Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಲಾದೇವಿಯನ್ನು ಆರಾಧಿಸುವ ಕಲಾರಾಧಕರಿಗಾಗಿ ಸಿನಿಮಾ ಸ್ಕೂಲ್!
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಕಲಾದೇವಿಯನ್ನು ಆರಾಧಿಸುವ ಕಲಾರಾಧಕರಿಗಾಗಿ ಸಿನಿಮಾ ಸ್ಕೂಲ್!

Public TV
Last updated: October 8, 2019 2:23 pm
Public TV
Share
3 Min Read
Tarun Cinema School 2
SHARE

ಬೆಂಗಳೂರು: ನಿರ್ಮಾಪಕ ತರುಣ್ ಶಿವಪ್ಪ ಸದಾ ಕ್ರಿಯಾಶೀಲತೆಗಾಗಿ ತುಡಿಯುವವರು. ತರುಣ್ ಟಾಕೀಸ್ ಸಂಸ್ಥೆಯನ್ನು ಆರಂಭಿಸಿ ಆ ಮೂಲಕ ರೋಸ್, ಮಾಸ್ ಲೀಡರ್, ವಿಕ್ಟರಿ-2 ಥರದ ಸೂಪರ್ ಹಿಟ್ ಚಿತ್ರಗಳನ್ನು ಸೇರಿದಂತೆ ಈಗ ನಿರ್ಮಾಣ ಹಂತದಲ್ಲಿರುವ ಖಾಕಿ ಸಿನಿಮಾವನ್ನು ನಿರ್ಮಿಸಿರುವವರು ನಿರ್ಮಾಪಕ ತರುಣ್ ಶಿವಪ್ಪ. ಸಾಮಾನ್ಯಕ್ಕೆ ಸಿನಿಮಾ ನಿರ್ಮಾಪಕರು ತಾವಾಯಿತು ತಮ್ಮ ಹಣಕಾಸಿನ ವ್ಯವಹಾರವಾಯಿತು ಎಂದು ಸುಮ್ಮನಾಗಿಬಿಡುತ್ತಾರೆ. ಯಾವ ಸಿನಿಮಾದ ಮೇಲೆ ಹೂಡಿಕೆ ಮಾಡಿದರೆ ಎಷ್ಟು ಲಾಭವಾಗಬಹುದು ಎಂಬುದಷ್ಟೇ ಅವರ ಲೆಕ್ಕಾಚಾರವಾಗಿರುತ್ತದೆ. ಆದರೆ ನಿರ್ಮಾಪಕ ತರುಣ್ ಶಿವಪ್ಪ ಅವರ ಆಲೋಚನಾ ಲಹರಿಯೇ ಬೇರೆ. ಕನ್ನಡ ಚಿತ್ರರಂಗವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಹೇಗೆ? ಇಲ್ಲಿ ಕೊರತೆ ಇರುವ ಸಮರ್ಥ ಕಲಾವಿದರು, ತಂತ್ರಜ್ಞರನ್ನು ಹುಟ್ಟುಹಾಕುವುದು ಹೇಗೆ ಎಂದು ಚಿಂತಿಸಿ, ಸಾಕಷ್ಟು ಜನರೊಂದಿಗೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಅದು ಸಿನಿಮಾ ಶಾಲೆಯನ್ನು ಆರಂಭಿಸುವುದು.

`ಸಿನಿಮಾ ಸ್ಕೂಲ್’ ಹೆಸರಿನಲ್ಲಿ ಚಲನಚಿತ್ರ ರಂಗಕ್ಕೆ ಸಂಬಂಧಿಸಿದ ತರಬೇತಿ ಕೇಂದ್ರವನ್ನು ನಿರ್ಮಾಪಕ ತರುಣ್ ಶಿವಪ್ಪ ಆರಂಭಿಸುತ್ತಿದ್ದಾರೆ. ಕಲಾದೇವಿಯನ್ನು ಆರಾಧಿಸುವ ಕಲಾರಾಧಕರಿಗೆ ಎನ್ನುವ ಅಡಿಬರಹವನ್ನೂ ನೀಡಿದ್ದಾರೆ.

