಂಗಳೂರು: ಸಾಫ್ಟ್ ವೇರ್ ಉದ್ಯೋಗಿಯೊಬ್ಬರು ತಮ್ಮ ಉದ್ಯೋಗದ ಕೊನೆಯ ದಿನದ ಆಫೀಸಿಗೆ ಕುದುರೆ ಏರಿ ಬಂದು ಅಚ್ಚರಿ ಮೂಡಿಸಿದ್ದಾರೆ.
ರೂಪೇಶ್ ಕುಮಾರ್ ವರ್ಮಾ ಕುದುರೆ ಹೇರಿ ಬಂದ ಟೆಕ್ಕಿಯಾಗಿದ್ದು, ತಮ್ಮ ಉದ್ಯೋಗದ ಕೊನೆ ದಿನ ವಿಶೇಷವಾಗಿ ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ಕುರಿತು ಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಸದ್ಯ ತಮ್ಮದೇ ಸಂಸ್ಥೆ ಸ್ಥಾಪಿಸುವ ಉದ್ದೇಶ ಹೊಂದಿರುವ ವರ್ಮಾ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದು, ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಬೇಸತ್ತು ಪ್ರತಿಭಟನೆ ನಡೆಸುತ್ತಿದ್ದೇನೆ. ಟ್ರಾಫಿಕ್ ಸಮಸ್ಯೆ ಕಾರಣದಿಂದಲೇ ನಾನು ಕುದುರೆ ಸವಾರಿ ಕಲಿತಿರುವುದಾಗಿ ತಿಳಿಸಿದ್ದಾರೆ.
- Advertisement 2-
Here the video pic.twitter.com/kxI7l5wfD2
— Sathish Sarvodaya (@SathiSarva) June 15, 2018
- Advertisement 3-
ತಾನು ಏರಿ ಬಂದ ಕುದುರೆಗೆ ಬೋರ್ಡ್ ಸಹ ಹಾಕಿದ್ದ ವರ್ಮಾ, ತನ್ನ ಸಾಫ್ಟ್ ವೇರ್ ಕೆಲಸಕ್ಕೆ ಕೊನೆ ದಿನ ಹಾಜರಾಗುತ್ತಿದ್ದಾಗಿ ಬರೆದಿದ್ದು, ಕಚೇರಿಗೆ ಬಳಿ ತೆರಳಿದ ಅದ ತನ್ನ ಕುದುರೆಯನ್ನು ಪಾರ್ಕಿಂಗ್ ನಲ್ಲಿ ಕಟ್ಟಿ ತೆರಳಿದ್ದಾರೆ.
- Advertisement 4-
ಇದೇ ವೇಳೆ ತಮ್ಮ ಈ ಕಾರ್ಯಕ್ಕೆ ಸಮರ್ಥನೆಯನ್ನು ನೀಡಿರುವ ಅವರು ದೇಶದಲ್ಲಿ ಹಲವು ಸಮಸ್ಯೆಗಳಿದ್ದು, ಪ್ರತಿಯೊಬ್ಬರು ಒಂದು ಸಮಸ್ಯೆ ಕುರಿತಾದರೂ ಗಮನಹರಿಸಬೇಕಿದೆ ಎಂದು ಹೇಳಿದ್ದಾರೆ. ಅಲ್ಲದೇ ತಮ್ಮಂತೇ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಇತರೇ ಉದ್ಯೋಗಿಗಳು ಕೇವಲ ಕೆಲಸಕ್ಕೆ ಸೀಮಿತವಾಗದೇ ತಮ್ಮದೇ ಕಂಪೆನಿ ನಿರ್ಮಾಣ ಮಾಡಲು ಮುಂದಾಗಿ ಎಂದು ತಿಳಿಸಿದ್ದಾರೆ.
ಸದ್ಯ ಈ ಕುರಿತ ಫೋಟೋ ಹಾಗೂ ವಿಡಿಯೋ ವನ್ನು ಸತೀಶ್ ಸರ್ವೋದಯ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Roopesh Kumar Verma, the techie who quit in style, many of his colleagues who saw him today wanted to be in his shoes…he rode a horse from Mathikere to Embassy Golf Link only to put down his papers on the last day as a "software engineer". pic.twitter.com/vz6mYengdN
— Poornima Nataraj (@poornima202) June 14, 2018
Last day to work at EGL. Live life king size @WeAreBangalore @ELCITA_IN #IT #Bangalore pic.twitter.com/R8q6HbS5NL
— Vinay Kumar (@vinaaykumarj) June 15, 2018