ಇಬ್ಬರು ಮಾಸ್ಟರ್ ಮೈಂಡ್‍ಗಳಿಗಾಗಿ ಹುಡುಕಾಟ

Public TV
1 Min Read
BNG PASHA

ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಬ್ಲಾಸ್ಟ್ ಮಾಡಬೇಕು, ಹಿಂದೂ ಮುಖಂಡರ ಹತ್ಯೆ ಮಾಡಬೇಕು ಅಂತ ಅಂದುಕೊಂಡಿದ್ದ ತಂಡವನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಮೆಹಬೂಬ್ ಪಾಷಾ ಬಾಯಿಬಿಟ್ಟಿರೋ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

ಅದು ಕೂಡ ಮುಖ್ಯಮಂತ್ರಿಗಳ ಜಿಲ್ಲೆ ಶಿವಮೊಗ್ಗದಲ್ಲಿ. ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಇಬ್ಬರು ಮಾಸ್ಟರ್ ಮೈಂಡ್ ಗಳು ಇದ್ದಾರೆ ಅನ್ನೋ ಮಾಹಿತಿಯನ್ನು ಮೆಹಬೂಬ್ ಪಾಷಾ ಬಾಯಿ ಬಿಟ್ಟಿದ್ದಾನೆ. ಮೆಹಬೂಬ್ ಪಾಷಾ ಕೇವಲ ಹುಡುಗರನ್ನು ನೇಮಕಾತಿ ಮಾಡಿಕೊಳ್ಳೋದು ಟ್ರೈನಿಂಗ್ ಕೊಡಿಸೋದು ಅಷ್ಟೇ. ತೀರ್ಥಹಳ್ಳಿಯಲ್ಲಿ ಇದ್ದವರು ಯಾವ ರೀತಿ ಕೆಲಸ ಮುಗಿಸಿಬೇಕು ಅಂತ ತೀರ್ಮಾನ ಮಾಡುತ್ತಾ ಇದ್ದರು. ಇದನ್ನೂ ಓದಿ: ಒಂದು ಹತ್ಯೆ ಯತ್ನ – ಆರು ಕೇಸ್ ರೀ ಓಪನ್

ಶ್ರೀಲಂಕಾದ ಬ್ಲಾಸ್ಟ್ ನಲ್ಲಿ ಪಾಲ್ಗೊಂಡಿದ್ದ ಸಂಘಟನೆಯವರೇ ಇದರಲ್ಲೂ ಇದ್ದಾರೆ ಅನ್ನೋ ಅನುಮಾನ ಕಾಡುತ್ತಾ ಇದೆ. ಮೆಹಬೂಬ್ ಪಾಷಾ ಬಂಧನವಾದ ಕೂಡಲೇ ತೀರ್ಥಹಳ್ಳಿಯ ಇಬ್ಬರು ಪರಾರಿಯಾಗಿದ್ದಾರೆ. ಸದ್ಯ ಆ ಇಬ್ಬರು ಸಿಕ್ಕರೆ ಸ್ಫೋಟಕ ಮಾಹಿತಿ ಬಹಿರಂಗವಾಗಲಿದೆ. ಇದನ್ನೂ ಓದಿ: ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ: ಸೂಲಿಬೆಲೆ

Share This Article
Leave a Comment

Leave a Reply

Your email address will not be published. Required fields are marked *