Tarun Cinema School 1

ನಿಜ ಚಿತ್ರರಂಗದ ಭಾಗವಾಗಬೇಕು ಎಂದು ತುಡಿಯುವ ಅಸಂಖ್ಯ ಜನರಿದ್ದಾರೆ. ಆದರೆ ಸರಿಯಾದ ಮಾರ್ಗದರ್ಶನವಿಲ್ಲದೆ ಅನೇಕರು ತಮ್ಮ ಮನಸ್ಸಿಗೊಪ್ಪದ ಕ್ಷೇತ್ರಗಳಲ್ಲಿ ದುಡಿಯುವಂತಹ ಸಂದರ್ಭ ಒದಗಿಬರುತ್ತದೆ. ಇನ್ನು ಕೆಲವರು ಹೇಗೋ ಮಾಡಿ ಚಿತ್ರರಂಗದ ಸಂಪರ್ಕ ಸಾಧಿಸುತ್ತಾರಾದರೂ, ಪರಿಣತಿಯ ಕೊರತೆಯಿಂದ ಗೆಲುವು ಮರೀಚಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ಕರಾರುವಕ್ಕಾದ, ಸ್ಪಷ್ಟ ಮಾರ್ಗದರ್ಶನ, ನಿಯಮಿತವಾದ ಶಿಕ್ಷಣ ಅಗತ್ಯ. ಆದರೆ, ಎಲ್ಲಿ ಹೋಗಿ ಯಾರ ಬಳಿ ಕಲಿಯುವುದು, ಅಸಲಿಗೆ ತಮಗೊಪ್ಪುವ ಯಾವ ವಿಭಾಗವನ್ನು ಆಯ್ಕೆ ಮಾಡಿಕೊಂಡರೆ ಸೂಕ್ತ ಎನ್ನುವ ಗೊಂದಲ ಇರುತ್ತದೆ. ಇಂಥ ಅಭ್ಯರ್ಥಿಗಳಿಗೆ `ಸಿನಿಮಾ ಸ್ಕೂಲ್’ ಸಂಪೂರ್ಣ ಸಹಕಾರಿಯಾಗಲಿದೆ. ನಟನೆ, ನಿರ್ದೇಶನ, ಛಾಯಾಗ್ರಹಣ, ಸಂಗೀತ, ಸಂಕಲನ ಮತ್ತು ನಿರೂಪಣೆಯ ಕುರಿತಾಗಿ ಇಲ್ಲಿ ತರಬೇತಿ ಆರಂಭಿಸಲಾಗುತ್ತಿದೆ.

ಆದರ್ಶ ಫಿಲಂ ಇನ್ಸ್ ಟಿಟ್ಯೂಟ್ ಸೇರಿದಂತೆ ರಾಜ್ಯದ ಹಲವಾರು ಸಿನಿಮಾ ಶಾಲೆಗಳಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ತರಬೇತುದಾರರಾಗಿ ಕಾರ್ಯ ನಿರ್ವಹಿಸಿರುವ, ಶಿವಾನಿ, ಮಿಂಚು, ಜುಲೈ22, 1947, ಇಂಗಳೆ ಮಾರ್ಗ, ಸಾವಿತ್ರಿ ಬಾಯಿ ಫುಲೆ, ಗೌರಿಪುತ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ವಿಶಾಲ್ ರಾಜ್ ಈ `ಸಿನಿಮಾ ಸ್ಕೂಲ್’ಗೆ ಪ್ರಾಂಶುಪಾಲರಾಗಿದ್ದಾರೆ. ಅನುಭವೀ ತಂತ್ರಜ್ಞರು, ನಿರ್ದೇಶಕರು ಸೇರಿದಂತೆ ಸಿನಿಮಾದಲ್ಲಿ ಹೆಸರು ಮಾಡಿದವರು, ರಂಗಕರ್ಮಿಗಳು `ಸಿನಿಮಾ ಸ್ಕೂಲ್’ ನಲ್ಲಿ ತರಬೇತಿ, ಉಪನ್ಯಾಸ ನೀಡಲಿದ್ದಾರೆ.

