ನೆರೆ ಪರಿಹಾರ ವಿಳಂಬ – ತಲೆ ಬೋಳಿಸಿಕೊಂಡು 25 ಸಂಸದರ ತಿಥಿ ಕಾರ್ಯಕ್ರಮ

Public TV
1 Min Read
collage bjp

ಬೆಂಗಳೂರು: ಕೇಂದ್ರದಿಂದ ನೆರೆ ಪರಿಹಾರ ವಿಳಂಬವಾದ ಕಾರಣ ರಾಜ್ಯದ 25 ಬಿಜೆಪಿ ಸಂಸದರಿಗೆ ಇಂದು ಬೆಂಗಳೂರಿನಲ್ಲಿ ಪಿಂಡ ಪ್ರಧಾನ ಕಾರ್ಯ ಮಾಡಲಾಯಿತು.

ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಉತ್ತರ ಕರ್ನಾಟಕ ನೆರೆ ಪರಿಹಾರ ತರುವಲ್ಲಿ ಆಸಕ್ತಿ ವಹಿಸದ ಸಂಸದರ ವಿರುದ್ಧ ವಿಶಿಷ್ಟವಾಗಿ ಪ್ರತಿಭಟನೆ ಮಾಡಿದ ಕನ್ನಡಪರ ಸಂಘಟನೆಗಳು 25 ಜನ ಸಂಸದರ ಫೋಟೋ ಇಟ್ಟು ಹಾರ ಹಾಕಿ ತಿಥಿ ಕಾರ್ಯ ಮಾಡಿದರು.

bjp thithi 2

ತಿಥಿ ಕಾರ್ಯವನ್ನು ಶಾಸ್ತ್ರೋಕ್ತವಾಗಿ ಮಾಡಿ ಅರ್ಚಕರಿಂದ ಪೂಜೆ ಮಾಡಿಸಿ ಪಿಂಡ ಇಟ್ಟು ತಮ್ಮ ಆಕ್ರೋಶ ಹೊರಹಾಕಿದರು. ಇದೇ ವೇಳೆ ನೆರೆ ಪೀಡಿತ ಉತ್ತರ ಕರ್ನಾಟಕದ ಇಬ್ಬರು ತಲೆ ಬೋಳಿಕೊಳ್ಳುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು.

ಪ್ರವಾಹದಿಂದ ನಷ್ಟ ಆಗಿರುವ ಹಣ ಬಿಡುಗಡೆ ಮಾಡಿ ಎಂದರೆ ಇಲ್ಲ ಸಲ್ಲದ ಕಾರಣ ಹೇಳುತ್ತಿರುವ ಕೇಂದ್ರದ ವಿರುದ್ಧ ಅಸಮಧಾನ ಹೊರ ಹಾಕಿದ ಹೋರಾಟಗಾರರು, ರಾಜ್ಯದಲ್ಲಿ 38 ಸಾವಿರ ಕೋಟಿಯಷ್ಟು ನಾಶವಾಗಿದೆ ಆದರೆ ಕೇಂದ್ರ ಸರ್ಕಾರ 1,200 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರದ ಈ ನೀತಿ ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *