Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೊರಿಯಾಗೆ ಕಳುಹಿಸಿದ ಸ್ವಾರಸ್ಯಕರ ಕಥೆ ಹೇಳಿದ್ರು ಡಿ.ಕೆ ಶಿವಕುಮಾರ್
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಕೊರಿಯಾಗೆ ಕಳುಹಿಸಿದ ಸ್ವಾರಸ್ಯಕರ ಕಥೆ ಹೇಳಿದ್ರು ಡಿ.ಕೆ ಶಿವಕುಮಾರ್

Public TV
Last updated: August 20, 2021 3:32 pm
Public TV
Share
3 Min Read
DKSHI 6
SHARE

– ರಾಜೀವ್ ಗಾಂಧಿ ದೇಶಕ್ಕೆ ಉತ್ತಮ ಅಡಿಪಾಯ ಹಾಕಿದ್ರು

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಮ್ಮನ್ನು ರಾಜೀವ್ ಗಾಂಧಿಯವರು ಕೊರಿಯಾಗೆ ಕಳುಹಿಸಿದ ಸ್ವಾರಸ್ಯಕರ ಕಥೆಯೊಂದನ್ನು ಇಂದು ಬಿಚ್ಚಿಟ್ಟರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕೊರಿಯಾಗೆ ಹೋಗಲು ನನ್ನನ್ನು ರಾಜೀವ್ ಗಾಂಧಿ ಸೆಲೆಕ್ಟ್ ಮಾಡಿದ್ದರು. ಆಗ ನಮ್ಮ ರಾಜ್ಯದ 5 ಮಂದಿ ಸಂಸದರು ನನ್ನ ವಿರುದ್ಧ ಇವನು ಗೂಂಡಾ ಅವರನ್ನು ಕಳಿಸಬೇಡಿ ಅಂತ ರಾಜೀವ್ ಗಾಂಧಿಗೆ ದೂರು ಹೇಳಿದ್ರು. ಆಗ ರಾಜೀವ್ ಗಾಂಧಿಯವರು ನನ್ನ ಬಗ್ಗೆ ಮಾಹಿತಿ ತರಿಸಿಕೊಂಡು ವಿವಾದಿತ ವ್ಯಕ್ತಿಗಳೇ ಮುಂದೆ ಬೆಳೆಯೋದು ಅಂತ ದೂರು ಕೊಟ್ಟವರಿಗೆ ಹೇಳಿ ನನ್ನನ್ನ ಕೊರಿಯಾಗೆ ಕಳಿಸಿದ್ರು ಎಂದು ಸ್ವಾರಸ್ಯಕರವಾದ ಕಥೆಯನ್ನು ಹೇಳಿದರು.

DKSHI 4

ವಿರೇಂದ್ರ ಪಾಟೀಲ್ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಬೇಕು ಅಂತ ರಾಜೀವ್ ಗಾಂಧಿಗೆ ಇರಲಿಲ್ಲ. ವೀರೇಂದ್ರ ಪಾಟೀಲ್ ಅವ್ರ ಆರೋಗ್ಯ ಸರಿ ಇಲ್ಲದ ಕಾರಣ ಆ ನಿರ್ಧಾರ ತೆಗೆದುಕೊಂಡ್ರು. ನಂತರ ಬಂಗಾರಪ್ಪ ಅವರನ್ನ ಸಿಎಂ ಮಾಡಿದರು. ಬಂಗಾರಪ್ಪ ಅವ್ರಿಗೆ ನಿಮ್ಮ ಕ್ಯಾಬಿನೆಟ್ ನಲ್ಲಿ ಪ್ರತಿ ಜಾತಿ, ವರ್ಗದಿಂದ ಒಬ್ಬೊಬ್ಬರಿಗೆ ಯುವಕರಿಗೆ ಅವಕಾಶ ಕೊಡಬೇಕು ಅಂತ ಹೇಳಿದ್ರು. ಆಗ ನಾನು ಕೂಡ ಮಂತ್ರಿ ಆದೆ ಎಂದರು. ಇದನ್ನೂ ಓದಿ: ವಧು, ವರರಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟ ಹಾಸ್ಯ ನಟ

DKShivakumar 1

ರಾಜೀವ್ ಗಾಂಧಿ ಪ್ರಧಾನಿ ಆದ ಮೇಲೆ 63 ಜನಕ್ಕೆ ಮೊದಲ ಬಾರಿಗೆ ಯುವಕರಿಗೆ ಟಿಕೆಟ್ ಕೊಟ್ಟರು. ಯುವಕರಿಗೆ ಶಕ್ತಿ ತಂದು ಕೊಟ್ಟವರೇ ರಾಜೀವ್ ಗಾಂಧಿ. ಯುವಕರಿಗೆ 18 ವರ್ಷಕ್ಕೆ ಮತದಾನದ ಹಕ್ಕನ್ನು ಕೊಟ್ಟಾಗ ಭಾರೀ ವಿರೋಧ ಮಾಡಿದರು. ಆದರೂ ಮತದಾನದ ಹಕ್ಕನ್ನು ಯುವಕರಿಗೆ ಕೊಟ್ಟರು. ರಾಜೀವ್ ಗಾಂಧಿಯವರು ಪಂಚಾಯ್ತಿಯಲ್ಲಿ ಮೀಸಲಾತಿ ಕೊಟ್ಟವರು. ದೂರಸಂಪರ್ಕದಲ್ಲಿ ಕ್ರಾಂತಿ ಮಾಡಿದವರು. ಕಂಪ್ಯೂಟರ್ ಕ್ರಾಂತಿ ಮಾಡಿದರು. ಹೊಸ ಶಿಕ್ಷಣ ನೀತಿ ತಂದರು. ಒಟ್ಟಿನಲ್ಲಿ ಈ ದೇಶಕ್ಕೆ ಉತ್ತಮ ಅಡಿಪಾಯವನ್ನು ರಾಜೀವ್ ಗಾಂಧಿ ಹಾಕಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ:  48 ವರ್ಷಗಳಾದ್ರೂ ಲಕ ಲಕ ಹೊಳೆಯುತ್ತಿದೆ ದೇವರಾಜ ಅರಸು ಬಳಸಿದ ಬೆಂಜ್ ಕಾರು

DKSHI 3

ಇತ್ತೀಚೆಗೆ ಒಂದು ಸಮೀಕ್ಷೆ ಬಂದಿದೆ. ಮೋದಿ ಅವ್ರ ಜನಪ್ರಿಯತೆ ಇಂದು ಕಡಿಮೆ ಆಗಿದೆ. ಈಗ ನಿಮ್ಮ ಮನೆ ಬಾಗಿಲಿಗೆ ಅವಕಾಶ ಬಂದಿದೆ. ಅದನ್ನ ನಾವೆಲ್ಲ ಬಳಸಿಕೊಳ್ಳಬೇಕು. ಹೊಸ ಯುಗ ಬಂದಿದೆ. ನಾವೆಲ್ಲ ಒಟ್ಟಾಗಿ ಕೆಲಸ ಮಾಡೋಣ. ನಾವೆಲ್ಲ ಕಾರ್ಯಕರ್ತರಾಗಿ ದುಡಿಯೋಣ. ಯಾರೂ ಇಲ್ಲಿ ನಾಯಕರಲ್ಲ. ಮೊದಲು ನಾವು ಕಾರ್ಯಕರ್ತರು. ಕಾರ್ಯಕರ್ತರಾಗಿ ಕೆಲಸ ಮಾಡೋಣ. ಪಕ್ಷವನ್ನ ಅಧಿಕಾರಕ್ಕೆ ತರಲು ಕೆಲಸ ಮಾಡೋಣ. ಮುಂದೆ ಸ್ವಾತಂತ್ರ್ಯ ಹೋರಾಟಗಾರರು, ಕೋವಿಡ್ ನಿಂದ ಸತ್ತವರ ಮನೆಗೆ ಹೋಗೋಣ. ಮುಂದಿನ ಅಧಿವೇಶನ ದಲ್ಲಿ ಕೋವಿಡ್ ನಿಂದ ಸತ್ತವರ ಪರ ಹೋರಾಡ ಕೆಲಸ ಮಾಡೋಣ. ಬಿಜೆಪಿ ಸರ್ಕಾರ ಒಂದೇ ಒಂದು ಜನ ಪರ ಕೆಲಸ ಮಾಡಿಲ್ಲ. ಜನರಿಗೆ ಲಸಿಕೆ, ಬೆಡ್, ಔಷಧಿ ಕೊಡಲು ಆಗದ ಈ ಸರ್ಕಾರ ಕಿತ್ತು ಹಾಕಬೇಕು. ಈ ನಿಟ್ಟಿನಲ್ಲಿ ನಾವೆಲ್ಲರು ಕೆಲಸ ಮಾಡಬೇಕು. ಬ್ಲ್ಯಾಕ್ ಮಟ್ಟದಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಇದೇ ವೇಳೆ ಡಿಕೆಶಿ ಕರೆ ನೀಡಿದರು.

ಇದೇ ವೇಳೆ ಪೊಲೀಸರಿಗೆ ಎಚ್ಚರಿಕೆ ಕೊಟ್ಟ ಡಿಕೆಶಿ, ಪೊಲೀಸರು ನಮಗೆ ಕಾರ್ಯಕ್ರಮ ಮಾಡಲು ಅವಕಾಶ ಕೊಡಲ್ಲ ಅಂದ್ರು. ಬಿಜೆಪಿಯವರು ಜನಾಶೀರ್ವಾದ ಯಾತ್ರೆ ಮಾಡ್ತಿದ್ದಾರೆ. ಅವ್ರಿಗೊಂದು ನಿಯಮ ನಮಗೊಂದು ನಿಯಮನಾ?, ಜನಾಶೀರ್ವಾದ ಯಾತ್ರೆಯಲ್ಲಿ ಎಸ್ಪಿ ಇದ್ದರು ಗುಂಡು ಹಾರಿಸಿದ್ರು. 3 ಜನ ಪೇದೆಗಳನ್ನ ಸಸ್ಪೆಂಡ್ ಮಾಡಿದ್ರು. ಸಿಎಂ ಅವ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಂತಹ ದೊಡ್ಡ ಸಾಧನೆ ಮಾಡಿದ್ದಾರೆ. ಪೊಲೀಸರು ಹೀಗೆ ಮಾಡಿದ್ರೆ ನಾವು ಪೊಲೀಸರ ವಿರುದ್ಧವೇ ಹೋರಾಟ ಮಾಡಬೇಕಾಗುತ್ತೆ. ಒಬ್ಬೆ ಒಬ್ಬ ನಾಯಕರನ್ನು ಪೊಲೀಸರು ಬಂಧನ ಮಾಡಿಲ್ಲ. ಇದ್ಯಾವ ನ್ಯಾಯ. ಹೀಗೆ ಮಾಡಿದ್ರೆ ಪೊಲೀಸರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತೆ ಎಂದರು.

Share This Article
Facebook Whatsapp Whatsapp Telegram
Previous Article GADIKESHWARA ಗಡಿಕೇಶ್ವಾರದಲ್ಲಿ ಕಂಪಿಸಿದ ಭೂಮಿ
Next Article DVG duplicate ghee ಬೆಣ್ಣೆ ನಗರಿಯಲ್ಲಿ ಕಲಬೆರಕೆ ಬೆಣ್ಣೆ ಮಾರಾಟ ದಂಧೆ- ಓರ್ವ ಅರೆಸ್ಟ್

Latest Cinema News

kantara chapter 1 J.NTR
ಕಾಂತಾರ ಚಾಪ್ಟರ್-1 ಹೈದರಾಬಾದ್ ಪ್ರೀ-ರಿಲೀಸ್ ಇವೆಂಟ್‌ಗೆ Jr.NTR ಸಾಥ್
Cinema Latest Sandalwood Top Stories
jockey movie
‘ಮಡ್ಡಿ’ ಸಿನಿಮಾ ನಿರ್ದೇಶಕರ ಹೊಸ ಸಾಹಸ – ಟಗರು ಕಾಳಗ ಹಿನ್ನೆಲೆ ಮೋಷನ್ ಪೋಸ್ಟರ್
Cinema Latest Sandalwood Top Stories
Sri Murali
ಐತಿಹಾಸಿಕ ಚಿತ್ರದಲ್ಲಿ ನಟ ಶ್ರೀಮುರಳಿ
Cinema Latest Sandalwood
Anjali Sudhakar 3
ʻಲಕ್ಷ್ಮಿ ನಿವಾಸʼದಿಂದ ಹೊರನಡೆದ ಅಂಜಲಿ – ಕಾರಣವೇನು?
Cinema Latest TV Shows
Garden Movie
ದರ್ಶನ್ ಅಳಿಯ ಟಕ್ಕರ್ ಮನೋಜ್‌ರ `ಗಾರ್ಡನ್’ ಸಿನಿಮಾಗೆ ದಿನಕರ್ ಕ್ಲ್ಯಾಪ್
Cinema Latest Sandalwood Top Stories

You Might Also Like

Karnataka Caste census
Bengaluru City

ಜಾತಿ ಗಣತಿಗೆ ನೂರೆಂಟು ವಿಘ್ನ – ಡೆಡ್‌ಲೈನಲ್ಲಿ ಸಮೀಕ್ಷೆ ಮುಗಿಯೋದು ಡೌಟ್

20 minutes ago
Chaitanyananda Saraswati Swamiji
Court

ಸ್ವಾಮಿ ಚೈತನ್ಯಾನಂದ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

45 minutes ago
suryakumar yadav
Cricket

ಪಹಲ್ಗಾಮ್‌ ಸಂತ್ರಸ್ತರು, ಭಾರತೀಯ ಸೇನೆಗೆ ಗೆಲುವು ಅರ್ಪಣೆ ಎಂದ ಸೂರ್ಯಗೆ ದಂಡ ವಿಧಿಸಿದ ಐಸಿಸಿ

1 hour ago
North Karnataka Rain 1
Districts

ಉತ್ತರ ಕರ್ನಾಟಕದಲ್ಲಿ ವರುಣನ ಅಬ್ಬರ – ಭೀಮಾತೀರದಲ್ಲಿ ಪ್ರವಾಹ ಸ್ಥಿತಿ

2 hours ago
Mukaleppa Marriage Controversy Gayathri Mother
Dharwad

ಹಾಲ್‌ನಲ್ಲಿ ಮದ್ವೆಯಾಗದಿದ್ರೂ ಸುಳ್ಳು ದಾಖಲೆ ಸೃಷ್ಟಿ – ಯೂಟ್ಯೂಬರ್ ಮುಕುಳೆಪ್ಪನ ಜೊತೆ ಅಧಿಕಾರಿಗಳನ್ನು ಬಂಧಿಸುವಂತೆ ಆಗ್ರಹ

2 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?