ಚಂದ್ರಯಾನ ವಿಶೇಷ – ಗಣೇಶನಾದ ಇಸ್ರೋ ಅಧ್ಯಕ್ಷ ಕೆ. ಶಿವನ್

Public TV
1 Min Read
isro ganesha

ಬೆಂಗಳೂರು: ನಾಡಿನೆಲ್ಲೆಡೆ ವಿಘ್ನ ವಿನಾಶಕ ವಿಘ್ನೇಶ್ವರನ ಆರಾಧನೆ ಜೋರಾಗಿ ನಡೆಯುತ್ತಿದೆ. ನಗರದಲ್ಲಿ ಒಂದಕ್ಕಿಂತ ಒಂದು ವಿಶೇಷ, ವಿಭಿನ್ನವಾದ ಗಣೇಶಗಳು ಕಣ್ಮನ ಸೆಳೆಯುತ್ತಿವೆ.

ಅದರಲ್ಲೂ ಬೆಂಗಳೂರಿನ ಕಬ್ಬನ್ ಪೇಟೆಯ ಲಕ್ಕಿ ಬಾಯ್ಸ್ ಗಣೇಶೋತ್ಸವ ಮಂಡಳಿ ವತಿಯಿಂದ ವಿಶೇಷವಾದ ವಿನಾಯಕನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನದ ಪ್ರತಿರೂಪವಾದ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

isro ganesha 2

ಇಸ್ರೋ ಅಧ್ಯಕ್ಷ ಕೆ.ಶಿವನ್ ಗಣೇಶನ ರೂಪದಲ್ಲಿ ಕಂಗೊಳಿಸುತ್ತಿದ್ದಾರೆ. ಜೊತೆಗೆ ಚಂದ್ರನತ್ತ ಧಾವಿಸಿರುವ ಉಪಗ್ರಹವನ್ನು ಇಡಲಾಗಿದೆ. ಇದರ ಸುತ್ತ ಚಂದ್ರಯಾನದ ವಿವಿಧ ಹಂತಗಳನ್ನು ಫೋಟೋಗಳ ಮೂಲಕ ಸೆರೆ ಹಿಡಿಯಲಾಗಿದೆ. ಚಂದ್ರಯಾನಕ್ಕೆ ಯಾವುದೇ ವಿಘ್ನಗಳು ಬಾರದೇ, ಯಶಸ್ವಿಯಾಗಲೆಂದು ಗಣೇಶನ ಮೂಲಕ ಶುಭ ಹಾರೈಸುತ್ತೇವೆ ಎನ್ನುತ್ತಾರೆ ಆಯೋಜಕರು.

Share This Article
Leave a Comment

Leave a Reply

Your email address will not be published. Required fields are marked *