ಡಿಸಿಎಂ ಲಕ್ಷ್ಮಣ ಸವದಿ ನಿವಾಸದಲ್ಲಿ ಹಾವು ಪ್ರತ್ಯಕ್ಷ

Public TV
1 Min Read
LAXMAN

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನಿವಾಸದಲ್ಲಿ ಹಾವು ಪ್ರತ್ಯಕ್ಷವಾಗಿದೆ. ಬೆಂಗಳೂರಿನ ಬಿಡಿಎ ಕಚೇರಿಯ ಪಕ್ಕದಲ್ಲಿ ಇರುವ ಲಕ್ಷ್ಮಣ ಸವದಿ ಅವರ ಸರ್ಕಾರಿ ನಿವಾಸದಲ್ಲಿ ನೀರಾವು ಪ್ರತ್ಯಕ್ಷವಾಗಿದೆ.

ನಿವಾಸದ ಮುಂದೆ ಇರುವ ಕಾವೇರಿ ವಾಟರ್ ಮೀಟರ್ ಬಾಕ್ಸ್ ನಲ್ಲಿ ನೀರಾವು ಹುದುಗಿ ಕುಳಿತಿದೆ. ಮನೆಕೆಲಸದವರು ಹೊರಗಡೆ ಬಂದು ನೋಡಿದಾಗ ಅದರ ತಲೆ ಕಂಡು ಹಾವು ಇರುವುದು ಪತ್ತೆಯಾಗಿದೆ. ಬಿಡಿಎ ಕಚೇರಿ ಕಡೆಯಿಂದ ಬಂದ ಹಾವು ಡಿಸಿಎಂ ನಿವಾಸದ ಹೊರಾಗಂಣ ಇರುವ ಕಾವೇರಿ ಮೀಟರ್ ಬಾಕ್ಸ್ ನಲ್ಲಿ ಹಾವು ಸೇರಿಕೊಂಡಿದೆ ಎಂದು ಮೆನೆಕೆಲಸದವರು ತಿಳಿಸಿದ್ದಾರೆ.

Laxman savadi

ಹಾವು ಇರುವುದನ್ನ ಮನಗಂಡ ಮನೆ ಕೆಲಸದವರು ರಕ್ಷಣೆಗಾಗಿ ಉರಗ ತಜ್ಞರಿಗೆ ಕರೆ ಮಾಡಿದ್ದಾರೆ. ಉರಗ ತಜ್ಞ ಮೋಹನ್ ನೀರಾವನ್ನ ರಕ್ಷಣೆ ಮಾಡಿದ್ದಾರೆ. ಎರಡೂವರೆ ಅಡಿ ಉದ್ದ ಇರುವ ನೀರಾವನ್ನ ಮೋಹನ್ ರಕ್ಷಣೆ ಮಾಡಿ ಕೆರೆಗೆ ಬಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *