ನೀವುಗಳೇ ಕುಳಿತು ಮಾತನಾಡಿ ಆನಂತ್ರ ಇಲ್ಲಿಗೆ ಬನ್ನಿ ಎಂದ ಕೈ ಹೈಕಮಾಂಡ್!

Public TV
1 Min Read
SONIA GANDHI

ಬೆಂಗಳೂರು: ಮೊದಲು ರಾಜ್ಯದಲ್ಲಿ ನೀವುಗಳು ಕುಳಿತು ಮಾತನಾಡಿ. ಆನಂತರ ದೆಹಲಿಗೆ ಬನ್ನಿ ಎಂದು ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಕೈ ನಾಯಕರಿಗೆ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ನಿವಾಸದಲ್ಲಿ ಇಂದು ಕಾಂಗ್ರೆಸ್ ಹಿರಿಯ ನಾಯಕರ ಸಭೆ ನಡೆಯಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆ ಡಿ.ಕೆ ಶಿವಕುಮಾರ್ ಸೇರಿದಂತೆ ಒಟ್ಟು 21 ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

Parameshwar

ಸಂಜೆ 4 ಗಂಟೆಗೆ ಸದಾಶಿವ ನಗರದ ಪರಮೇಶ್ವರ್ ನಿವಾಸದಲ್ಲಿ ಹೈ ಕಮಾಂಡ್‍ನ ಸೂಚನೆ ಮೇರೆಗೆ ಸಭೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ, ಸಿಎಲ್‍ಪಿ ನಾಯಕ ಹಾಗೂ ವಿಪಕ್ಷ ನಾಯಕನ ಸ್ಥಾನಕ್ಕೆ ಇನ್ನೂ ಒಂದು ವಾರದಲ್ಲಿ ಆಯ್ಕೆ ನಡೆಯಲಿದೆ.

ಅದಕ್ಕೆ ಪೂರ್ವ ಭಾವಿಯಾಗಿ ರಾಜ್ಯ ನಾಯಕರುಗಳು ಒಟ್ಟಾಗಿ ಕುಳಿತು ಒಮ್ಮತದ ತೀರ್ಮಾನದೊಂದಿಗೆ ದೆಹಲಿಗೆ ಬನ್ನಿ ಎಂದು ಹೈ ಕಮಾಂಡ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸಂಜೆ ಪರಮೇಶ್ವರ್ ನಿವಾಸದಲ್ಲಿ ಎಲ್ಲಾ ಹಿರಿಯ ನಾಯಕರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *