ಸರ್ಕಾರಿ ನೌಕರರಿಗೆ ಸಿಹಿ-ಕಹಿ ಸುದ್ದಿ

Public TV
1 Min Read
gvt

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಸರ್ಕಾರಿ ನೌಕರರ ರಜೆಯಲ್ಲಿ ಸಿಹಿ-ಕಹಿ ಸುದ್ದಿಯೊಂದು ಹೊರಬಿದ್ದಿದೆ.

ಬೇಕಾಬಿಟ್ಟಿ ರಜೆಗಳನ್ನು ಕಡಿತ ಮಾಡಲಾಗಿದೆ. ಇನ್ನು ಮುಂದೆ ಜಯಂತಿ ಗಳಿಗೆ ರಜೆ ಇಲ್ಲ. ಈ ಮೂಲಕ ಬಸವ ಜಯಂತಿ, ಕನಕ ಜಯಂತಿ, ವಾಲ್ಮೀಕಿ ಜಯಂತಿ ಸೇರಿದಂತೆ ಹಲವು ಜಯಂತಿಗಳಿಗೆ ಕತ್ತರಿ ಹಾಕಲಾಗಿದೆ. ಈ ಆದೇಶ ಮುಂದಿನ ವರ್ಷದಿಂದ ಜಾರಿಗೆ ಬರಲಿದೆ.

CM HDK 2

ಇನ್ನು ಮುಂದೆ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಕಡ್ಡಾಯ ರಜೆ ನೀಡಲಾಗುವುದು. ಜಯಂತಿಗಳ ರಜೆಯನ್ನು ಹಿಂಪಡೆದು ಬದಲಿಗೆ ಆಯಾ ಮಹಾನ್ ವ್ಯಕ್ತಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ರಜೆಯ ಕತ್ತರಿ ಹಾಕಲು ಸಿಎಂ ಅನುಮೋದಿಸಿದ್ದಾರೆ.

letter copy

Share This Article
Leave a Comment

Leave a Reply

Your email address will not be published. Required fields are marked *