Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸೈಬರ್‌ ಕ್ರೈಮ್‌ ಹಬ್‌ ಆಗ್ತಿದ್ಯಾ ಬೆಂಗಳೂರು? – ಮೆಟ್ರೋ ನಗರಗಳ ಪೈಕಿ 50% ಕೇಸ್‌ ಸಿಲಿಕಾನ್‌ ಸಿಟಿಯದ್ದೇ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸೈಬರ್‌ ಕ್ರೈಮ್‌ ಹಬ್‌ ಆಗ್ತಿದ್ಯಾ ಬೆಂಗಳೂರು? – ಮೆಟ್ರೋ ನಗರಗಳ ಪೈಕಿ 50% ಕೇಸ್‌ ಸಿಲಿಕಾನ್‌ ಸಿಟಿಯದ್ದೇ!

Bengaluru City

ಸೈಬರ್‌ ಕ್ರೈಮ್‌ ಹಬ್‌ ಆಗ್ತಿದ್ಯಾ ಬೆಂಗಳೂರು? – ಮೆಟ್ರೋ ನಗರಗಳ ಪೈಕಿ 50% ಕೇಸ್‌ ಸಿಲಿಕಾನ್‌ ಸಿಟಿಯದ್ದೇ!

Public TV
Last updated: October 12, 2025 11:57 am
Public TV
Share
6 Min Read
cyber crime bengaluru
SHARE

ಹಿಂದೆಯೆಲ್ಲ ಹಣಕಾಸಿನ ವ್ಯವಹಾರ ಹೆಚ್ಚಾಗಿ ನಗದು ರೂಪದಲ್ಲೇ ನಡೆಯುತ್ತಿತ್ತು. ಆಗ ಕಳ್ಳರು ಮನೆಗಳಿಗೆ ನುಗ್ಗಿ ಅಥವಾ ದಾರಿಯಲ್ಲಿ ಹೋಗುವವರನ್ನು ಅಡ್ಡಗಟ್ಟಿ ಸುಲಿಗೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿತ್ತು (ಈಗಲೂ ಇದೆ. ಪ್ರಮಾಣ ಕಡಿಮೆ). ಆದರೆ ಈಗ ನಗದು ವಹಿವಾಟು ಕಡಿಮೆಯಾಗಿದೆ. ಡಿಜಿಟಲ್ ವ್ಯವಹಾರ ಹೆಚ್ಚಾಗಿದೆ. ಕಳ್ಳರು ಸಹ ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ತಮ್ಮ ಕುಕೃತ್ಯದ ಪರಿಯನ್ನು ಬದಲಾಯಿಸಿಕೊಂಡಿದ್ದಾರೆ. ಎಲ್ಲೆಡೆ ಸೈಬರ್ ವಂಚಕರ ಜಾಲ ಆವರಿಸಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಕಳ್ಳತನಕ್ಕೆ ಇಳಿದಿದ್ದಾರೆ. ಜನರ ‘ಡಿಜಿಟಲ್ ಪರ್ಸ್’ಗೆ ಕೈ ಹಾಕಿ ಹಣ ದೋಚುತ್ತಿದ್ದಾರೆ. ಸೈಬರ್ ವಂಚನೆ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಭಾರತದಲ್ಲಿ ಸೈಬರ್ ವಂಚಕರ ಜಾಲಕ್ಕೆ ಬಿದ್ದು ಹಣ ಕಳೆದುಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ ಕಂಡಿದೆ. ದೇಶದ ಪ್ರಮುಖ ನಗರಗಳಲ್ಲಿ ಕರ್ನಾಟಕದ ಬೆಂಗಳೂರು ಸೈಬರ್ ಕ್ರೈಮ್ ಹಬ್ ಆಗಿದೆ. ದೇಶದ ಇತರೆ ನಗರಗಳಿಗೆ ಹೋಲಿಸಿದರೆ, ಬೆಂಗಳೂರು (Bengaluru) ನಂ.1 ಸ್ಥಾನದಲ್ಲಿರುವುದು ಆತಂಕಕಾರಿ ಸುದ್ದಿ.

ಭಾರತದಲ್ಲಿ ಪ್ರತಿ ದಿನ 7,000 ಸೈಬರ್ ಕೇಸ್
ಭಾರತದಲ್ಲಿ ದಿನಕ್ಕೆ ಸರಾಸರಿ 7,000 ಸೈಬರ್ ಅಪರಾಧ (Cyber Crime) ದೂರುಗಳು ದಾಖಲಾಗುತ್ತಿವೆ. ಈ ಸಂಖ್ಯೆ 2021 ರಿಂದ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಪ್ರಕರಣಗಳಲ್ಲಿ ಸುಮಾರು 85% ಕೇಸ್‌ಗಳು ಆನ್‌ಲೈನ್ ಹಣಕಾಸು ವಂಚನೆಗೆ ಸಂಬಂಧಿಸಿವೆ. ಈ ದೂರುಗಳಲ್ಲಿ ಸರಿಸುಮಾರು 85% ಆನ್‌ಲೈನ್ ಹಣಕಾಸು ವಂಚನೆಗೆ ಸಂಬಂಧಿಸಿದೆ. ಹೂಡಿಕೆ ವಂಚನೆಗಳು, ಗೇಮಿಂಗ್ ಅಪ್ಲಿಕೇಶನ್‌ಗಳು, ಅಕ್ರಮ ಸಾಲ ನೀಡುವ ಅಪ್ಲಿಕೇಶನ್‌ಗಳು ಮತ್ತು OTP ವಂಚನೆಗಳು ಕೂಡ ಕೇಸ್‌ಗಳಲ್ಲಿ ಸೇರಿವೆ. 2024ರ ಮೊದಲ ನಾಲ್ಕು ತಿಂಗಳಲ್ಲಿ ಜನರಿಂದ ಸೈಬರ್ ವಂಚಕರು 1,750 ಕೋಟಿಗೂ ಹೆಚ್ಚು ಹಣವನ್ನು ಲಪಟಾಯಿಸಿದ್ದಾರೆ. ಇದನ್ನೂ ಓದಿ: ಪ್ರತಿದಿನ ಅಕೌಂಟ್‌ಗೆ 200 ರೂ. ಹಾಕಿ ಗಾಳ – ಉದ್ಯಮಿಗೆ 7.84 ಲಕ್ಷ ವಂಚನೆ!

cybercrime

23,000 ಕೋಟಿ ಕಳೆದುಕೊಂಡ ಭಾರತೀಯರು
2024 ರಲ್ಲಿ ಭಾರತವು ಸೈಬರ್ ಅಪರಾಧಿಗಳು ಮತ್ತು ವಂಚಕರಿಂದ 22,842 ಕೋಟಿ ರೂ.ಗಳನ್ನು ಕಳೆದುಕೊಂಡಿದೆ ಎಂದು ದೆಹಲಿ ಮೂಲದ ಮಾಧ್ಯಮ ಮತ್ತು ತಂತ್ರಜ್ಞಾನ ಕಂಪನಿಯಾದ ಡೇಟಾಲೀಡ್ಸ್ ತಿಳಿಸಿದೆ. ದೇಶದಲ್ಲಿ ವ್ಯಾಪಕವಾದ ಡಿಜಿಟಲ್ ವಂಚನೆಗಳ ಕುರಿತು ತನ್ನ ವರದಿಯಲ್ಲಿ ತಿಳಿಸಿದೆ. ಈ ವರ್ಷ ಭಾರತೀಯರು 1.2 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಅನುಭವಿಸಬಹುದು ಎಂದು ರಾಜ್ಯ ಮತ್ತು ಕೇಂದ್ರ ಕಾನೂನು ಜಾರಿ ಸಂಸ್ಥೆಗಳ ನಡುವೆ ಸಂಪರ್ಕ ಸಾಧಿಸುವ ಫೆಡರಲ್ ಸಂಸ್ಥೆಯಾದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಮುನ್ಸೂಚನೆ ನೀಡಿದೆ.

10 ಪಟ್ಟು ಹಣ ನಷ್ಟ
2022 ರಲ್ಲಿ ಸೈಬರ್ ವಂಚಕರು 2,306 ಕೋಟಿ ರೂ. ಕೊಳ್ಳೆ ಹೊಡೆದಿದ್ದರು. 2023 ರಲ್ಲಿ ಇದು 7,465 ಕೋಟಿ ರೂ.ಗೆ ಏರಿಕೆ ಕಂಡಿತು. ಅಂದರೆ ಸುಮಾರು 3 ಪಟ್ಟು ಹೆಚ್ಚಳ. ಅದು 2024ಕ್ಕೆ 10 ಪಟ್ಟು ಹೆಚ್ಚಳ ಕಂಡಿದೆ. ಅಂದರೆ, ವರ್ಷದಿಂದ ವರ್ಷಕ್ಕೆ ಸೈಬರ್ ವಂಚನೆಯಲ್ಲಿ ಜನರು ಏರುಗತಿಯಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧ ದೂರುಗಳ ಸಂಖ್ಯೆಯೂ ಇದೇ ರೀತಿ ಹೆಚ್ಚಾಗಿದೆ. 2024 ರಲ್ಲಿ ಸುಮಾರು 20 ಲಕ್ಷ ಕೇಸ್‌ಗಳು ವರದಿಯಾಗಿವೆ. ಇದು ಹಿಂದಿನ ವರ್ಷ ಸುಮಾರು 15.6 ಲಕ್ಷ ಮತ್ತು 2019 ರಲ್ಲಿ ದಾಖಲಾಗಿದ್ದ ಕೇಸ್‌ಗಳಿಗಿಂತ ಹತ್ತು ಪಟ್ಟು ಹೆಚ್ಚಾಗಿವೆ. ಭಾರತದ ಡಿಜಿಟಲ್ ವಂಚಕರು ಬುದ್ಧಿವಂತರು ಮತ್ತು ಹೆಚ್ಚು ಪರಿಣಾಮಕಾರಿಯಾಗುತ್ತಿದ್ದಾರೆ. ಸುಮಾರು 290 ಲಕ್ಷ ನಿರುದ್ಯೋಗಿಗಳನ್ನು ಹೊಂದಿರುವ ದೇಶದಲ್ಲಿ, ಅವರ ಶ್ರೇಣಿ ಹೆಚ್ಚುತ್ತಿದೆ. ಇದನ್ನೂ ಓದಿ: ಸುಧಾಮೂರ್ತಿಗೆ ಕರೆ ಮಾಡಿ ವಂಚನೆಗೆ ಯತ್ನಿಸಿದ್ದ ಸೈಬರ್‌ ಕಳ್ಳರು!

ಭಾರತದಲ್ಲೇ ಅತಿ ಹೆಚ್ಚು ಡಿಜಿಟಲ್ ವಹಿವಾಟು
ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಸೈಬರ್ ವಂಚನೆ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಜಿಗಿತ ಕಂಡಿವೆ. ಡಿಜಿಟಲ್ ಪಾವತಿ ವಿಧಾನಗಳೇ ಇದಕ್ಕೆ ಪ್ರಮುಖ ಕಾರಣವಾಗಿವೆ. ಪೇಟಿಎಂ ಮತ್ತು ಫೋನ್‌ಪೇಯಂತಹ ಪಾವತಿ ಸೇವೆಗಳು, ವಾಟ್ಸಾಪ್ ಮತ್ತು ಟೆಲಿಗ್ರಾಮ್‌ನಂತಹ ಮೆಸೇಜ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಹಣಕಾಸಿನ ವಿವರಗಳನ್ನು ಹಂಚಿಕೊಳ್ಳುವುದು ಸೈಬರ್ ವಂಚಕರಿಗೆ ಅಪರಾಧಕ್ಕೆ ಸುಲಭ ದಾರಿ ಮಾಡಿಕೊಟ್ಟಿದೆ. ಫೆಡರಲ್ ಡೇಟಾ ಪ್ರಕಾರ 2025 ರ ಜೂನ್‌ನಲ್ಲಿ ಮಾತ್ರ 190 ಲಕ್ಷಕ್ಕೂ ಹೆಚ್ಚು ಯುಪಿಐ ಅಥವಾ ಏಕೀಕೃತ ಪಾವತಿ ಇಂಟರ್‌ಫೇಸ್ ವಹಿವಾಟುಗಳು ನಡೆದಿವೆ. ಇವುಗಳ ಒಟ್ಟು ಮೌಲ್ಯ 24.03 ಲಕ್ಷ ಕೋಟಿ ರೂ. ಆಗಿದೆ. ಡಿಜಿಟಲ್ ಪಾವತಿಗಳ ಮೌಲ್ಯವು 2013 ರಲ್ಲಿ ಸರಿಸುಮಾರು 162 ಕೋಟಿ ರೂ.ಗಳಿಂದ 2025 ರ ಜನವರಿಯಲ್ಲಿ 18,120.82 ಕೋಟಿ ರೂ.ಗೆ ಹೆಚ್ಚಳ ಕಂಡಿದೆ. ವಿಶ್ವಾದ್ಯಂತ ಅಂತಹ ಎಲ್ಲಾ ಪಾವತಿಗಳಲ್ಲಿ ಭಾರತವು ಸುಮಾರು ಅರ್ಧದಷ್ಟು ಪಾಲನ್ನು ಹೊಂದಿದೆ ಎಂಬುದು ಗಮನಾರ್ಹ.

Bengaluru 1

ಕೋವಿಡ್‌ನಿಂದ ಹೆಚ್ಚಾಯ್ತ ಸೈಬರ್ ವಂಚನೆ?
ಸೈಬರ್ ವಂಚನೆಗಳ ಹೆಚ್ಚಳಕ್ಕೆ ಪ್ರಮುಖ ಕಾರಣ ಕೋವಿಡ್ ಸಾಂಕ್ರಾಮಿಕ ಮತ್ತು ಅದನ್ನು ನಿಯಂತ್ರಿಸಲು ಜಾರಿಗೊಳಿಸಿದ ಲಾಕ್‌ಡೌನ್ ಕ್ರಮ ಎಂದು ಹೇಳಬಹುದು. ಕೋವಿಡ್ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕರೆನ್ಸಿ ನೋಟುಗಳ ಬಳಕೆ ಕಡಿಮೆ ಮಾಡುವಂತೆ ಜನತೆಗೆ ಸರ್ಕಾರ ತಾಕೀತು ಮಾಡಿತು. ಡಿಜಿಟಲ್ ಪಾವತಿಗೆ ತೆರೆದುಕೊಳ್ಳಿ, ಪೇಟಿಎಂನಂತಹ ಯುಪಿಐ ಅಪ್ಲಿಕೇಶನ್‌ಗಳಿಗೆ ಬದಲಾಗಿ ಎಂದು ಒತ್ತಾಯಿಸಿತು. 2019 ರ ಹೊತ್ತಿಗೆ ಭಾರತದಲ್ಲಿ ಅದಾಗಲೇ 44 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರಿದ್ದರು. ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿರುವ ಜನರು ಸಹ ತಮ್ಮ ಫೋನ್‌ಗಳಲ್ಲಿ ಹೆಚ್ಚಿನ ಹಣಕಾಸು ವಹಿವಾಟು ನಡೆಸಲು ಕಾರಣವಾಗಿತು. ಡಿಜಿಟಲ್ ಪಾವತಿ ವ್ಯವಸ್ಥೆಯು ಬೆಳೆದಂತೆ, ಸೈಬರ್ ಅಪರಾಧಿಗಳು ಮತ್ತು ವಂಚಕರ ವಿಸ್ತಾರವಾದ ಜಾಲವೂ ಸಹ ಅಭಿವೃದ್ಧಿ ಹೊಂದಿತು. ಇಂದು ಡಿಜಿಟಲ್ ವಂಚಕರು ಕೃತಕ ಬುದ್ಧಿಮತ್ತೆ ಅಥವಾ AI ನಂತಹ ತಾಂತ್ರಿಕ ಸಾಧನಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ.

ಬ್ಯಾಂಕ್ ಸಂಬಂಧಿತ ವಂಚನೆಗಳೇ ಹೆಚ್ಚಾಗಿ ನಡೆಯುತ್ತಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, 2025/26 ಹಣಕಾಸು ವರ್ಷದ ಮೊದಲಾರ್ಧದಲ್ಲಿ ವಂಚನೆ ಕೇಸ್‌ಗಳು ಸುಮಾರು ಎಂಟು ಪಟ್ಟು ಹೆಚ್ಚಳ ಕಂಡಿವೆ. ಖಾಸಗಿ ವಲಯದ ಬ್ಯಾಂಕುಗಳು ಇಂತಹ ಎಲ್ಲಾ ಘಟನೆಗಳಲ್ಲಿ ಸುಮಾರು ಶೇ. 60 ರಷ್ಟು ಪಾಲನ್ನು ಹೊಂದಿವೆ. ಆದರೆ, ಸಾರ್ವಜನಿಕ ವಲಯದ ಬ್ಯಾಂಕುಗಳ ಗ್ರಾಹಕರು ಹೆಚ್ಚು ವಂಚನೆಗಳಿಗೆ ತುತ್ತಾಗಿದ್ದಾರೆ. ಅವರು ಒಟ್ಟಾರೆಯಾಗಿ 25,667 ಕೋಟಿ ರೂ. ಕಳೆದುಕೊಂಡಿದ್ದಾರೆ. ಜೀವ ವಿಮೆ, ಆರೋಗ್ಯ ವಿಮೆ, ವಾಹನ ಮತ್ತು ಸಾಮಾನ್ಯ ವಂಚನೆಗಳು ಸೈಬರ್ ಅಪರಾಧಿಗಳಿಗೆ ಹೆಚ್ಚು ಲಾಭದಾಯಕ ಆಯ್ಕೆಯಾಗುತ್ತಿವೆ. ಅಪ್ಲಿಕೇಶನ್ ಆಧಾರಿತ ಸೇವೆಗಳನ್ನೇ ಆಯ್ಕೆ ಮಾಡುವಂತೆ ಗ್ರಾಹಕರಿಗೆ ವಿಮಾ ಕಂಪನಿಗಳು ಒತ್ತಾಯಿಸುತ್ತಿರುವುದೇ ಇಂತಹ ವಂಚನೆಗಳಿಗೆ ಸುಲಭ ದಾರಿ ಮಾಡಿಕೊಟ್ಟಿದೆ.

Cyber Crime

ಸೈಬರ್ ವಂಚನೆ ಹೇಗಾಗುತ್ತೆ?
ಆಮಿಷದ ಮೆಸೇಜ್‌ಗಳು: SMS ಅಥವಾ WhatsApp ನಂತಹ ಪ್ಲಾಟ್‌ಫಾರ್ಮ್‌ಗಳ ಮೂಲಕ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಪ್ರಸಿದ್ಧ ಇ-ಕಾಮರ್ಸ್ ಸೈಟ್‌ಗಳಿಂದ ಬಹುಮಾನ ಅಥವಾ ಮರುಪಾವತಿಯ ಆಮಿಷವೊಡ್ಡುತ್ತವೆ. ಇವು ಜನರನ್ನು UPI ಐಡಿಗಳು ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆಗಳಂತಹ ಸೂಕ್ಷ್ಮ ಮಾಹಿತಿಯನ್ನು ಪಡೆಯುವ ವಂಚಕರ ಜಾಲಕ್ಕೆ ಸೆಳೆಯುತ್ತವೆ.
ನಕಲಿ ಉತ್ಪನ್ನದ ಮಾಹಿತಿ: ಬೇಡಿಕೆಯ ವಸ್ತುಗಳನ್ನು ಆನ್‌ಲೈನ್ ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಗೆ ಮಾರಾಟದ ಸುಳ್ಳು ಮಾಹಿತಿ ಬಿತ್ತರಿಸಲಾಗುತ್ತದೆ. ಖರೀದಿದಾರರು ವಸ್ತುವಿನ ಆಸೆಗಾಗಿ ಮುಂಚಿತವಾಗಿ ಹಣ ಪಾವತಿಸುತ್ತಾರೆ. ಮಾರಾಟಗಾರ ನಂತರ ಕಣ್ಮರೆಯಾಗುತ್ತಾನೆ.
ಪಾವತಿ ದೃಢೀಕರಣ: ವಂಚಕರು ಪಾವತಿ ಮತ್ತು ಪರಿಶೀಲನೆ ಹೆಸರಿನಲ್ಲಿ ನಕಲಿ ಸಂದೇಶಗಳು ಅಥವಾ ಇಮೇಲ್‌ಗಳನ್ನು ಕಳುಹಿಸುತ್ತಾರೆ. ಈ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರಿಂದ ಪಾವತಿಗೆ ಸಂಬಂಧಿಸಿದ ನಿಮ್ಮೆಲ್ಲ ಗೌಪ್ಯ ಮಾಹಿತಿಗಳು ವಂಚಕರಿಗೆ ಸಿಗುತ್ತವೆ. ಇದನ್ನೂ ಓದಿ: ನಾವು ಮಾಡುವ ಈ ಸಣ್ಣ ತಪ್ಪುಗಳೇ ಸೈಬರ್‌ ಅಪರಾಧಕ್ಕೆ ದಾರಿ – 7 ತಿಂಗಳಲ್ಲಿ ಬರೋಬ್ಬರಿ 861 ಕೋಟಿ ಲೂಟಿ

ಸೈಬರ್ ಕ್ರೈಮ್‌ ಹಬ್ ಆಗ್ತಿದ್ಯಾ ಬೆಂಗಳೂರು?
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿ ಪ್ರಕಾರ, ಭಾರತದ ಪ್ರಮುಖ 19 ನಗರಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆಯು ಶೇ.39 ರಷ್ಟು ಏರಿಕೆ ಕಂಡಿದೆ. ಈ 19 ನಗರಗಳ ಒಟ್ಟು ಪ್ರಕರಣಗಳಲ್ಲಿ ಅರ್ಧದಷ್ಟು ಸೈಬರ್ ಅಪರಾಧಗಳು ಬೆಂಗಳೂರಿನಲ್ಲೇ ಆಗುತ್ತಿರುವುದು ಕಳವಳಕಾರಿ ಅಂಶವಾಗಿದೆ. ಆ ಮೂಲಕ ದೇಶದ ಡಿಜಿಟಲ್ ಕ್ರೈಮ್ ರಾಜಧಾನಿ ಎಂಬ ಕುಖ್ಯಾತಿಯನ್ನು ಬೆಂಗಳೂರು ಹೊಂದಿದೆ. ಪ್ರಮುಖ ಮೆಟ್ರೋ ನಗರಗಳ 2021-23ರ ಅಂಕಿಅಂಶಗಳು ಈ ಕೆಳಕಂಡಂತಿವೆ.

ಬೆಂಗಳೂರು
2021: 6,423 ಕೇಸ್
2022: 9,940
2023: 17,631

ಹೈದರಾಬಾದ್
2021: 3,303
2022: 4,436
2023: 4,855

ಮುಂಬೈ
2021: 2,883
2022: 4,724
2023: 4,131

ಲಕ್ನೋ
2021: 1,067
2022: 1,134
2023: 1,453

ಚೆನ್ನೈ
2021: 76
2022: 271
2023: 1,352

ದೆಹಲಿ
2021: 345
2022: 685
2023: 407

TAGGED:bengalurucyber crimeCyber Crime Hubಬೆಂಗಳೂರುಸೈಬರ್ ಅಪರಾಧ
Share This Article
Facebook Whatsapp Whatsapp Telegram

Cinema news

Toxic Tara Sutaria as REBECCA
ಟಾಕ್ಸಿಕ್ ಚಿತ್ರದ ರೆಬೆಕಾ ಪಾತ್ರದಲ್ಲಿ ತಾರಾ ಸುತಾರಿಯಾ
Cinema Latest Sandalwood Top Stories
bigg boss season 12 kannada Dhanush becomes captain for the second time
ನಿಯಮ ಉಲ್ಲಂಘಿಸಿದ್ರೂ ಮನೆ ಮಂದಿಯ ಸಹಾಯದಿಂದ ಮತ್ತೆ ನಾಯಕನಾದ ಧನುಷ್‌
Cinema Latest Top Stories TV Shows
Akshay Kumar Rani Mukerji
ʻOh My God 3ʼ ಸಿನಿಮಾಗಾಗಿ ಒಂದಾದ ರಾಣಿ ಮುಖರ್ಜಿ – ಅಕ್ಷಯ್‌ ಕುಮಾರ್
Bollywood Cinema Latest
Ashwini Gowda and Gilli Nata Talk Fight
ಉಣ್ಕೊಂಡ್‌ ತಿನ್ಕೊಂಡ್ ಇರೋಕೆ ಬಿಗ್‌ಬಾಸ್ ಮನೆಗೆ ಬಂದಿದ್ಯಾ? – ಗಿಲ್ಲಿ ವಿರುದ್ಧ ಅಶ್ವಿನಿ ಕೆಂಡಾಮಂಡಲ
Cinema Latest Sandalwood

You Might Also Like

Doctor harassed Bengaluru
Bengaluru City

ಬೆಂಗಳೂರು: ಕೆಲಸ ಮುಗಿಸಿ ಪಿಜಿಗೆ ವಾಪಸ್‌ ಆಗ್ತಿದ್ದ ವೈದ್ಯೆಗೆ ಕಿರುಕುಳಕ್ಕೆ ಯತ್ನ – ಕಾಮುಕ ಅರೆಸ್ಟ್

Public TV
By Public TV
14 seconds ago
USA President Donald Trump ordered strikes on sites inside Venezuela including military facilities Caracas Air Strike
Latest

ವೆನೆಜುವೆಲಾದ ಮೇಲೆ ಅಮೆರಿಕದಿಂದ ಬಾಂಬ್‌ ದಾಳಿ

Public TV
By Public TV
25 minutes ago
Security forces chhattisgarh
Latest

ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌ – 14 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ

Public TV
By Public TV
1 hour ago
Hindu Businessman Khokon Das Who Escaped By Jumping Into Pond After Mob Set Him Ablaze In Bangladesh Dies
Latest

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಬಲಿ – ಕಿಡಿಗೇಡಿಗಳಿಂದ ಪಾರಾಗಿದ್ದ ಉದ್ಯಮಿ ಚಿಕಿತ್ಸೆ ಫಲಕಾರಿಯಾಗದೇ ಸಾವು

Public TV
By Public TV
1 hour ago
Drunk man named Tirupati climbs atop Govindarajaswamy Temple in Tirupati demands more liquor
Latest

ಎಣ್ಣೆ ಮತ್ತಲ್ಲಿ ತಿರುಪತಿ ದೇವಸ್ಥಾನದ ಗೋಪುರ ಏರಿ ತಿರುಪತಿಯಿಂದ ಕಿರಿಕ್‌!

Public TV
By Public TV
2 hours ago
bengaluru shoot out
Bengaluru City

ಪತ್ನಿ ಕೊಲೆಗೆ ಪತಿಯ ಪ್ರೀ-ಪ್ಲಾನ್‌; ಬಿಹಾರದಲ್ಲಿ 15 ದಿನ ಗನ್ ಟ್ರೈನಿಂಗ್ – ಎರಡು ಗನ್ ತಂದು ಹೆಂಡತಿ ಹತ್ಯೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?