ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಸಿಲಿಕಾನ್ ಸಿಟಿ ಮಂದಿ ಒಂದು ದಿನ ಮುಂಚಿತವಾಗಿ ಸಿದ್ಧಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ಹೊಸ ಪ್ರಯತ್ನಕ್ಕೆ ಬೆಂಗಳೂರು ಜನರು ಉಘೇ ಉಘೇ ಎಂದಿದ್ದಾರೆ. ಮೋದಿಯ ಜನತಾ ಕರ್ಫ್ಯೂಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಾಳೆ ಎಲ್ಲರೂ ಮನೆ ಬಿಟ್ಟು ಹೊರಗೆ ಬರದೆ ಇರುವುದಕ್ಕೆ ಸಿದ್ಧಗೊಂಡಿದ್ದಾರೆ.
ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಯಾರು ಕೂಡ ಮನೆಯಿಂದ ಹೊರಗೆ ಬರಬಾರದು ಹಾಗೂ ಸಂಜೆ 5 ಗಂಟೆಗೆ ಅವರರವರ ಮನೆಯ ಬಾಲ್ಕಾನಿಯಲ್ಲಿ ನಿಂತು ಮಹಾಮಾರಿಯನ್ನು ಮಟ್ಟಹಾಕಲು ತಮ್ಮ ಪ್ರಾಣವನ್ನು ಲೆಕ್ಕಿಸದೇ ಶ್ರಮಿಸುತ್ತಿರುವ ವೈದ್ಯರು, ದಾದಿಯರು, ಪೊಲೀಸರು, ಪತ್ರಿಕ್ಯೋದ್ಯಮದ ಬಳಗದವರಿಗೆ ಚಪ್ಪಾಳೆ ಹೊಡೆಯುವ ಮೂಲಕ ಅವರಿಗೆ ಮನಪೂರ್ವಕ ಅಭಿನಂದನೆ ಸಲ್ಲಿಸಲ್ಲು ಬೆಂಗಳೂರು ಜನರು ತಯಾರಾಗಿದ್ದಾರೆ.
ಭಾನುವಾರ ಮುಂಜಾನೆಯಿಂದ ಎಲ್ಲರೂ ಅದರಲ್ಲೂ ಹಿರಿಯ ನಾಗರಿಕರು ಹಾಗೂ ಮಕ್ಕಳು ಯಾರು ಕೂಡ ಹೊರಗೆ ಬರದ ರೀತಿಯಲ್ಲಿ ನೋಡಿಕೊಳ್ಳುವಂತೆ ಪ್ರಧಾನಿ ಸಂದೇಶ ಸಾರಿದ್ದರು. ಪ್ರಧಾನಿ ನರೇಂದ್ರ ಮೋದಿಯ ಈ ಸಂದೇಶಕ್ಕೆ ಬದ್ಧರಾಗಿರುಲು ಜನರು ಸಜ್ಜಾಗಿದ್ದಾರೆ.