ಅಯೋಧ್ಯೆ ತೀರ್ಪು ಏನೇ ಬಂದ್ರೂ ಶಾಂತಿಯುತವಾಗಿ ಸ್ವಾಗತಿಸ್ತೀವಿ: ರೋಶನ್ ಬೇಗ್

Public TV
1 Min Read
roshan baig 1

ಬೆಂಗಳೂರು: ರಾಮ ಮಂದಿರ ಹಾಗೂ ಬಾಬ್ರಿ ಮಸೀದಿ ವಿಚಾರ ಸಾಕಾಗಿ ಹೋಗಿದೆ. ಇಂದು ಅಯೋದ್ಯೆ ತೀರ್ಪು ಏನೇ ಬಂದ್ರು ಶಾಂತಿಯುತವಾಗಿ ಸ್ವಾಗತ ಮಾಡ್ತಿವಿ ಎಂದು ಅನರ್ಹ ಶಾಸನ ರೋಶನ್ ಬೇಗ್ ಹೇಳಿದ್ದಾರೆ.

ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಮ ಮಂದಿರ ಭಾರತ ದೇಶದಲ್ಲಿ ನಿರ್ಮಾಣವಾಗದೇ ಪಾಕಿಸ್ತಾನದಲ್ಲಿ ನಿರ್ಮಾಣವಾಗುತ್ತಾ? ರಾಮ ಮಂದಿರ ಹಾಗೂ ಬಾಬ್ರಿ ಮಸಿದಿ ವಿಚಾರ ಸಾಕಾಗಿ ಹೋಗಿದೆ. ಇಂದು ಅಯೋಧ್ಯೆ ತೀರ್ಪು ಏನೇ ಬಂದ್ರು ಶಾಂತಿಯುತವಾಗಿ ಸ್ವಾಗತ ಮಾಡುವುದಾಗಿ ತಿಳಿಸಿದರು. ಇದನ್ನೂ ಓದಿ: ಒಂದೂವರೆ ಶತಮಾನದ ಅಯೋಧ್ಯೆ ವ್ಯಾಜ್ಯ ಇಂದು ಇತ್ಯರ್ಥ – ಯಾರ ವಾದ ಏನು? ಯಾವ ವರ್ಷ ಏನಾಯ್ತು?

ಕರ್ನಾಟಕದಿಂದ ಕಾಶ್ರ್ಮಿರದವರೆಗೂ ಮುಸ್ಲಿಂ ಧರ್ಮಗುರುಗಳು ಶಾಂತಿಯುತವಾಗಿ ತೀರ್ಪನ್ನ ಸ್ವಾಗತಿಸಲು ನಿರ್ಧರಿಸಿದ್ದಾರೆ. ದೇಶದಲ್ಲಿ ರಾಮ ಮಂದಿರ ನಿರ್ಮಾಣವಾಗಲಿ ಎಂದು ಎಂಟು ತಿಂಗಳ ಹಿಂದೆಯೇ ಹೇಳಿಕೆ ನೀಡಿದ್ದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *