ನಟೋರಿಯಸ್ ರೌಡಿಶೀಟರ್ ಕಾಲಿಗೆ ಗುಂಡು ಹೊಡೆದ ಪೊಲೀಸರು

Public TV
1 Min Read
police firing 1

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ಗನ್ ಸದ್ದು ಮಾಡಿದ್ದು, ನಟೋರಿಯಸ್ ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.

ಬಗಲಗುಂಟೆ ನಿವಾಸಿ ಸಿದ್ದರಾಜು ಅಲಿಯಾಸ್ ಸಿದ್ದ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಬ್ಯಾಡರಹಳ್ಳಿಯ ಆಶ್ರಯ ಬಡವಣೆಯಲ್ಲಿ ಈ ಘಟನೆ ನಡೆದಿದ್ದು, ಸಿದ್ದನ ವಿರುದ್ಧ ಸುಮಾರು 15 ಕೇಸ್‍ಗಳಿವೆ. ಕಾಮಾಕ್ಷಿಪಾಳ್ಯ, ರಾಜಗೋಪಲನ ನಗರ ರೌಡಿಶೀಟರ್ ಆಗಿದ್ದ ಸಿದ್ದನ ಮೇಲೆ ಬ್ಯಾಡರಹಳ್ಳಿ ಇನ್ಸ್‌ಪೆಕ್ಟರ್ ರಾಜೀವ್ ಫೈರಿಂಗ್ ಮಾಡಿದ್ದಾರೆ.

police firing

ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಸಿದ್ದನ ಬಗ್ಗೆ ಇಂದು ಮುಂಜಾನೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಆತನ ಮಾಹಿತಿ ಪಡೆದು ಹಿಡಿಯಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ರೌಡಿಶೀಟರ್ ಮುಂದಾಗಿದ್ದನು. ಬ್ಯಾಡರಳ್ಳಿ ಪೇದೆ ಹನುಮಂತರಾಜು ಅವರ ಮೇಲೆ ರೌಡಿಶೀಟರ್ ಹಲ್ಲೆ ಮಾಡಿದ್ದನು. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ರಾಜೀವ್ ಅವರು ಸಿದ್ದನ ಬಲಗಾಲಿಗೆ ಗುಂಡು ಹೊಡೆದಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *