ಕಳ್ಳತನಕ್ಕೆ ಬಂದವ ಕಿಟಕಿಯಲ್ಲಿಯೇ ಲಾಕ್!

Public TV
1 Min Read
Window Lock copy

ಬೆಂಗಳೂರು: ಕಳ್ಳತನಕ್ಕೆ ಬಂದವ ಕಿಟಕಿಯಲ್ಲಿ ಲಾಕ್ ಆಗಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ 24ನೇ ಮುಖ್ಯ ರಸ್ತೆಯ ನಾರಾಯಣ ಶಾಲೆ ಬಳಿ ನಡೆದಿದೆ.

ಇಂದು ಬೆಳಗ್ಗೆ ವ್ಯಕ್ತಿಯೋರ್ವ ಮನೆಯೊಂದರ ಬಳಿ ಕಿಟಕಿಯಲ್ಲಿ ಅನುಮಾನಾಸ್ಪದವಾಗಿ ಇಣುಕಿ ನೋಡುತ್ತಿದ್ದನು. ಇದು ಮನೆಯವರ ಗಮನಕ್ಕೆ ಬಂದ ಕೂಡಲೇ ವ್ಯಕ್ತಿಯ ಕೈಗಳನ್ನು ಮನೆಯೊಳಗೆ ಎಳೆದುಕೊಂಡು ಕಟ್ಟಿ ಹಾಕಿದ್ದಾರೆ. ಕೂಡಲೇ ಮನೆಯವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Window Lock 1

ಕಟ್ಟಿ ಹಾಕುತ್ತಿದ್ದಂತೆ ನನ್ನನ್ನು ಯಾರೋ ಹಿಂಬಾಲಿಸಿಕೊಂಡು ಬಂದರು. ಹಾಗಾಗಿ ಕಿಟಕಿ ಹತ್ತುತ್ತಿದ್ದೇನೆ ಎಂದು ಹೇಳಿದ್ದಾನೆ. ವ್ಯಕ್ತಿ ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿದ್ದಾನೆ. ಕಿಟಕಿಯಲ್ಲಿ ಕಟ್ಟಿ ಹಾಕಿದ್ದರಿಂದ ಸ್ಥಳಕ್ಕೆ ಆಗ್ನಿಶಾಮಕದಳದ ಸಿಬ್ಬಂದಿ ಆತನನ್ನು ಕೆಳಗಿಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.

Share This Article