ಜಮ್ಮು-ಕಾಶ್ಮೀರದಲ್ಲಿ ಬೆಂಗ್ಳೂರು ಯೋಧ ಆತ್ಮಹತ್ಯೆ – ತನಿಖೆಗೆ ಪೋಷಕರ ಆಗ್ರಹ

Public TV
1 Min Read
bngl yodha

ಶ್ರೀನಗರ: ಬೆಂಗಳೂರು ಮೂಲದ ಸೈನಿಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಮ್ಮು-ಕಾಶ್ಮೀರದ ಪಹಗಾಮ್ ಸೈನಿಕ ನೆಲೆಯಲ್ಲಿ ನಡೆದಿದೆ.

ಆರ್. ನರೇಂದ್ರ ಆತ್ಮಹತ್ಯೆ ಮಾಡಿಕೊಂಡಿರುವ ಸೈನಿಕ ಎಂದು ತಿಳಿದುಬಂದಿದ್ದು, ಇವರು ಜಮ್ಮು-ಕಾಶ್ಮೀರದ ಪಹಗಾಮ್ ಪ್ರದೇಶದಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು.

vlcsnap 2017 10 09 07h47m00s173

ಯೋಧ ನರೇಂದ್ರ ಅವರು ಭಾನುವಾರ ಮಧ್ಯಾಹ್ನದ ವೇಳೆ ಆರ್ಮಿ ಕ್ಯಾಂಪ್ ನಲ್ಲಿ ತಮ್ಮ ಸರ್ವಿಸ್ ರೈಫಲ್ ನಿಂದ ಶೂಟ್ ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಕುರಿತು ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ರಾಜಗೋಪಾಲನಗರದ ಮಾರುತಿ ಟ್ಯಾಕೀಸ್ ಬಳಿ ಮೃತ ಸೈನಿಕ ನರೇಂದ್ರ ಪೋಷಕರು ವಾಸಿಸುತ್ತಿದ್ದಾರೆ. ಯೋಧ ನರೇಂದ್ರ ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಸೇವೆಗೆ ಮರಳಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಿನ ತಮ್ಮ ಪೋಷಕರಿಗೆ ವಿಡಿಯೋ ಕಾಲ್ ಮಾಡಿ ಸಂತೋಷದಿಂದ ಮಾತನಾಡಿದ್ದರು. ತಮ್ಮ ಮಗ ಆತ್ಮಹತ್ಯೆಗೆ ಶರಣಾಗಿರುವ ಮಾಹಿತಿ ಪಡೆದ ಪೋಷಕರು ತೀವ್ರ ದುಃಖದಲ್ಲಿದ್ದು, ತಮ್ಮ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿದ್ದಾರೆ.

ಮೃತ ಯೋಧನ ಪಾರ್ಥೀವ ಶರೀರ ಇಂದು ಬೆಳ್ಳಿಗೆ 11.30ರ ವೇಳೆಗೆ ಬೆಂಗಳೂರಿಗೆ ಆಗಮಿಸಲಿದೆ ಎಂದು ಮೂಲಗಳು ತಿಳಿಸಿವೆ.

vlcsnap 2017 10 09 07h47m09s25

vlcsnap 2017 10 09 07h47m38s7

vlcsnap 2017 10 09 07h48m39s146

vlcsnap 2017 10 09 07h49m52s108

Share This Article
Leave a Comment

Leave a Reply

Your email address will not be published. Required fields are marked *