Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಫೇಸ್‍ಬುಕ್ ಗೆಳೆಯನನ್ನು ನೋಡಲು ಭೋಪಾಲ್‍ಗೆ ತೆರಳಿದ ಬೆಂಗ್ಳೂರಿನ ಅಪ್ರಾಪ್ತೆ

Public TV
Last updated: August 28, 2019 10:49 am
Public TV
Share
3 Min Read
facebook
SHARE

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ 10 ನೇ ತರಗತಿಯ ಹುಡುಗಿಯೊಬ್ಬಳು ತನ್ನ ಫೇಸ್‍ಬುಕ್ ಗೆಳೆಯನಿಗೆ ಸರ್ಪ್ರೈಸ್ ನೀಡಲು ವಿಮಾನದ ಮೂಲಕ ಭೋಪಾಲ್‍ಗೆ ತೆರಳಿರುವ ಪ್ರಸಂಗವೊಂದು ನಡೆದಿದೆ.

ಫೇಸ್‍ಬುಕ್ ಗೆಳೆಯನು ಕೂಡ ಅಪ್ರಾಪ್ತ. ಮನೆಯಲ್ಲಿ ತಂದೆಯ ಜೊತೆ ಹುಡುಗಿ ಜಗಳ ಮಾಡಿಕೊಂಡು ತನ್ನ ಫೇಸ್‍ಬುಕ್ ಗೆಳೆಯನ ನೋಡಲು ವಿಮಾನದಲ್ಲಿ ಭೋಪಾಲ್‍ಗೆ ಹೋಗಿದ್ದು, ಅಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಸದ್ಯ ಬೆಂಗಳೂರಿಗೆ ವಾಪಸ್ಸಾಗಿದ್ದಾಳೆ.

love complaint 1

ಹುಡುಗಿಯು ಶನಿವಾರ ಹುಡುಗನಿಗೆ ಹೇಳದೆ ಅವನ ಮನೆಯ ಹತ್ತಿರ ಹೋಗಿದ್ದಾಳೆ. ಹುಡುಗಿಯನ್ನು ಮನೆಯ ಹತ್ತಿರ ನೋಡಿದ ಹುಡುಗ, ಅಲ್ಲಿಂದ ಕರೆದುಕೊಂಡು ಹೋಗಿ ಹೋಟೆಲಿನಲ್ಲಿ ರೂಮ್ ಮಾಡಿದ್ದಾನೆ. ಆದರೆ ಅವಳ ಜೊತೆ ಇರುವ ಬದಲಾಗಿ ನೀನು ವಾಪಸ್ ಮನೆಗೆ ಹೋಗು ಎಂದು ಬುದ್ಧಿಮಾತು ಹೇಳಿದ್ದಾನೆ. ಇದರಿಂದ ಕೋಪಗೊಂಡ ಆಕೆ ಹೋಟೆಲಿನಲ್ಲಿ ಗಲಾಟೆ ಮಾಡಿದ್ದಾಳೆ.

ಹೀಗೆ ಹಬೀಬ್‍ಗಂಜ್‍ನ ಹೋಟೆಲಿನಲ್ಲಿ ಗಲಾಟೆ ಮಾಡುತ್ತಿದ್ದ ಹುಡುಗಿ ಸೋಮವಾರ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಹುಡುಗಿಯನ್ನು ವಿಚಾರಿಸಿ ಆಕೆ ಇನ್ನೂ ಅಪ್ರಾಪ್ತೆ ಎಂದು ತಿಳಿದ ಪೊಲೀಸರು, ಅವಳನ್ನು ಠಾಣೆಗೆ ಕರೆದುಕೊಂಡು ಹೋಗದೆ ಮಕ್ಕಳ ಕಲ್ಯಾಣ ಸಮಿತಿಗೆ ಕರೆದುಕೊಂಡು ಹೋಗಿದ್ದಾರೆ.

police 1 1

ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಆಕೆಯನ್ನು ಕೌನ್ಸ್ ಲಿಂಗ್ ಮಾಡಿದ ಅಧಿಕಾರಿಗಳಿಗೆ ಹುಡುಗಿ, ತನ್ನ ಫೇಸ್‍ಬುಕ್ ಗೆಳೆಯನ ನಡತೆಯನ್ನು ಪರೀಕ್ಷೆ ಮಾಡಲು ನಾನು ಇಲ್ಲಿಗೆ ಬಂದಿದ್ದು ಎಂದು ಹೇಳಿದ್ದಾಳೆ. ಶನಿವಾರ ಹುಡುಗಿ ತನ್ನ ಗೆಳೆಯನ ಮನೆ ಹತ್ತಿರ ಹೋಗಿದ್ದಾಳೆ. ನಂತರ ಅವನು ತನ್ನ ಮನೆಯಲ್ಲಿ ನೀನು ಉಳಿದುಕೊಳ್ಳಲು ಆಗುವುದಿಲ್ಲ ಎಂದು ಹೇಳಿ ಹೋಟೆಲ್ ಬುಕ್ ಮಾಡಿದ್ದಾನೆ. ಆದರೆ ಅವಳ ಜೊತೆ ಉಳಿದುಕೊಳ್ಳದೆ ಸೋಮವಾರ ನೀನು ಮನಗೆ ವಾಪಸ್ ಹೋಗು ಎಂದು ಮನವೊಲಿಸಲು ಪ್ರಯತ್ನ ಮಾಡಿದ್ದಾನೆ. ಇದರಿಂದ ಬೇಸರಗೊಂಡ ಆಕೆ ಹುಡುಗನ ಜೊತೆ ಜಗಳವಾಡಿ ಹೋಟೆಲ್ ಬಿಟ್ಟು ಹೊರಗೆ ಬಂದು ಪೊಲೀಸರ ಕೈಗೆ ಸಿಕ್ಕಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ರಾಜೀವ್ ಜೈನ್, ಹುಡುಗಿ ಫೇಸ್‍ಬುಕ್‍ನಲ್ಲಿ ತುಂಬಾ ಸ್ನೇಹಿತರನ್ನು ಹೊಂದಿದ್ದಾಳೆ. ಮನೆಯಲ್ಲಿ ತಂದೆಯ ಜೊತೆ ಜಗಳವಾಡಿಕೊಂಡು, ಕಾಲ್ ಸೆಂಟರ್‍ ನಲ್ಲಿ ಕೆಲಸ ಮಾಡಿ ಹಣ ಹೊಂದಿಸಿಕೊಂಡು ಅವಳ ಫೇಸ್‍ಬುಕ್ ಗೆಳೆಯನನ್ನು ಭೇಟಿಯಾಗಲು ಭೋಪಾಲ್‍ಗೆ ಬಂದಿದ್ದಾಳೆ. ಆದರೆ ತನ್ನ ಮಗಳು ಅವಳ ಚಿಕ್ಕಮ್ಮನ ಮನೆಗೆ ಹೋಗಿರಬಹುದು ಎಂದು ಆಕೆಯ ಪೋಷಕರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ನಾವು ಆಕೆಗೆ ಮನೆಬಿಟ್ಟು ಬರುವುದು ತಪ್ಪು ಎಂದು ಮನವರಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

facebook logo

ಆಕೆಯ ತಂದೆ ಬೆಂಗಳೂರಿನಲ್ಲಿ ದೊಡ್ಡ ಉದ್ಯಮಿಯಾಗಿದ್ದು, ಮಗಳು ಪಬ್‍ಗೆ ಹೋಗುವುದನ್ನು ನಿರಾಕರಿಸಿದ್ದಾರೆ. ಈ ಕಾರಣದಿಂದ ಮನೆಯಲ್ಲಿ ಜಗಳವಾಡಿಕೊಂಡು ಶುಕ್ರವಾರ ಭೋಪಾಲ್‍ಗೆ ವಿಮಾನ ಹತ್ತಿದ್ದಾಳೆ. ನಂತರ ಅಲ್ಲಿ ತನ್ನ ಇಬ್ಬರು ಫೇಸ್‍ಬುಕ್ ಗೆಳೆಯರ ಸಹಾಯ ಪಡೆದು ಶನಿವಾರ ಆಕೆಯ ಗೆಳೆಯನ ಮನೆ ಹತ್ತಿರ ಹೋಗಿದ್ದಾಳೆ. ನಾವು ಆಕೆಯ ತಂದೆಗೆ ಕರೆ ಮಾಡಿ, ಬಂದು ಮಗಳನ್ನು ಕರೆದುಕೊಂಡು ಹೋಗುವಂತೆ ಹೇಳಿದೆವು. ಅದರಂತೆ ಬಂದ ಅವರ ತಂದೆ, ಮಂಗಳವಾರ ರಾತ್ರಿ ಆಕೆಯನ್ನು ಕರೆದುಕೊಂಡು ಮನೆಗೆ ಹೋದರು ಎಂದು ಜೈನ್ ಹೇಳಿದ್ದಾರೆ.

ನಾನು ಆಕೆಯ ತಂದೆಗೆ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಬೇಕು ಎಂದು ಹೇಳಿದ್ದೇವೆ. ಮಕ್ಕಳ ಈ ಹಂತದಲ್ಲಿ ಪೋಷಕರು ಅವರ ಬಗ್ಗೆ ಹೆಚ್ಚು ಗಮನಹರಿಸಬೇಕು. ಮಕ್ಕಳು ಪೋಷಕರಿಗೆ ಹೇಳದೆ ಈ ರೀತಿ ಹೊರಗೆ ಬರುವುದು ಅವರ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ನಾವು ಹುಡುಗಿಗೆ ಹೇಳಿದ್ದೇವೆ. ಆಕೆ ನೋಡಲು ಬಂದ ಹುಡುಗ ಒಳ್ಳೆಯವನು. ಇಲ್ಲದಿದ್ದರೆ ಈ ವಿಚಾರ ತುಂಬಾ ಗಂಭೀರವಾಗರುತ್ತಿತ್ತು ಎಂದು ಜೈನ್ ತಿಳಿಸಿದ್ದಾರೆ.

TAGGED:AirplaneBangalorebhopalboyfriendfacebookgirlparentsPublic TVಗೆಳಯಪಬ್ಲಿಕ್ ಟಿವಿಪೋಷಕರುಫೇಸ್‍ಬುಕ್ಬೆಂಗಳೂರುಭೋಪಾಲ್ವಿಮಾನಹುಡುಗಿ
Share This Article
Facebook Whatsapp Whatsapp Telegram

Cinema Updates

Benglauru Stampede Ramya Tweet
ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ – ಇದು ಹೃದಯ ವಿದ್ರಾವಕ ಘಟನೆ; ರಮ್ಯಾ ಬೇಸರ
3 hours ago
Kamal Haasan
ಅಹಂಕಾರಿ ಕಮಲ್‌ಗೆ ಬಿಗ್‌ ಶಾಕ್‌ – ಕರ್ನಾಟಕದಲ್ಲಿ ಚಿತ್ರ ಬಿಡುಗಡೆ 1 ವಾರ ಮುಂದೂಡಿಕೆ
1 day ago
Kamal Haasan
ಮೊದಲು ಕ್ಷಮೆ ಕೇಳಿ, ಜನರ ಭಾವನೆಗೆ ಧಕ್ಕೆ ತರಬೇಡಿ: ಕಮಲ್‌ಗೆ ಹೈಕೋರ್ಟ್‌ ಚಾಟಿ
1 day ago
Thug Life 2
ಕಮಲ್ ಹಾಸನ್‌ಗೆ ಇಂದು ನಿರ್ಣಾಯಕ ದಿನ – ಹೈಕೋರ್ಟ್‌ನಲ್ಲಿ ‘ಥಗ್‌ಲೈಫ್’ ಬಿಡುಗಡೆ ನಿರ್ಧಾರ
2 days ago

You Might Also Like

bengaluru stambede rcb
Bengaluru City

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ, 11 ಮಂದಿ ಸಾವು – ಮೃತರು ಯಾರು? ಇಲ್ಲಿದೆ ವಿವರ

Public TV
By Public TV
28 minutes ago
01 2
Big Bulletin

ಬಿಗ್‌ ಬುಲೆಟಿನ್‌ 04 June 2025 ಭಾಗ- 1

Public TV
By Public TV
8 minutes ago
02 3
Big Bulletin

ಬಿಗ್‌ ಬುಲೆಟಿನ್‌ 04 June 2025 ಭಾಗ- 2

Public TV
By Public TV
12 minutes ago
03 3
Big Bulletin

ಬಿಗ್‌ ಬುಲೆಟಿನ್‌ 04 June 2025 ಭಾಗ- 3

Public TV
By Public TV
17 minutes ago
droupadi murmu rahul gandhi
Latest

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭೀಕರ ಕಾಲ್ತುಳಿತ – ರಾಷ್ಟ್ರಪತಿ, ರಾಹುಲ್‌ ಗಾಂಧಿ ಸೇರಿ ಗಣ್ಯರ ಸಂತಾಪ

Public TV
By Public TV
1 hour ago
Vijaya Mallya 1
Bengaluru City

ಆರ್‌ಸಿಬಿ ಅಭಿಮಾನಿಗಳ ಸಾವಿಗೆ ಸಂತಾಪ ಸೂಚಿಸಿದ ವಿಜಯ್‌ ಮಲ್ಯ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?