Tarun Shivappa

ನಾಗರಬಾವಿ ನಮ್ಮೂರ ತಿಂಡಿ ಹಿಂಭಾಗದಲ್ಲಿರುವ ಸೆವೆನ್ ವಂಡರ್ಸ್ ಕಟ್ಟಡದ ಎರಡನೇ ಮಹಡಿಯಲ್ಲಿ `ಸಿನಿಮಾ ಸ್ಕೂಲ್’ ಅಕ್ಟೋಬರ್ ತಿಂಗಳ ಕೊನೆಯ ವೇಳೆಗೆ ಕಾರ್ಯಾರಂಭ ಮಾಡಲಿದೆ. ಮೂರು ಮತ್ತು ಆರು ತಿಂಗಳ ಕೋರ್ಸ್ ಗಳು ಇಲ್ಲಿರುತ್ತವೆ. ಸಾಮಾನ್ಯವಾಗಿ ಸಿನಿಮಾ ಶಾಲೆಗಳು ನಿಗದಿತ ಅವಧಿಯಲ್ಲಿ ಕಲಿಸಿ ಸರ್ಟಿಫಿಕೇಟ್ ಕೊಟ್ಟು ಕಳಿಸಲಾಗುತ್ತದೆ. ಆದರೆ `ಸಿನಿಮಾ ಸ್ಕೂಲ್’ನ ಧ್ಯೇಯವೇ ಬೇರೆ ಇದೆ. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಕಳಿಸಿಕೊಟ್ಟುಬಿಟ್ಟರೆ ಮತ್ತೆ ಅವರು ಆಡಿಷನ್‍ಗಳಲ್ಲಿ ಭಾಗವಹಿಸುತ್ತಾ, ಅವಕಾಶಕ್ಕಾಗಿ ಅಲೆದಾಡುವಂತಾಗುತ್ತದೆ. ಹೊಸದಾಗಿ ಕಲಿತು ಹೋದವರಿಗೆ ಅಷ್ಟು ಸುಲಭಕ್ಕೆ ಅವಕಾಶಗಳು ದೊರೆಯುವುದೂ ಇಲ್ಲ. ಸಿನಿಮಾ ಸ್ಕೂಲ್‍ನಲ್ಲಿ ಕೋರ್ಸು ಮುಗಿಸಿದ ಎರಡು ಮೂರು ಬ್ಯಾಚ್‍ಗಳ ಅಭ್ಯರ್ಥಿಗಳಲ್ಲಿ ಯಾರು ಉತ್ತಮವಾಗಿ ಕಲಿತಿರುತ್ತಾರೋ ಅವರಿಗಾಗಿಯೇ ತರುಣ್ ಟಾಕೀಸ್ ಅಡಿಯಲ್ಲಿ ಹೊಸ ಚಿತ್ರಗಳನ್ನು ಆರಂಭಿಸಿ, ಆದ್ಯತೆ ಮೇರೆಗೆ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ನೀಡಲಾಗುತ್ತದೆ. ಕಮರ್ಷಿಯಲ್, ಕಲಾತ್ಮಕ ಮತ್ತು ಬ್ರಿಡ್ಜ್ ಚಿತ್ರಗಳನ್ನು ರೂಪಿಸಿ ಆ ಮೂಲಕ ಹೊಸ ಪ್ರತಿಭೆಗಳನ್ನು ಪರಿಚಯಿಸಲಾಗುತ್ತದೆ.

 ಕಲಾದೇವಿಯನ್ನು ಆರಾಧಿಸುವ, ಚಿತ್ರರಂಗದಲ್ಲಿ ಕೆಲಸ ಮಾಡಲು ಬಯಕೆ ಇರುವವರು `ಸಿನಿಮಾ ಸ್ಕೂಲ್’ ಸೇರಿ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು.

ಸಂಪರ್ಕ: #40, 2ನೇ ಮಹಡಿ, ನಮ್ಮೂರ ತಿಂಡಿ ಬಳಿ, ಎನ್.ಜಿ.ಇ.ಎಫ್ ಲೇಔಟ್ ಪಾರ್ಕ್ ಎದುರು, ನಾಗರಬಾವಿ, ಬೆಂಗಳೂರು-560072, ಮೊಬೈಲ್ 92069 20689

Share This Article
Facebook Whatsapp Whatsapp Telegram
Previous Article preity zinta ಹಸು ಟ್ರಾಫಿಕ್ ರೂಲ್ಸ್ ಪಾಲಿಸುತ್ತಿರುವ ವಿಡಿಯೋ ಹಂಚಿಕೊಂಡ ನಟಿ ಪ್ರೀತಿ
Next Article redmi note 7 ಶಾಪಿಂಗ್ ಹಬ್ಬದಲ್ಲಿ 38 ಲಕ್ಷ ಕ್ಸಿಯೋಮಿ ಫೋನ್‌ಗಳ ಮಾರಾಟ

Latest Cinema News

Jana Nayagan Thalapathy Vijay
ಟ್ವಿಸ್ಟ್ ಕೊಟ್ಟ ದಳಪತಿ ವಿಜಯ್ – ಅಭಿಮಾನಿಗಳಿಗೆ ದೀಪಾವಳಿ ಗಿಫ್ಟ್ ?
Cinema Latest Sandalwood
Rani Mukerji
ಪ್ರಶಸ್ತಿ ಸ್ವೀಕರಿಸಲು ಬಂದಿದ್ದ ರಾಣಿ ಮುಖರ್ಜಿ ಕತ್ತಲ್ಲಿ ಮಗಳ ಹೆಸರಿನ ಚೈನ್‌
Cinema Latest National Top Stories
Biggboss
ಬಿಗ್ ಬಾಸ್ ಸೀಸನ್ 12 ಭಾರೀ ಸ್ಪೆಷಲ್: ಬಿಗ್ ಅಪ್ ಡೇಟ್
Cinema Latest Top Stories TV Shows
S.L.Bhyrappa cinema
ಎಸ್.ಎಲ್.ಭೈರಪ್ಪಗೆ ಸಿನಿಮಾ ನಂಟು – ಕಾದಂಬರಿ ಆಧರಿತ ಸಿನಿಮಾಗಳಲ್ಲಿ ವಿಷ್ಣು ಸೇರಿ ಖ್ಯಾತ ನಟರ ಅಭಿನಯ
Cinema Latest Sandalwood Top Stories
SL Bhyrappa And Anant Nag
ಭೈರಪ್ಪನವರ ಬದುಕು ಕೊನೆಯಿಲ್ಲದ ʻಯಾನʼ – ನಟ ಅನಂತನಾಗ್‌ ಭಾವುಕ
Bengaluru City Cinema Districts Karnataka Latest Sandalwood Top Stories

You Might Also Like

yadgir
Crime

ಯಾದಗಿರಿ | ಪತ್ನಿ ಶೀಲ ಶಂಕಿಸಿ ಜನ್ಮ ಕೊಟ್ಟ ತಂದೆಯಿಂದಲೇ ಮಕ್ಕಳ ಬರ್ಬರ ಹತ್ಯೆ!

36 minutes ago
Kolar Suicide
Crime

ಪ್ರೀತಿಗೆ ಮನೆಯವರ ವಿರೋಧ – ರೈಲಿಗೆ ತಲೆಕೊಟ್ಟ ಪ್ರೇಮಿಗಳು

38 minutes ago
Darshan Pavithra
Bengaluru City

ನಟ ದರ್ಶನ್ & ಗ್ಯಾಂಗ್‌ ಇಂದು ಕೋರ್ಟ್‌ಗೆ – ದೋಷಾರೋಪ ಹೊರಿಸಲಿರುವ ಕೋರ್ಟ್‌

1 hour ago
Delhi Bangladeshi nationals
Crime

ದೆಹಲಿಯಲ್ಲಿ ಅಕ್ರಮ ವಾಸ – 25 ಬಾಂಗ್ಲಾ ಪ್ರಜೆಗಳು ಅರೆಸ್ಟ್‌

1 hour ago
Pahalgam
Latest

ಪಹಲ್ಗಾಮ್‌ ಉಗ್ರರಿಗೆ ಸಹಾಯ ಮಾಡಿದ್ದ ವ್ಯಕ್ತಿ ಅರೆಸ್ಟ್‌ – ಶಿಕ್ಷಕನಾಗಿ ಕೆಲಸ, ಲಷ್ಕರ್‌ ಗುಂಪಿನೊಂದಿಗೆ ಸಂಪರ್ಕ

2 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?